ಆ್ಯಪ್ನಗರ

ಮೂವರ ಹತ್ಯೆ; ಐವರ ಬಂಧನ

ಸೇಡಂ ತಾಲೂಕಿನ ಮೇದಕ್‌ನಲ್ಲಿ ಜಮೀನು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಹೋದರ ಸಂಬಂಧಿಗಳು ತಂದೆ, ಮಕ್ಕಳನ್ನು ಸೇರಿ ಮೂವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Vijaya Karnataka 14 Jun 2019, 10:06 pm
ಕಲಬುರಗಿ:ಸೇಡಂ ತಾಲೂಕಿನ ಮೇದಕ್‌ನಲ್ಲಿ ಜಮೀನು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಹೋದರ ಸಂಬಂಧಿಗಳು ತಂದೆ, ಮಕ್ಕಳನ್ನು ಸೇರಿ ಮೂವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
Vijaya Karnataka Web three killed five arrested
ಮೂವರ ಹತ್ಯೆ; ಐವರ ಬಂಧನ


ಆಶಪ್ಪ ಚಿನ್ನಯ್ಯ, ರಾಮುಲು ಚಿನ್ನಯ್ಯ, ಪದ್ಮಮ್ಮ ಆಶಪ್ಪ, ಲಾಲಪ್ಪ ಶರಣಪ್ಪ ಮತ್ತು ಪವಿತ್ರಾ ರಾಮುಲು ಬಂಧಿತ ಆರೋಪಿಗಳು. ಈ ಪೈಕಿ ಅವರನ್ನು ಆಶಪ್ಪ ಹಾಗೂ ರಾಮುಲು ಅವರನ್ನು ತೆಲಂಗಾಣದ ವಿಠ್ಠಲಾಪುರದಲ್ಲಿ ಬಂಧಿಸಲಾಗಿದ್ದು, ಮಹಿಳಾ ಆರೋಪಿಗಳನ್ನು ಕಾನಾಗಡ್ಡ ಗ್ರಾಮದಲ್ಲಿ ಬಂಧಿಸಲಾಗಿದೆ. ಬಂಧಿತರು ನೀಡಿದ ಮಾಹಿತಿಯ ಮೇರೆಗೆ ಹತ್ಯೆಗೆ ಬಳಸಿದ ಗಳೆಯ ಮೇಳಿಗಳು, ಒಂದು ಕೊಡಲಿ ಕಾವು ಮತ್ತು ಒಂದು ಬಡಿಗೆ ವಶಪಡಿಸಿಕೊಳ್ಳಲಾಗಿದೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಲ್ಕಪ್ಪ ಚಿನ್ನಯ್ಯ (65), ಆತನ ಪುತ್ರರಾದ ಶಂಕ್ರಪ್ಪ ಮಲ್ಕಪ್ಪ (28) ಚಿನ್ನಯ್ಯ ಮಲ್ಕಪ್ಪ (30) ಅವರನ್ನು ಬುಧವಾರ ದಾಯಾದಿಗಳೇ ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದ್ದರು. ಮುಧೋಳ ಠಾಣೆಯ ಸಿಪಿಐ ತಮ್ಮಾರಾಯ ಪಾಟೀಲ್‌ ನೇತೃತ್ವದ ತಂಡ ಬಂಧನ ಕಾರ್ಯಾಚರಣೆಯಲ್ಲಿ ಪ್ರಧಾನ ಪಾತ್ರ ವಹಿಸಿದೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಘಟನೆ ಕುರಿತು ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ