ಆ್ಯಪ್ನಗರ

ತಾಪಂ ಅಧ್ಯಕ್ಷೆ ವಿರುದ್ಧ ಕ್ರಮಕ್ಕೆ ಆಗ್ರಹ

ಚಿಂಚೋಳಿ ವಿಧಾನಸಭಾ ಉಪಚುನಾವಣೆಯಲ್ಲಿ ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ ಹಾಗೂ ಅವರ ಪತಿ ಅಶೋಕ ಚವ್ಹಾಣ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ತಾಪಂ ಸದಸ್ಯರಾದ ರಾಮರಾವ ರಾಠೋಡ, ಜಗನಾಥ ಇದಲಾಯಿ ಆಗ್ರಹಿಸಿದ್ದಾರೆ.

Vijaya Karnataka 26 May 2019, 9:46 pm
ಚಿಂಚೋಳಿ :ಚಿಂಚೋಳಿ ವಿಧಾನಸಭಾ ಉಪಚುನಾವಣೆಯಲ್ಲಿ ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ ಹಾಗೂ ಅವರ ಪತಿ ಅಶೋಕ ಚವ್ಹಾಣ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ತಾಪಂ ಸದಸ್ಯರಾದ ರಾಮರಾವ ರಾಠೋಡ, ಜಗನಾಥ ಇದಲಾಯಿ ಆಗ್ರಹಿಸಿದ್ದಾರೆ.
Vijaya Karnataka Web the temptation is demanding action against the president
ತಾಪಂ ಅಧ್ಯಕ್ಷೆ ವಿರುದ್ಧ ಕ್ರಮಕ್ಕೆ ಆಗ್ರಹ


ಪಟ್ಟಣದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಪಕ್ಷ ದ ಆತ್ಮಾವಲೋಕನ ಸಭೆಯ ನಂತರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಅವರಿಗೆ ಭೇಟಿ ಮಾಡಿದ ಅವರು, ತಾಲೂಕಿನ ಐನಾಪುರ, ಕುಂಚವರಾಂ, ಶಾದಿಪುರ ತಾಪಂ ಸದಸ್ಯರು ಹಾಗೂ ಪುರಸಭೆ ಸದಸ್ಯೆ ಸವೀತಾ ರಾಜು ಅವರು ಬಿಜೆಪಿ ಪರ ಕೆಲಸ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ವರ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಂಡು ಅವರ ಸದಸ್ಯತ್ವ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಚಿಮ್ಮನಚೋಡ ತಾಪಂ ಸದಸ್ಯ ಮಹ್ಮದ್‌ ನಾಯಿಕೋಡಿ ಮಾತನಾಡಿ, ಒಂದೇ ಮನೆಯಲ್ಲಿ ಅಣ್ಣ ಬಿಜೆಪಿಯಲ್ಲಿ ತಮ್ಮ ಕಾಂಗ್ರೆಸ್‌ನಲ್ಲಿದ್ದರೆ ಪಕ್ಷ ಹೇಗೆ ಗೆಲ್ಲ್ಲುತ್ತದೆ. ಕಾಂಗ್ರೆಸ್‌ ಸಚಿವರು ಒಂದು ದಿನ ಅವರ ಮನೆಗೆ ಊಟಕ್ಕೆ ಹೋದರೆ ಮತ್ತೊಂದು ದಿನ ಬಿಜೆಪಿ ಮಾಜಿ ಸಚಿವರ ಮನೆಗೆ ಹೋಗಿದ್ದರಿಂದ ಮತದಾರರ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಕಾಂಗ್ರೆಸ್‌ ಪಕ್ಷ ಕ್ಕೆ ಮತ ಕಡಿಮೆ ಬಂದಿವೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ಮಾತನಾಡಿ, ದೂರುಗಳು ಇದ್ದಲ್ಲಿ ಚಿಂಚೋಳಿ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಅನಿಲಕುಮರ ಜಮದಾರ ಅವರಿಗೆ ಸಲ್ಲಿಸಬೇಕು. ಅವುಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಿ ಸಂಬಂಧಿತರ ವಿರುದ್ಧ ಕ್ರಮಕ್ಕೆ ಒತ್ತಡ ಹಾಕುವುದಾಗಿ ಭರವಸೆ ಹೇಳಿದರು.

ಸುಭಾಷ ರಾಠೋಡ, ಟಿಟಿ ಭೀಮರಾವ, ಅನಿಲಕುಮಾರ ಜಮದಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ