ಆ್ಯಪ್ನಗರ

ಹಲಚೇರಾ ಸುಭಾಷ್‌ ಆರೋಗ್ಯ ವಿಚಾರಿಸಿದ ಜಾಧವ

ಕಲಬುರಗಿಯಿಂದ ದೆಹಲಿಗೆ ಪ್ರಧಾನಿಯನ್ನು ಭೇಟಿ ಆಗುವ ಸಂಕಲ್ಪ ತೊಟ್ಟು ಸೈಕಲ್‌ ಮೇಲೆ ಹೊರಟು ಮಾರ್ಗ ಮಧ್ಯೆ ಗಾಯಗೊಂಡು ಇಎಸ್‌ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಳಗಿ ತಾಲೂಕಿನ ಹಲಚೇರಾ ಗ್ರಾಮದ ಸುಭಾಷ ಪರೀಟ್‌ ಅವರನ್ನು ಭಾನುವಾರ ಸಂಸದ ಡಾ. ಉಮೇಶ ಜಾಧವ್‌ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

Vijaya Karnataka 20 Jun 2019, 8:49 pm
ಕಲಬುರಗಿ:ಕಲಬುರಗಿಯಿಂದ ದೆಹಲಿಗೆ ಪ್ರಧಾನಿಯನ್ನು ಭೇಟಿ ಆಗುವ ಸಂಕಲ್ಪ ತೊಟ್ಟು ಸೈಕಲ್‌ ಮೇಲೆ ಹೊರಟು ಮಾರ್ಗ ಮಧ್ಯೆ ಗಾಯಗೊಂಡು ಇಎಸ್‌ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಳಗಿ ತಾಲೂಕಿನ ಹಲಚೇರಾ ಗ್ರಾಮದ ಸುಭಾಷ ಪರೀಟ್‌ ಅವರನ್ನು ಭಾನುವಾರ ಸಂಸದ ಡಾ. ಉಮೇಶ ಜಾಧವ್‌ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
Vijaya Karnataka Web subhash was the first to inquire about health
ಹಲಚೇರಾ ಸುಭಾಷ್‌ ಆರೋಗ್ಯ ವಿಚಾರಿಸಿದ ಜಾಧವ


ಬಿಜೆಪಿಯ ಅಭಿಮಾನಿಯಾಗಿದ್ದ ಪರೀಟ್‌, ಪ್ರಧಾನ ಮಂತ್ರಿ ಮೋದಿ ಅವರನ್ನು ಭೇಟಿ ಮಾಡಿ ಬರಲು ಸೈಕಲ್‌ ಮೂಲಕ ದೆಹಲಿಗೆ ಹೊರಟಿದ್ದರು. ಮಾರ್ಗ ಮಧ್ಯೆ ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಸೈಕಲ್‌ ಅಪಘಾತಕ್ಕೆ ಈಡಾಗಿದ್ದರು. ಸ್ಥಳೀಯ ಮೊಬೈಲ್‌ನಲ್ಲಿ ಸಂಸದರಿಗೆ ಮಾಹಿತಿ ನೀಡಿದಾಗ, ಪರೀಟ್‌ ಅವರನ್ನು ವಾಪಸ್ಸು ಕರೆಯಿಸಿ ಇಎಸ್‌ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ, ಭಾನುವಾರ ಸ್ವತಃ ಆಸ್ಪತ್ರೆಗೆ ಹೋಗಿ ಆರೋಗ್ಯ ಮತ್ತು ಗಾಯದ ಕುರಿತು ಮಾಹಿತಿ ಪಡೆದು, ಮೋದಿ ಭೇಟಿ ಮಾಡುವ ಸಂಕಲ್ಪಕ್ಕೆ ಶುಭ ಹಾರೈಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ