ಆ್ಯಪ್ನಗರ

ಕಲಬುರಗಿಯಲ್ಲಿ ಗ್ರಹಣದ ವೇಳೆ ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟ ಪೋಷಕರು: ಇದೆಂಥಾ ಮೂಢನಂಬಿಕೆ?

ವಿಜ್ಞಾನ, ತಂತ್ರಜ್ಞಾನದ ಈ ಯುಗದಲ್ಲೂ ಅನೇಕ ಮೂಢನಂಬಿಕೆ ಇದೆ. ಕಲಬುರಗಿಯಲ್ಲಿ ವಿಕಲಾಂಗ ಸಮಸ್ಯೆ ಸರಿಪಡಿಸುವ ನಂಬಿಕೆಯೊಂದಿಗೆ ಕೆಲವು ಪೋಷಕರು ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟಿದ್ದಾರೆ.

Vijaya Karnataka Web 26 Dec 2019, 10:54 am
ಕಲಬುರಗಿ: ಗ್ರಹಣದ ಸಮಯದಲ್ಲಿ ತಮ್ಮ ಮಕ್ಕಳನ್ನು ಕಾಡುತ್ತಿರುವ ವಿಕಲಾಂಗ ಸಮಸ್ಯೆ ಸರಿಪಡಿಸುವ ನಂಬಿಕೆಯೊಂದಿಗೆ ಕೆಲವು ಪೋಷಕರು ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟಿದ್ದಾರೆ. ಕಲಬುರಗಿಯ ತಾಜ್ ಸುಲ್ತಾನಪುರ ಹೊರವಲಯದಲ್ಲಿ ತಮ್ಮ ಮಕ್ಕಳನ್ನು ಕಾಡುತ್ತಿರುವ ವಿಕಲಾಂಗ ಸಮಸ್ಯೆ ಸರಿಪಡಿಸುವ ನಂಬಿಕೆಯೊಂದಿಗೆ ಕೆಲವು ಪೋಷಕರು ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟಿದ್ದಾರೆ.
Vijaya Karnataka Web superstition



21ನೇ ಶತಮಾನ ವಿಜ್ಞಾನ, ತಂತ್ರಜ್ಞಾನದ ಯುಗ. ಆದರೆ, ರಾಜ್ಯದ ಹಲವೆಡೆ ಈಗಲೂ ಮೂಢನಂಬಿಕೆ ಹೆಚ್ಚಾಗಿದೆ. ಇದಕ್ಕೆ ಕಲಬುರಗಿಯಲ್ಲಿ ನಡೆದಿರುವ ಈ ಘಟನೆ ಒಂದು ಸಾಕ್ಷಿ. ತಿಪ್ಪೆಯಲ್ಲಿ ಇಬ್ಬರು ಮಕ್ಕಳನ್ನು ಕುತ್ತಿಗೆ ಮಟ್ಟದವರೆಗೆ ಹೂತಿಡಲಾಗಿದೆ. ಸಾಮಾನ್ಯವಾಗಿ ಸೂರ್ಯಗ್ರಹಣದ ವೇಳೆ ಹೀಗೆ ವಿಶೇಷಚೇತನ ಮಕ್ಕಳನ್ನು ಕುತ್ತಿಗೆ ಮಟ್ಟದವರೆಗೆ ಹೂತಿಟ್ಟರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ ಎಂಬ ನಂಬಿಕೆಯಿದೆ.

ಅನೇಕ ವರ್ಷಗಳಿಂದಲೂ ಈ ಪದ್ಧತಿ ಜಾರಿಯಲ್ಲಿದೆ. ಹೀಗಾಗಿ ಈ ಕುರಿತು ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯೂ ಈ ಹಿಂದೆ ಕಲಬುರಗಿ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಆದರೂ ಈ ಪದ್ಧತಿ ಇಂದಿಗೂ ಹಾಗೆಯೇ ಮುಂದುವರೆದುಕೊಂಡು ಬಂದಿದೆ.

ಕರ್ನಾಟಕ ಸೇರಿ ವಿಶ್ವದ ಹಲವೆಡೆ ಕಂಕಣ ಸೂರ್ಯಗ್ರಹಣ ಗೋಚರ: ಗಗನದ ಕೌತುಕ ಕಣ್ತುಂಬಿಕೊಂಡ ಜನತೆ

ಇನ್ನು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಅಂಗವೈಕಲ್ಯ ನಿವಾರಣೆಯಾಗುತ್ತದೆಂಬ ನಂಬಿಕೆಯಿಂದ ವಿಕಲಚೇತನ ಯುವಕನನ್ನು ಪಾಲಕರು ಗ್ರಹಣದ ವೇಳೆ ಕತ್ತಿನ ತನಕ ಮಣ್ಣಲ್ಲಿ ಹೂತಿಟ್ಟಿದ್ದರು.

ವಿಜಯಪುರದಲ್ಲಿ ಯುವಕನನ್ನು ಹೂತಿಟ್ಟ ಪೋಷಕರು


ಗಗನದಲ್ಲಿ ಚಮತ್ಕಾರ: ಮಂಗಳೂರಿನ ಕಡಲ ಕಿನಾರೆಯಲ್ಲಿ ಖಗೋಳಾಸಕ್ತರ ದಂಡು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ