ಆ್ಯಪ್ನಗರ

ಮುಕ್ತ ಮಾರುಕಟ್ಟೆ ಖರೀದಿ ನಿಲ್ಲಿಸಿ:21ರಿಂದ ಅಹೋರಾತ್ರಿ ಧರಣಿ

ರಾಜ್ಯ ಸರಕಾರ ರೈತರಿಗೆ ಬೀಜ ನಿಗಮದಿಂದಲೇ ಪ್ರಮಾಣಿಕೃತ ಬೀಜಗಳನ್ನು ಪೂರೈಕೆ ಮಾಡಬೇಕು. ಅದಕ್ಕಾಗಿ ಮಹಾರಾಷ್ಟ್ರ ಮಾದರಿ ಅನುಸರಿಸಬೇಕು ಎಂದು ಒತ್ತಾಯಿಸಿ ಜೂ. 21ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಹೈದ್ರಾಬಾದ್‌ ಕರ್ನಾಟಕ ಪ್ರಮಾಣಿತ ಬೀಜೋತ್ಪಾದಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹರಸೂರ ಹಾಗೂ ಸಂಘದ ಸದಸ್ಯ ಮತ್ತು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬಸವರಾಜ್‌ ಇಂಗಿನ್‌ ಹೇಳಿದರು.

Vijaya Karnataka 21 Jun 2019, 5:00 am
ಕಲಬುರಗಿ :
ರಾಜ್ಯ ಸರಕಾರ ರೈತರಿಗೆ ಬೀಜ ನಿಗಮದಿಂದಲೇ ಪ್ರಮಾಣಿಕೃತ ಬೀಜಗಳನ್ನು ಪೂರೈಕೆ ಮಾಡಬೇಕು. ಅದಕ್ಕಾಗಿ ಮಹಾರಾಷ್ಟ್ರ ಮಾದರಿ ಅನುಸರಿಸಬೇಕು ಎಂದು ಒತ್ತಾಯಿಸಿ ಜೂ. 21ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಹೈದ್ರಾಬಾದ್‌ ಕರ್ನಾಟಕ ಪ್ರಮಾಣಿತ ಬೀಜೋತ್ಪಾದಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹರಸೂರ ಹಾಗೂ ಸಂಘದ ಸದಸ್ಯ ಮತ್ತು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬಸವರಾಜ್‌ ಇಂಗಿನ್‌ ಹೇಳಿದರು.
Vijaya Karnataka Web stop free market purchase ahoratri dharani from 21st
ಮುಕ್ತ ಮಾರುಕಟ್ಟೆ ಖರೀದಿ ನಿಲ್ಲಿಸಿ:21ರಿಂದ ಅಹೋರಾತ್ರಿ ಧರಣಿ


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಕಂಪನಿಗಳು ತಯಾರು ಮಾಡಿರುವ ಬೀಜಗಳು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅವುಗಳನ್ನು ಖರೀದಿ ಮಾಡಿ ಬಳಕೆ ಮಾಡಿದ ರೈತರು ಮೋಸ ಹೋಗಿದ್ದಾರೆ. ಇದಕ್ಕೆ ಪರಿಹಾರ ಕೊಡಲು ಸಾಧ್ಯವಾವುದಿಲ್ಲ ಎಂದು ಸರಕಾರ ಮತ್ತು ನ್ಯಾಯಾಲಯಗಳು ಹಲವು ಪ್ರಕರಣದಲ್ಲಿ ಕೈ ಚೆಲ್ಲಿವೆ. ಇದರಿಂದ ರೈತರಿಗೆ ನಷ್ಟವಾಗಿದೆ. ಆದ್ದರಿಂದ ಇಂತಹ ಸಂಕಷ್ಟದಿಂದ ಪಾರು ಮಾಡಲು ನೇರವಾಗಿ ಸರಕಾರ ಬೀಜ ನಿಗಮದ ಮೂಲಕವೇ ಎಲ್ಲ ಬೀಜಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಖಾಸಗಿ ಉತ್ಪಾದಕರ ಬೀಜಗಳನ್ನು ನಿಗಮವೂ ಪ್ರಮಾಣೀಕರಿಸಿ, ಖಾತರಿ ಮಾಡಬೇಕು. ಯಾವುದೇ ಹಂತದಲ್ಲಿ ಬೀಜಗಳು ನಿಗಮದ ಮೂಲಕವೇ ರೈತರಿಗೆ ದೊರೆಯಬೇಕು ಎಂದ ಅವರು, ಕೃಷಿ ಇಲಾಖೆಯವರು ಮುಕ್ತ ಮಾರುಕಟ್ಟೆಯಲ್ಲಿ ಬೀಜ ಖರೀದಿಸುವುದು ಕೈಬಿಟ್ಟು, ಬೀಜ ನಿಗಮದಿಂದಲೇ ಬೀಜ ವಿತರಿಸುವ ವ್ಯವಸ್ಥೆ ಮಾಡಬೇಕು. ಖಾಸಗಿ ಕಂಪೆನಿಗಳು ತಯಾರಿಸಲ್ಪಟ್ಟ ಕಳಪೆ ಬೀಜಗಳಿಂದ ರೈತರು ಮೋಸಗೊಳಗಾಗುತ್ತಿದ್ದಾರೆ. ಇಡೀ ಒಂದು ವರ್ಷದ ರೈತರ ಆದಾಯಕ್ಕೆ ಖೋತಾ ಬೀಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮಹಾರಾಷ್ಟ್ರದಲ್ಲಿ ಬೀಜ ನಿಗಮ, ಖಾಸಗಿ ಕಂಪನಿಗಳ ಎಲ್ಲ ಬೀಜವನ್ನು ತಾನೇ ಪ್ರಮಾಣೀಕರಿಸಿ ರೈತರಿಗೆ ಹಾಗೂ ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಇದರಿಂದ ಭರವಸೆ ಸಿಗುತ್ತದೆ ಎಂದರು.

ರೈತರು ಬೆಳೆದ ಬೀಜ ಮಾದರಿಗೆ ಎಂಎಸ್‌ಪಿ ದರಕ್ಕೆ ಶೇ. 25ರಷ್ಟು ಹೆಚ್ಚಿನ ದರ ನಿಗದಿ ಪಡಿಸಬೇಕು. ನಿಗಮಕ್ಕೆ ಸಲ್ಲಿಸಿದ ಬೀಜಗಳು ಸಂಸ್ಕರಣೆ ಮಾಡುವಾಗ ಶೇ.25ರಷ್ಟು ನಷ್ಟ ಹೊಂದುತ್ತಿದೆ. ಇದನ್ನು ಸರಿದೂಗಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ವಾರದಲ್ಲಿ ಹಣ ಕೊಡಿ

2017ರ ಸಾಲಿನಲ್ಲಿ ಕೇಂದ್ರ ಸರ್ಕಾರ ಬೀಜಗಳಿಗೆ ಕೊಡಲಾದ ಪ್ರೋತ್ಸಾಹ ಧನ ಈಗಾಗಲೇ ರಾಜ್ಯ ಸರಕಾರಕ್ಕೆ 7 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ಬೀಜೋತ್ಪಾದಕರಿಗೆ ಸಂದಾಯ ಆಗಿರುವುದಿಲ್ಲ, ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ವಾರದೊಳಗೆ ಹಣ ಸಂದಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ತೊಗರಿ, ಕಡಲೆ ಮತ್ತು ಜೋಳ ಬೆಳೆದ ಬೀಜವನ್ನು ನಿಗಮಕ್ಕೆ ಒಪ್ಪಿಸಲಾಗಿದೆ. ಆದರೆ ಅಂತಿಮ ಬಿಲ್ಲು ಪಾವತಿಸಿರುವುದಿಲ್ಲ ಎಂದರು.

ಈಗಾಗಲೇ ಮುಂಗಾರು ಮಳೆ ಕೊರತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲೂ ವೈಜ್ಞಾನಿಕವಾದ ಮೋಡ ಬಿತ್ತನೆ ಕ್ರಮಕ್ಕೆ ರಾಜ್ಯ ಸರಕಾರ ಮುತುರ್ವಜಿ ವಹಿಸಬೇಕು. ರಾಜ್ಯ ಬೀಜ ನಿಗಮದ ನೀತಿ ನಿಯಮಗಳು ಬದಲಾಗಬೇಕು. ಬೀಜೋತ್ಪಾದಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು. ಎಂ.ಎಸ್‌.ಪಾಟೀಲ್‌ ನರಿಬೋಳ ಅಶೋಕ ನಾಸಿ, ಅಂಬರೀಶ ಸಜ್ಜನ, ಮತ್ತಿತರರಿದ್ದರು.

ಸಿಎಂಗೆ ಮುತ್ತಿಗೆ

ನಮ್ಮ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಕಿವಿಗೊಡದೆ ಇದ್ದರೆ ಅವರು ಗ್ರಾಮ ವಾಸ್ತವ್ಯ ಮಾಡಲು ಪ್ರಯಾಣಿಸುವ ಹಾದಿಯಲ್ಲಿ ಅವರನ್ನು ಮುತ್ತಿಗೆ ಹಾಕಿ ಪ್ರತಿಭಟಿಸಲು ಕೂಡ ನಾವು ಹಿಂಜರಿಯುವುದಿಲ್ಲ. ಬೀಜ ನಿಗಮಕ್ಕೆ 50 ಕೋಟಿ ರೂ. ಆವರ್ತನಿಧಿ ಸ್ಥಾಪನೆ ಮಾಡಬೇಕು. ಬೀಜದ ಪ್ರೋತ್ಸಾಹ ಧನ 7 ಕೋಟಿ ಬಿಡುಗಡೆ ಆಗಿದ್ದರೂ, ರಾಜ್ಯ ಸರಕಾರ ಕೂಡಲೇ ಕೊಡಬೇಕು.

- ಬಸವರಾಜ್‌ ಇಂಗಿನ್‌ ಸದಸ್ಯರು, ಬೀಜೋತ್ಪಾದಕರ ಸಂಘ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ