ಆ್ಯಪ್ನಗರ

ಅಧ್ಯಯನಶೀಲತೆ ಕೀಳರಿಮೆಯ ಶತ್ರು

ಯಾವ ವ್ಯಕ್ತಿಯಲ್ಲಿಅಧ್ಯಯನ ಮತ್ತು ಜ್ಞಾನದ ಕೊರತೆ ಇರುತ್ತದೋ ಆತನ ಮನಸ್ಸಿನಾಳದಲ್ಲಿಕೀಳರಿಮೆ ಬೇರು ಬಿಟ್ಟಿರುತ್ತದೆ. ಹೀಗಾಗಿ, ಅಧ್ಯಯನಶೀಲ ಗುಣ ಅಳವಡಿಸಿಕೊಂಡರೆ ಕೀಳರಿಮೆ ತನ್ನಂತಾನೆ ದೂರವಾಗುತ್ತದೆ ಎಂದು ವೈದ್ಯಕೀಯ ಲೇಖಕ ಡಾ.ನಾ.ಸೋಮೇಶ್ವರ ಕಿವಿಮಾತು ಹೇಳಿದರು.

Vijaya Karnataka 16 Nov 2019, 9:52 pm
ಕಲಬುರಗಿ:ಯಾವ ವ್ಯಕ್ತಿಯಲ್ಲಿಅಧ್ಯಯನ ಮತ್ತು ಜ್ಞಾನದ ಕೊರತೆ ಇರುತ್ತದೋ ಆತನ ಮನಸ್ಸಿನಾಳದಲ್ಲಿಕೀಳರಿಮೆ ಬೇರು ಬಿಟ್ಟಿರುತ್ತದೆ. ಹೀಗಾಗಿ, ಅಧ್ಯಯನಶೀಲ ಗುಣ ಅಳವಡಿಸಿಕೊಂಡರೆ ಕೀಳರಿಮೆ ತನ್ನಂತಾನೆ ದೂರವಾಗುತ್ತದೆ ಎಂದು ವೈದ್ಯಕೀಯ ಲೇಖಕ ಡಾ.ನಾ.ಸೋಮೇಶ್ವರ ಕಿವಿಮಾತು ಹೇಳಿದರು.
Vijaya Karnataka Web studyability is the enemy of inferiority
ಅಧ್ಯಯನಶೀಲತೆ ಕೀಳರಿಮೆಯ ಶತ್ರು


ಜಸ್ಟಿಸ್‌ ಶಿವರಾಜ ವಿ.ಪಾಟೀಲ ಫೌಂಡೇಶನ್‌ (ರಿ) ಮತ್ತು ವಿದ್ಯಾರ್ಥಿ ಸೇವಾ ಪ್ರತಿಷ್ಠಾನ ಹಾಗೂ ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿಬಂಗರಗಾ ಕಲ್ಯಾಣ ಮಂಟಪದಲ್ಲಿಹಮ್ಮಿಕೊಂಡಿದ್ದ 'ಯಶಸ್ಸಿನ ಗುಟ್ಟು - ವಿಜ್ಞಾನ ರಸಪ್ರಶ್ನೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿಯಾರೂ ದಡ್ಡರಲ್ಲ. ಪ್ರತಿಯೊಬ್ಬರೂ ಬುದ್ಧಿವಂತರೇ ಆಗಿರುತ್ತಾರೆ. ತಾನು ದಡ್ಡ ಎಂಬ ಕೀಳರಿಮೆ ಇದ್ದರೆ ಅದನ್ನು ಮೊದಲು ಮನಸ್ಸಿನಿಂದ ಕಿತ್ತೊಗೆಯಬೇಕು ಎಂದು ಸಲಹೆ ನೀಡಿದರು.

ಮನುಷ್ಯ ಪಕ್ಷಪಾತ ಮಾಡಬಹುದು. ಆದರೆ, ಪ್ರಕೃತಿ ಪಕ್ಷಪಾತ ಮಾಡುವುದಿಲ್ಲ. ಪ್ರಕೃತಿಯು ಯಾವುದೇ ಜಾತಿ, ಜನಾಂಗ, ಧರ್ಮ, ಸ್ತ್ರೀ-ಪುರುಷ, ಶ್ರೀಮಂತ ಬಡವ- ಎಲ್ಲರಿಗೂ ಒಂದೇ ರೀತಿಯ ನರಕೋಶಗಳನ್ನು ನೀಡಿದ್ದಾನೆ. ಹುಟ್ಟುತ್ತಾ ಎಲ್ಲರೂ ಒಂದೇ ರೀತಿಯಲ್ಲಿರುತ್ತಾರೆ. ಮುಂದೆ ಬೆಳೆಯುವ ಹಂತದಲ್ಲಿಭಿನ್ನವಾಗುತ್ತಾ ಹೋಗುತ್ತಾರೆ. ಮನೆಯ ಪರಿಸರ, ಸುತ್ತಲಿನ ಪರಿಸರದ ಪ್ರಭಾವದಿಂದ ಬೆಳೆಯುತ್ತಾ ಹೋಗುತ್ತಾನೆ. ಪರಿಸರ ಚೆನ್ನಾಗಿದ್ದರೆ ಮಕ್ಕಳು ಬುದ್ಧಿವಂತರಾಗಿ ಬೆಳೆಯುತ್ತಾರೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ವಿಶ್ರಾಂತ ನ್ಯಾಯಮೂರ್ತಿ ಡಾ.ಶಿವರಾಜ ವಿ. ಪಾಟೀಲ ಹಾಗೂ ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಕ್ಕಳಿಗೆ ಶುಭ ಹಾರೈಸಿದರು.

ಸಂಸ್ಥೆಯ ಅಧ್ಯಕ್ಷೆ ಗೀತಾ ಚನ್ನಾರಡ್ಡಿ ಪಾಟೀಲ ಮಾತನಾಡಿದರು. ಇದೇ ವೇಳೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ನಾ. ಸೋಮೇಶ್ವರ ದಂಪತಿಯನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ, ಜಸ್ಟಿಸ್‌ ಶಿವರಾಜ ಪಾಟೀಲ ಫೌಂಡೇಶನ್‌ ಉಪಾಧ್ಯಕ್ಷ ಹಾಗೂ ನಿವೃತ್ತ ಜಿಲ್ಲಾನ್ಯಾಯಾಧೀಶ ಎಸ್‌.ಎಂ.ರೆಡ್ಡಿ ಕಾಲೇಜಿನ ಪ್ರಾಚಾರ‍್ಯ ಎಂ.ಸಿ.ಕಿರೇದಳ್ಳಿ, ಉಪ ಪ್ರಾಚಾರ‍್ಯ ಪ್ರಶಾಂತ ಕುಲಕರ್ಣಿ, ನಿವೃತ್ತ ಪ್ರಾಚಾರ‍್ಯ ಪ್ರಭುಗೌಡ ಸಿದ್ಧರೆಡ್ಡಿ, ಶೈಕ್ಷಣಿಕ ನಿರ್ದೇಶಕ ಪೃಥ್ವಿರಾಜ್‌ಗೌಡ, ಕರುಣೇಶ ಹಿರೇಮಠ, ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿನುತಾ ಆರ್‌.ಬಿ. ಮತ್ತು ಡಾ.ಸಂತೋಷಕುಮಾರ ನಾಗಲಾಪುರ ನಿರೂಪಿಸಿದರು. ಗುರುರಾಜ ಕುಲಕರ್ಣಿ ವಂದಿಸಿದರು.

ಯದ್ಭಾವ ತದ್ಭವತಿ

ನಾವು ಜೀವನದಲ್ಲಿಹೇಗೆ ಇರಬೇಕೆಂದು ಭಾವಿಸುತ್ತೇವೆಯೋ ಹಾಗೆಯೇ ಇರುತ್ತೇವೆ. ಮೊದಲು ನಾವು ಏನಾಗಬೇಕೆಂದು ಸ್ಪಷ್ಟವಾದ ಗುರಿ ಹೊಂದಿರಬೇಕು. ಅಂದಾಗಲೇ ಗುರಿ ತಲುಪುವುದು ಸಾಧ್ಯವಾಗುತ್ತದೆ ಎಂದು ಡಾ.ನಾ.ಸೋಮೇಶ್ವರ ನುಡಿದರು.

ಕೇವಲ ಅಂಕ ಗಳಿಕೆಗಾಗಿ ಓದದೆ ಜ್ಞಾನಾರ್ಜನೆಗಾಗಿ ಓದಬೇಕು. ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವಂತೆ ಓದಬೇಕು. ಯಶಸ್ಸಿಗೆ ಯಾವುದೇ ಅಡ್ಡದಾರಿ ಇಲ್ಲ. ಪ್ರಾಮಾಣಿಕವಾಗಿ ಓದಿದಾಗ ಯಶಸ್ಸು ಸಾಧ್ಯ. ವಿಷಯವನ್ನು ಪ್ರೀತಿಸಿದಾಗ ಓದಿನಲ್ಲಿಆಸಕ್ತಿ ಹೆಚ್ಚಾಗಿ ಎಲ್ಲವೂ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ನಮ್ಮ ಪೂರ್ವಸಿದ್ಧತೆ ಎಂಬುದು ಯಾವತ್ತೂ ರಾಷ್ಟ್ರೀಯ ಮಟ್ಟದ ಪರೀಕ್ಷೆಗಾಗಿ ಎನ್ನುವಂತೆಯೇ ಇರಬೇಕು. ಆಗ ಎಂಥದ್ದೇ ಸ್ಪರ್ಧಾತ್ಮಕ ಪರೀಕ್ಷೆಯಾದರೂ ಸುಲಭವಾಗಿ ಯಶಸ್ಸು ಸಾಧಿಸಬಹುದು.

-ಅಭಿಷೇಕ ಸಿ.ಪಾಟೀಲ, ಕಾರ್ಯದರ್ಶಿ

ಸರ್ವಜ್ಞ ಶಿಕ್ಷಣ ಸಂಸ್ಥೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ