ಆ್ಯಪ್ನಗರ

ಕಲಬುರಗಿ: ಬಸ್ಸಿಗೆ ಕಲ್ಲು, ಮೂವರ ಬಂಧನ ಮುಂದುವರಿದ ಸಾರಿಗೆ ಮುಷ್ಕರ

ಜಖಂಗೊಂಡಿರುವ ಬಸ್ ಕಲಬುರಗಿಯಿಂದ ವಾಡಿ ಮಾರ್ಗವಾಗಿ ಯಾದಗಿರಿಗೆ ತೆರಳುತ್ತಿತ್ತು. ಆಗ ಮತ್ತೆ ಮುಷ್ಕರ ನಿರತ ವಾಹನ ಚಾಲಕರು ಬಸ್ಸಿಗೆ ಕಲ್ಲು ತೂರಿದ್ದಾರೆ ಎಂದು ದೂರಲಾಗಿದೆ.

Vijaya Karnataka Web 13 Apr 2021, 11:36 pm
ಕಲಬುರಗಿ: ಯುಗಾದಿ ಹಬ್ಬದ ದಿನ ಮಂಗಳವಾರವೂ ಕೂಡ ಸಾರಿಗೆ ಮುಷ್ಕರ ಮುಂದುವರಿದಿದೆ.
Vijaya Karnataka Web ಪೊಲೀಸ್
ಪೊಲೀಸ್


ಸಾರಿಗೆ ಇಲಾಖೆಯ ಬಸ್‌ಗಳ ಬದಲಿ ಖಾಸಗಿ ವಾಹನಗಳೇ ಹೆಚ್ಚು ಓಡಾಡಿದವಾದರೂ ಸಾರ್ವಜನಿಕ ಪ್ರಯಾಣ ಕ್ಷೀಣಿಸಿತ್ತು. ಹಬ್ಬದ ಪ್ರಯುಕ್ತ ಪ್ರಯಾಣಿಕರು ಕೇಂದ್ರ ಬಸ್ ನಿಲ್ದಾಣಕ್ಕೆ ಹೆಚ್ಚು ಬರಲಿಲ್ಲ.

ಆದರೆ ನಗರದ ಬಹುತೇಕ ಹೊರವಲಯದ ವೃತ್ತಗಳಿಂದ ನಾನಾ ದೇವಸ್ಥಾನ ಹಾಗೂ ಪವಿತ್ರ ಕ್ಷೇತ್ರಗಳಿಗೆ ಖಾಸಗಿ ಬಸ್ ಮತ್ತು ಟೆಂಪೋ ಟ್ರ್ಯಾಕ್ಸ್ ಗಳು ಓಡಿದವು. ಈ ಮಧ್ಯೆ ವಾಡಿ ಪಟ್ಟಣದಲ್ಲಿ ಸಾರಿಗೆ ಬಸ್ಸಿಗೆ ಕಲ್ಲು ತೂರಿದರೂ ಎನ್ನುವ ಕಾರಣಕ್ಕೆ ಸಾರಿಗೆ ಇಲಾಖೆಯ ಮೂವರು ನೌಕರರನ್ನು ಬಂಧಿಸಲಾಗಿದೆ.

ಬಂಧಿತರನ್ನು ಸೇಡಂ ಡಿಪೋ ಬಸ್ ಚಾಲಕ ವಿಶ್ವನಾಥ್ ಚವ್ಹಾಣ್ ಚಿತ್ತಾಪೂರ ಡಿಪೋ ಬಸ್ ಚಾಲಕ ಅಶೋಕ್ ಮೇಲಿನಕೇರಿ ಮತ್ತು ಬಸವರಾಜ ಜಾಧವ ಎಂದು ಗುರುತಿಸಲಾಗಿದೆ.

ಜಖಂಗೊಂಡಿರುವ ಬಸ್ ಕಲಬುರಗಿಯಿಂದ ವಾಡಿ ಮಾರ್ಗವಾಗಿ ಯಾದಗಿರಿಗೆ ತೆರಳುತ್ತಿತ್ತು. ಆಗ ಮತ್ತೆ ಮುಷ್ಕರ ನಿರತ ವಾಹನ ಚಾಲಕರು ಬಸ್ಸಿಗೆ ಕಲ್ಲು ತೂರಿದ್ದಾರೆ ಎಂದು ದೂರಲಾಗಿದೆ.

ಅಲ್ಲದೆ ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ