ಆ್ಯಪ್ನಗರ

ನಾಳೆಯಿಂದ ಶ್ರೀಂಗೇರಿ ಶ್ರೀಗಳ ವಿಜಯ ಯಾತ್ರೆ

ಶ್ರಿಂಗೇರಿಯ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಪೀಠದ ಪೀಠಾಧಿಪತಿ ವಿಧುಶೇಖರ ಭಾರತೀ ಸನ್ನಿದಾನಂಗಳವರು ನ.19 ರಿಂದ 21 ರವರೆಗೆ ಕಲಬುರಗಿ ನಗರದಲ್ಲಿ ವಿಜಯ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ ತಿಳಿಸಿದರು.

Vijaya Karnataka 18 Nov 2018, 5:00 am
ಕಲಬುರಗಿ :ಶ್ರಿಂಗೇರಿಯ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಪೀಠದ ಪೀಠಾಧಿಪತಿ ವಿಧುಶೇಖರ ಭಾರತೀ ಸನ್ನಿದಾನಂಗಳವರು ನ.19 ರಿಂದ 21 ರವರೆಗೆ ಕಲಬುರಗಿ ನಗರದಲ್ಲಿ ವಿಜಯ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ ತಿಳಿಸಿದರು.
Vijaya Karnataka Web sri sri reddys victory from tomorrow
ನಾಳೆಯಿಂದ ಶ್ರೀಂಗೇರಿ ಶ್ರೀಗಳ ವಿಜಯ ಯಾತ್ರೆ


ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 19 ರಂದು ಸಂಜೆ 4.30ಕ್ಕೆ ಎಸ್‌ವಿಪಿ ವೃತ್ತದಲ್ಲಿ ಶ್ರೀಗಳಿಗೆ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುತ್ತದೆ. ನಂತರ ನೂತನ ವಿದ್ಯಾಲಯ ಸಂಸ್ಥೆಯ ಮೈದಾನದ ವರಗೆ ಶೋಭಾಯಾತ್ರೆ ನಡೆಯಲಿದೆ. ಸಂಜೆ 6.30ಕ್ಕೆ ಧೂಳಿ ಪಾದಪೂಜೆ, ಪ್ರಾರ್ಥನೆ ಮತ್ತು ಸಾರ್ವಜನಿಕರಿಂದ ಸನ್ಮಾನ ನಡೆಯಲಿದೆ. ರಾತ್ರಿ 9 ಕ್ಕೆ ಶ್ರೀಗಳಿಂದ ಶಂಕರಮಠದಲ್ಲಿ ಚಂದ್ರಮೌಳೇಶ್ವರ ಪೂಜೆ ನೆರವೇರಲಿದೆ. ನಂತರ ಭಕ್ತರಿಂದ ಪಾದುಕಾ ಪೂಜೆ ನಡೆಯಲಿದೆ ಎಂದರು.

ನ.20 ರಂದು ಬೆಳಗ್ಗೆ 8.30 ರಿಂದ 10 ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನಂತರ ಶ್ರೀಗಳ ದರ್ಶನ, ಮಂತ್ರಾಕ್ಷತೆ, ಭಕ್ತಾದಿಗಳಿಂದ ಪಾದುಕಾ ಪೂಜೆ ನೆರವೇರಲಿವೆ. ಮಧ್ಯಾಹ್ನ 1 ಕ್ಕೆ ಸಂಗಮೇಶ್ವರ ಸಭಾಗೃಹದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸಂಜೆ 6 ಕ್ಕೆ ಎನ್‌.ವಿ.ಮೈದಾನದಲ್ಲಿ ಶಂಕರಾಚಾರ್ಯರ ಅಷ್ಟೋತ್ತರ ಶತನಾಮ ಪಾರಾಯಣ ಹಾಗೂ ಸೌಂದರ್ಯ ಲಹರಿ ಸ್ತೋತ್ರ ಸಮರ್ಪಣೆ ನಡೆಯಲಿದೆ ಎಂದು ತಿಳಿಸಿದರು.

ನ.21 ರಂದು ಬೆಳಗ್ಗೆ 10 ಕ್ಕೆ ಶ್ರೀಗಳ ದರ್ಶನ ನಡೆಯಲಿದೆ. ನಂತರ ಮಂತ್ರಾಕ್ಷತೆ, ಪಾದುಕಾ ಪೂಜೆ, ಬೀಕ್ಷಾ ವಂದನೆ ನಡೆಯಲಿದೆ. ಸಂಜೆ ಶ್ರೀಗಳಿಗೆ ಭಕ್ತಪೂರ್ವಕ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ ಎಂದರು.

ಬಿ.ಎಚ್‌.ಕುಲಕರ್ಣಿ, ಮುರಳಿಧರರಾವ್‌, ಪ್ರಹ್ಲಾದ ಪೂಜಾರಿ, ದಯಾಘನ ಧಾರವಾಡಕರ್‌ ಇದ್ದರು.

ವೈದಿಕ ಧರ್ಮ ಪ್ರಚಾರದ ಭಾಗ

ಶಂಕರಾಚಾರ್ಯರು ದೇಶದಲ್ಲಿ ದಿಗ್ವಿಜಯಯಾತ್ರೆ ಕೈಗೊಂಡು ವೈಧಿಕ ಧರ್ಮವನ್ನು ಪ್ರಚಾರ ಮಾಡಿದ್ದರು. ದೇಶದಲ್ಲಿ ನಾಲ್ಕು ದಿಕ್ಕುಗಳಲ್ಲಿ ಶಂಕರ ಪೀಠಗಳನ್ನು ಸ್ಥಾಪಿಸಿದರು. ದಕ್ಷಿಣದಲ್ಲಿ ಶೃಂಗೇರಿ, ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕೆ ಮತ್ತು ಉತ್ತರದಲ್ಲಿ ಬದರಿ ಪೀಠಗಳನ್ನು ಸ್ಥಾಪಿಸಿದ್ದರು. ಈ ಧರ್ಮ ಪೀಠಗಳು ಇಂದಿಗೂ ಸಕ್ರಿಯವಾಗಿ ಧರ್ಮ ಪ್ರಚಾರವನ್ನು ಮಾಡುತ್ತಿವೆ. ಇದರ ಭಾಗವಾಗಿ ಶೃಂಗೇರಿ ಪೀಠದ ಕಿರಿಯ ಶ್ರೀ ವಿಧುಶೇಖರ ಭಾರತಿ ಸನ್ನಿದಾನಂಗಳವರು ವಿಜಯ ಯಾತ್ರೆ ಕೈಗೊಂಡಿದ್ದಾರೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ