ಆ್ಯಪ್ನಗರ

ಗುರುನಾಥೇಂದ್ರ ಶ್ರೀಗಳ ಚಾತುರ್ಮಾಸ್ಯ ಆರಂಭ

ವಿಶ್ವಬ್ಯಾಹ್ಮಣ ಸಮಾಜದ ಜಗದ್ಗುರು ಕಾಳಾಹಸ್ತಾಚಾರ್ಯ ನಾಮಾಂಕಿತ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಯತಿಗಳಾದ ವಿಶ್ವಕರ್ಮ ಏಕದಂಡಿಗಿ ಮಠದ ಗುರುನಾಥೇಂದ್ರ ಮಹಾಸ್ವಾಮಿಗಳ 9ನೇ ಚಾತುರ್ಮಾಸ್ಯ ವೃತಾನುಷ್ಠಾನ ಕಲಬುರಗಿಯ ಬ್ರಹ್ಮಪುರದಲ್ಲಿರುವ ವಿಶ್ವಕರ್ಮ ಏಕದಂಡಗಿ ಮಠದಲ್ಲಿ ಜು. 12ಆರಂಭಿಸಿದ್ದಾರೆ.

Vijaya Karnataka 14 Jul 2019, 5:00 am
ಕಲಬುರಗಿ:ವಿಶ್ವಬ್ಯಾಹ್ಮಣ ಸಮಾಜದ ಜಗದ್ಗುರು ಕಾಳಾಹಸ್ತಾಚಾರ್ಯ ನಾಮಾಂಕಿತ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಯತಿಗಳಾದ ವಿಶ್ವಕರ್ಮ ಏಕದಂಡಿಗಿ ಮಠದ ಗುರುನಾಥೇಂದ್ರ ಮಹಾಸ್ವಾಮಿಗಳ 9ನೇ ಚಾತುರ್ಮಾಸ್ಯ ವೃತಾನುಷ್ಠಾನ ಕಲಬುರಗಿಯ ಬ್ರಹ್ಮಪುರದಲ್ಲಿರುವ ವಿಶ್ವಕರ್ಮ ಏಕದಂಡಗಿ ಮಠದಲ್ಲಿ ಜು. 12ಆರಂಭಿಸಿದ್ದಾರೆ.
Vijaya Karnataka Web the beginnings of gurunathendra srilas chaturmaya
ಗುರುನಾಥೇಂದ್ರ ಶ್ರೀಗಳ ಚಾತುರ್ಮಾಸ್ಯ ಆರಂಭ


ಯತಿಗಳ ಅನಾರೋಗ್ಯದ ಕಾರಣವಾಗಿ ಈ ಬಾರಿ ನಗರದಲ್ಲಿ ಆರಂಭಿಸಿದ್ದು, ಬರುವ ಹುಣ್ಣಿಮೆವರೆಗೂ ನಾನಾ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಸೇರಿ ಇತರೆ ಕಾರ್ಯಕ್ರಮಗಳು ಜರುಗಲಿವೆ ಎಂದು ಪೂರ್ವಾಶ್ರಮದ ಸುರೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.

1937ರಲ್ಲಿ ಯತಿಗಳ ಪೂರ್ವಜರಾದ ಯತಿಪುಂಗವ ಬಾಲಯತಿಗಳ ಜೀವ ಸಮಾಧಿ ಪಡೆದ ಜಿಲ್ಲೆಯ ಫಿರೋಜಾಬಾದ ಗ್ರಾಮದ ಭೀಮ ನದಿಯ ತೀರದಲ್ಲಿ ವಿಶ್ವಕರ್ಮ ಏಕದಂಡಿಗಿ ಆಶ್ರಮದವಿದ್ದು, ಹಿಂದಿನ ಯತಿಗಳಾದ ಗುರುನಾಥೇಂದ್ರ ಯತಿಗಳ ವೃಂದಾವನ (ಗದ್ದುಗೆ)ಯಿದೆ.

ಚಾತುರ್ಮಾಸ್ಯದ ಮಹತ್ವ

ಆಷಾಢ ಶುದ್ಧ ಏಕಾದಶಿಯಿಂದ ಶ್ರೀವಿಷ್ಣುವು ಈ ಮಾಸದ ಅಧಿಪತಿಯಾಗಿದ್ದು, ಯೋಗನಿದ್ರೆಯಲ್ಲಿ ಉತ್ತರಾಯಣ ಕಾಲದ ಕೊನೆಯ ದಿನಗಳಲ್ಲಿ ಶಯನೋತ್ಸವವನ್ನು ಪಡೆದಿರುತ್ತಾನೆ. ನಂತರ ದಕ್ಷಿಣಾಯನ ಪ್ರಾರಂಭವಾಗುತ್ತದೆ. ಈ ಕಾಲದಲ್ಲಿ ಯತಿಗಳು ಅಥವಾ ಸನ್ಯಾಸತ್ವ ಸ್ವೀಕರಿಸಿದವರು ತಮ್ಮ ತಮ್ಮ ಸಂಚಾರವನ್ನು ಬಿಟ್ಟು ಒಂದೆ ಕಡೆಗೆ ನದಿಯ ತೀರದಲ್ಲಿ, ಕಾನನದಲ್ಲಿ ಇಲ್ಲವೇ ಪುಣ್ಯ ಕ್ಷೇತ್ರಗಳಲ್ಲಿ ಒಂದೆ ಕಡೆ ಕುಳಿತು ಬೆಳಗ್ಗೆ ಪರಂಪರಾ ಪೂಜೆ ಮಾಡಿ ಬಂದತಹ ಶಿಷ್ಯವೃಂದಕ್ಕೆ ತೀರ್ಥ ಪ್ರಸಾದ ಅನುಗ್ರಹಿಸುವರು.

ಗೋಗ್ರಾಸ (ಗೋಮಾತೆಗೆ) ಅಕ್ಕಿಬೆಲ್ಲ ಇಲ್ಲವೇ ದ್ವಿದಳ ಧಾನ್ಯ ಕೊಟ್ಟು ಪೂಜಿಸಿ ನಮಸ್ಕರಿಸುವರು. ನಂತರ ಶ್ರೀಗಳು ಭೀಕ್ಷೆ (ಯತಿಗಳು ಪ್ರಸಾದ) ಸ್ವೀಕರಿಸುವರು.

ನಂತರ ಸಾಯಂಕಾಲ ಪ್ರತಿನಿತ್ಯ ಬಂದತಹ ಶಿಷ್ಯವೃಂದ, ಭಕ್ತಾದಿಗಳಿಗೆ ವೇದಾಂತ ವಾಕ್ಯಗಳು ಹಾಗೂ ಧರ್ಮೋಪದೇಶದ ಕುರಿತು ಪ್ರವಚನ ಕಾರ್ಯಕ್ರಮ ಜರುಗುತ್ತವೆ. ಒಂದೊಂದು ಸಮಯದಲ್ಲಿ ಭಕ್ತಾದಿಗಳು ಬರದಿದ್ದರೂ ತಮ್ಮ ಶಿಷ್ಯವೃಂದಕ್ಕೆ ಆತ್ಮೋದ್ಧಾರದ ಮೊದಲ ಉಪದೇಶನ್ನು ನೀಡುತ್ತಾರೆ. ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ದಿನಂಪ್ರತಿ ನಡೆಯುವ ವೃತಕ್ಕೆ ಚಾತುರ್ಮಾಸ್ಯ ವೃತಾನುಷ್ಠಾನವೆಂದು ಪ್ರಾಚೀನ ಕಾಲದಿಂದಲು ನಡೆದುಕೊಂಡು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ