ಆ್ಯಪ್ನಗರ

ಈ ವರ್ಷ ಬ್ಯಾಸಗಿ ಕಳಿಯೋದು ತ್ರಾಸೈತ್ರೀ...

ಈ ವರ್ಷ ಬ್ಯಾಸಗಿ ಕಳಿಯೋದು ಭಾಳ್‌ ತ್ರಾಸ್‌ ಇದೆರೀ, ಬಿಸಿಲಿನ ಝಳಕ್ಕೆ ಮೈಯಲ್ಲಾ ಸುಡಾಕತ್ತೈತಿ. ಧಗಿಯಿಂದ ಮನಸ್ಸಿಗಿ ನೆಮ್ಮದಿ ಇಲ್ಲ. ರಾತ್ರಿ ಮಲಗಿದರೂ ನಿದ್ದಿ ಹತ್ತವಲ್ದು. ನಸುಕಿನ್ಯಾಗ ಎದ್ದು ವಾಕಿಂಗ್‌ ಹೋದ್ರೂ ತಣ್ಣನ ಗಾಳಿ ಸಿಗ್ತಿಲ್ಲ. ಮೈಯಾಗ್‌ ನೀರಿಳಿತಾದ. ಮಾರ್ಚ್‌ನ್ಯಾಗೇ ಹಿಂಗಾದ್ರ, ಇನ್ನಾ ಮುಂದಿನ ಎರ್ಡು ತಿಂಗಳು ಹ್ಯಾಂಗ್‌ ಕಳೆಯೋದು ಅಂತ ಚಿಂತಿ ಶುರುವಾಗ್ಯಾದ್ರಿ.

Vijaya Karnataka 29 Mar 2019, 9:25 pm
ಚಂದ್ರು ಹಿರೇಮಠ ಕಲಬುರಗಿ:ಈ ವರ್ಷ ಬ್ಯಾಸಗಿ ಕಳಿಯೋದು ಭಾಳ್‌ ತ್ರಾಸ್‌ ಇದೆರೀ, ಬಿಸಿಲಿನ ಝಳಕ್ಕೆ ಮೈಯಲ್ಲಾ ಸುಡಾಕತ್ತೈತಿ. ಧಗಿಯಿಂದ ಮನಸ್ಸಿಗಿ ನೆಮ್ಮದಿ ಇಲ್ಲ. ರಾತ್ರಿ ಮಲಗಿದರೂ ನಿದ್ದಿ ಹತ್ತವಲ್ದು. ನಸುಕಿನ್ಯಾಗ ಎದ್ದು ವಾಕಿಂಗ್‌ ಹೋದ್ರೂ ತಣ್ಣನ ಗಾಳಿ ಸಿಗ್ತಿಲ್ಲ. ಮೈಯಾಗ್‌ ನೀರಿಳಿತಾದ. ಮಾರ್ಚ್‌ನ್ಯಾಗೇ ಹಿಂಗಾದ್ರ, ಇನ್ನಾ ಮುಂದಿನ ಎರ್ಡು ತಿಂಗಳು ಹ್ಯಾಂಗ್‌ ಕಳೆಯೋದು ಅಂತ ಚಿಂತಿ ಶುರುವಾಗ್ಯಾದ್ರಿ.
Vijaya Karnataka Web summer showers throughout the district
ಈ ವರ್ಷ ಬ್ಯಾಸಗಿ ಕಳಿಯೋದು ತ್ರಾಸೈತ್ರೀ...

ಜಿಲ್ಲೆಯಾದ್ಯಂತ ಬೇಸಿಗೆ ಬವಣೆ ಎದುರಿಸುತ್ತಿರುವ ಜನರು ಇಂಥದ್ದೊಂದು ಪ್ರವರದೊಂದಿಗೆ ಮಾತಿಗಿಳಿಯುತ್ತಿರುವುದು ಬಿಸಿಲಿನ ಝಳದ ತೀವ್ರತೆ ಎಷ್ಟಿದೆ ಎಂಬುದನ್ನು ಅನಾವರಣಗೊಳಿಸುತ್ತಿದೆ. ಈಗಾಗಲೇ ಉಷ್ಣಾಂಶವು 40 ಡಿಗ್ರಿ ಸೆಲ್ಸಿಯಸ್‌ ಇದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ತಾಪಮಾನದಿಂದ ಜನ-ಜಾನುವಾರು ತತ್ತರಿಸುವಂತಾಗಿದೆ.

ಹೊತ್ತು ಏರಿದಂತೆಲ್ಲಾ ಬಿಸಿಲು ಹೆಚ್ಚುತ್ತಾ ಹೋಗುತ್ತಿದೆ. ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿರುವ ಬೇಸಿಗೆ ದಿನಗಳನ್ನು ಕಳೆಯುವುದು ಹೇಗೆ ಎಂಬ ಚಿಂತೆ ಜನರನ್ನು ಕಾಡತೊಡಗಿದೆ.

ಸುಡು ಬಿಸಿಲಿನಿಂದಾಗಿ ಊಟಕ್ಕಿಂತಲೂ ನೀರನ್ನೇ ಹೆಚ್ಚು ಆಶ್ರಯಿಸುವಂತಾಗಿದೆ ಎಂದು ಹೇಳುತ್ತಾರೆ ರೈತ ಮಲ್ಲಪ್ಪ ಪೂಜಾರಿ.

*ವಿದ್ಯುತ್‌ ಪೂರೈಕೆ ಕಡಿತ: ಬಿಸಿಲಿನ ಬರೆಯ ಮಧ್ಯೆ ಮೇಲಿಂದ ಮೇಲೆ ವಿದ್ಯುತ್‌ ಕಡಿತ ಉಂಟಾಗುತ್ತಿರುವುದು ಜನರನ್ನು ಮತ್ತಷ್ಟು ಇಕ್ಕಟ್ಟಿನ ಸ್ಥಿತಿಗೆ ಈಡು ಮಾಡಿದೆ. ವಿದ್ಯುತ್‌ ಪೂರೈಕೆಯಲ್ಲಿ ಪದೇಪದೆ ಕಡಿತ ಆಗುತ್ತಿರುವುದರಿಂದ ಫ್ಯಾನ್‌, ಕೂಲರ್‌ ಇದ್ದರೂ ಉಪಯೋಗಕ್ಕೆ ಬರದಂತಾಗಿದೆ. ತೀವ್ರ ಸೆಕೆಯ ಜತೆಗೆ ಸೊಳ್ಳೆಯ ಕಾಟ ಜನರ ನೆಮ್ಮದಿ ಕೆಡಿಸಿದೆ ಎಂದು ಸ್ಥಳೀಯ ನಿವಾಸಿ ಸಂಗಮೇಶ ಹೇಳುತ್ತಾರೆ.

ಗಗನಕ್ಕೇರಿದ ಎಳನೀರು ಬೆಲೆ

ಬಿಸಿಲಿನ ಬೇಗೆ ಹೆಚ್ಚುತ್ತಿದ್ದಂತೆಯೇ ಹಣ್ಣು, ತಂಪು ಪಾನೀಯ, ಎಳನೀರಿನ ಬೆಲೆ ಗಗನಕ್ಕೇರಿದೆ. ಸಾಮಾನ್ಯ ದಿನಗಳಲ್ಲಿ 10ರಿಂದ 15ಕ್ಕೆ ಒಂದು ಕೆ.ಜಿ.ದೊರೆಯುತ್ತಿದ್ದ ಕಲ್ಲಂಗಡಿ ಹಣ್ಣು ಈಗ ರೂ. 25ರಿಂದ 30ಕ್ಕೇರಿದೆ. ರೂ.25ಕ್ಕೆ ದೊರೆಯುತ್ತಿದ್ದ ಎಳನೀರು ಪ್ರಸ್ತುತ ರೂ.40ಕ್ಕೆ ಏರಿಕೆಯಾಗಿದೆ. ಮಜ್ಜಿಗೆ, ಲಸ್ಸಿ, ಶರಬತ್ತು, ಕಿತ್ತಳೆ ಹಣ್ಣಿನ ಜ್ಯೂಸ್‌ ಬೆಲೆಯೂ ಏರಿಕೆ ಆಗಿದೆ.

ಬೆಳಗ್ಗೆ 10ಕ್ಕೆಲ್ಲಾ ಬಿಸಿಲಿನ ಝಳ ತಡೆಯಲು ಆಗುತ್ತಿಲ್ಲ. ಮಧ್ಯಾಹ್ನದ ಹೊತ್ತಿಗಂತು ಉರಿ ಬಿಸಿಲು ಸುಡುತ್ತಿರುತ್ತದೆ. ಈ ಸಮಯದಲ್ಲಿ ಆಚೆ ಹೋಗಲು ತುಂಬಾ ಕಷ್ಟವಾಗುತ್ತದೆ. ಸ್ವಲ್ಪವೇ ದೂರ ಹೋಗಿಬರುವಷ್ಟರಲ್ಲಿ ಸುಸ್ತಾಗಿ ಹೋಗುತ್ತದೆ.

- ಲಕ್ಷ್ಮಿಬಿರಾದಾರ, ಗೃಹಿಣಿ

ತಂಪು ಪಾನಿಯಕ್ಕಿಂತಲೂ ತಾಜಾ ಹಣ್ಣಿನ ರಸ ಬಿಸಿಲಿನಿಂದಾಗಿ ದೇಹಕ್ಕೆ ಕಾಡಬಹುದಾದ ನಿರ್ಜಲೀಕರಣ (ಡಿಹೈಡ್ರೇಷನ್‌) ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ನೀರಿನಂಶ ಇರುವ ಕಲ್ಲಂಗಡಿ, ಖರ್ಜೂರ, ಸೌತೆ ಕಾಯಿ ಸೇವಿಸುವುದು ಒಳ್ಳೆಯದು. ನೀರು ಮೇಲಿಂದ ಮೇಲೆ ಕುಡಿಯಬೇಕು.

-ಡಾ.ಗಫಾರ್‌, ಕಲಬುರಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ