ಆ್ಯಪ್ನಗರ

ಜಿಲ್ಲೆಯ ಮೂವರೂ ಸಚಿವರಿಗೆ ಉಸ್ತುವಾರಿ ಪಟ್ಟ

ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಕೊನೆಗೂ ಕೈಗೂಡಿದ್ದು, ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್‌ ಎಂ. ಖರ್ಗೆಗೆ ಕಲಬುರಗಿ ಜಿಲ್ಲೆ ಹೊಣೆ ನೀಡಲಾಗಿದೆ. ಬೀದರ್‌ಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್‌, ಯಾದಗಿರಿಗೆ ಮುಜರಾಯಿ ಸಚಿವ ರಾಜಶೇಖರ ಪಾಟೀಲ್‌ ಅವರಿಗೆ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಆ ಮೂಲಕ ಅವಳಿ ಜಿಲ್ಲೆಯ ಮೂವರೂ ಸಚಿವರಿಗೆ ಉಸ್ತುವಾರಿ ಪಟ್ಟ ನೀಡಿದಂತಾಗಿದೆ.

Vijaya Karnataka 1 Aug 2018, 4:24 pm
ಕಲಬುರಗಿ : ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಕೊನೆಗೂ ಕೈಗೂಡಿದ್ದು, ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್‌ ಎಂ. ಖರ್ಗೆಗೆ ಕಲಬುರಗಿ ಜಿಲ್ಲೆ ಹೊಣೆ ನೀಡಲಾಗಿದೆ. ಬೀದರ್‌ಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್‌, ಯಾದಗಿರಿಗೆ ಮುಜರಾಯಿ ಸಚಿವ ರಾಜಶೇಖರ ಪಾಟೀಲ್‌ ಅವರಿಗೆ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಆ ಮೂಲಕ ಅವಳಿ ಜಿಲ್ಲೆಯ ಮೂವರೂ ಸಚಿವರಿಗೆ ಉಸ್ತುವಾರಿ ಪಟ್ಟ ನೀಡಿದಂತಾಗಿದೆ.
Vijaya Karnataka Web three of the district was in charge of the minister
ಜಿಲ್ಲೆಯ ಮೂವರೂ ಸಚಿವರಿಗೆ ಉಸ್ತುವಾರಿ ಪಟ್ಟ


ಮಹತ್ವವಾಗಿರುವ ವಿಭಾಗೀಯ ಕೇಂದ್ರವಾದ ಕಲಬುರಗಿ ಉಸ್ತುವಾರಿಯನ್ನು ಪ್ರಿಯಾಂಕ್‌ ಅವರಿಗೆ ನೀಡುವ ಮೂಲಕ ಬರುವ ಲೋಕಸಭಾ ಚುನಾವಣೆಯನ್ನು ಇವರ ನೇತೃತ್ವದಲ್ಲಿ ನಡೆಸಲು ಪಕ್ಷ ನಿರ್ಧರಿಸಿದಂತಿದೆ. ಯುವ ಹವಾ ಶುರುವಾಗಲಿದೆ. ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ಮುಖಂಡರೊಂದಿಗೆ ಸಮನ್ವಯತೆ ಸಾಧಿಸುವ ಹೊಣೆಯೂ ಇವರ ಮೇಲಿದೆ. ಕಳೆದ ಬಾರಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದ ಪ್ರಿಯಾಂಕ್‌ ಅವರಿಗೆ ಈ ಬಾರಿ ಕಲಬುರಗಿ ಹೊಣೆಯನ್ನು ಅರಸಿ ಬಂದಂತಾಗಿದೆ.

ಬೀದರ್‌ನಲ್ಲಿ ಕಾಂಗ್ರೆಸ್‌ನ ಮತ್ತು ಜೆಡಿಎಸ್‌ ಸಚಿವರು ಇದ್ದರಿಂದ ಬೀದರ್‌ ಅನ್ನು ಜೆಡಿಎಸ್‌ನ ಬಂಡೆಪ್ಪ ಅವರಿಗೆ ನೀಡಿ, ಯಾದಗಿರಿಯನ್ನು ಕಾಂಗ್ರೆಸ್‌ನ ರಾಜಶೇಖರ ಪಾಟೀಲ್‌ಗೆ ವಹಿಸಲಾಗಿದೆ. ಆ ಮೂಲಕ ಸಮತೋಲನ ಕಾಪಾಡುವ ಕೆಲಸವನ್ನು ಮಾಡಲಾಗಿದೆ. ಇದೀಗ ಅಭಿವೃದ್ಧಿ ವೇಗ ಪಡೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಹೈಕ ಮಂಡಳಿಗೆ ಯಾರು?:


ಮೂವರು ಸಚಿವರಿಗೆ ಜಿಲ್ಲಾ ಉಸ್ತುವಾರಿ ಪಟ್ಟ ನೀಡಲಾಗಿದ್ದು, ಇಲ್ಲಿನ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಉಸ್ತುವಾರಿ ಸಚಿವರಿಗೆ ಸರಣಿಯಂತೆ ಅಧ್ಯಕ್ಷ ಸ್ಥಾನ ನೀಡಬೇಕೆನ್ನುವುದು ಮಂಡಳಿಯ ಕಾನೂನಿನಲ್ಲಿದೆ. ಹೀಗಾಗಿ ಮೂವರಲ್ಲಿ ಯಾರಿಗೆ ಪಟ್ಟ ಸಿಗಲಿದೆ ಎನ್ನುವುದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ.

ಕಳೆದ ಬಾರಿ ಸಚಿವರಾಗಿ ಮಾಡಿರುವ ಕೆಲಸವನ್ನು ಪರಿಗಣನೆಗೆ ತೆಗೆದುಕೊಂಡು ಈ ಬಾರಿ ಪಕ್ಷ ಕಲಬುರಗಿ ಉಸ್ತುವಾರಿ ಸಚಿವನಾಗಿ ನಿಯೋಜಿಸಿದೆ. ಜಿಲ್ಲೆಯ ಅಭಿವೃದ್ಧಿಗೆ ಶಕ್ತಿಮೀರಿ ಕೆಲಸ ಮಾಡುವೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯ.

-ಪ್ರಿಯಾಂಕ್‌ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ, ಕಲಬುರಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ