ಆ್ಯಪ್ನಗರ

ಕಾಂತಾ ನೇತೃತ್ವದ ಹೋರಾಟಕ್ಕೆ ಬೆಂಬಲ

ಕಲಬುರಗಿ ನಗರದ ಕನ್ನಡ ಭವನದಲ್ಲಿ ಬುಧವಾರ ವಿವಿಧ ಸಂಘಟನೆಗಳ ಮುಖಂಡರ ಸಭೆ ನಡೆಯಿತು.

Vijaya Karnataka 10 Jan 2019, 5:00 am
ಕಲಬುರಗಿ :ನಗರದ ಕನ್ನಡ ಭವನದಲ್ಲಿ ಬುಧವಾರ ವಿವಿಧ ಸಂಘಟನೆಗಳ ಮುಖಂಡರ ಸಭೆ ನಡೆಯಿತು.
Vijaya Karnataka Web support for the fight led by kanta
ಕಾಂತಾ ನೇತೃತ್ವದ ಹೋರಾಟಕ್ಕೆ ಬೆಂಬಲ


ಸೇಡಂ ತಾಲೂಕಿನ ಭೂಮಿ ಕೊಟ್ಟ ರೈತರಿಗೆ ಅನ್ಯಾಯ, ಕೃಷಿಯೇತರ ಹಾಗೂ ಕಟ್ಟಡ ಪರವಾನಿಗೆ ಇಲ್ಲದೆ ಕಾನೂನು ಉಲ್ಲಂಘಿಸುತ್ತಿರುವ ಶ್ರೀ ಸಿಮೆಂಟ್‌ ಕಾರಖಾನೆ ವಿರುದ್ಧ ಕ್ರಮ ಕೈಗೊಳ್ಳಬೇಕು, ನಗರ ಕೆರೆಗಳು, ಉದ್ಯಾನ ಮತ್ತು ಸರಕಾರಿ ಜಮೀನು ಒತ್ತುವರಿ ತೆರವುಗೊಳಿಸಲು ಒತ್ತಾಯಿಸಿ ಮಾಜಿ ಸಚಿವ ಎಸ್‌.ಕೆ.ಕಾಂತಾ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಸುತ್ತಿರುವ ಧರಣಿಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದವು.

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ, ಜೈ ಕನ್ನಡಿಗ ಸೇನೆ, ಕರ್ನಾಟಕ ನವ ನಿರ್ಮಾಣ ಸೇನೆ, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಶ್ರೀರಾಮ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಮುಖಂಡರು ಸೇರಿದ ಸಭೆಯಲ್ಲಿ ಎಸ್‌.ಕೆ.ಕಾಂತಾ ಅವರ ಹೋರಾಟ ಬೆಂಬಲಿಸಿ ತೀವೃಗೊಳಿಸಲು ನಿರ್ಧಾರಿಸಲಾಯಿತು.

ಮಾಜಿ ಸಚಿವ ಎಸ್‌.ಕೆ.ಕಾಂತಾ, ಎಂ.ಎಸ್‌.ಪಾಟೀಲ್‌ ನರಿಬೋಳ, ದತ್ತು ಭಾಸಗಿ, ಸಂದೀಪ ಭರಣಿ, ವಿನೋದ ಪಾಟೀಲ್‌, ಲಕ್ಷ್ಮಿಕಾಂತ ಸ್ವಾಧಿ, ಗೋಪಾಲ ನಾಟಿಕಾರ್‌, ಮನೋಹರ ಬಿರನೂರ, ಅಸ್ಲಂ ಕಲ್ಯಾಣಿ, ವಿರೇಂದ್ರ ಮಂಠಾಳೆ, ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ