ಆ್ಯಪ್ನಗರ

ಟ್ರ್ಯಾಕ್ಷ ರ್‌ ಚಲಾಯಿಸಿ ಇಬ್ಬರು ಬಾಲಕರ ಸಾವು

ರಸ್ತೆ ಬದಿ ಗೇರ್‌ ಹಾಕಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ ಮೇಲೆ ಕುಳಿತು ನ್ಯೂಟ್ರಲ್‌ಗೊಳಿಸಿದ ಪರಿಣಾಮ ಅದರ ಅಡಿಯಲ್ಲೇ ಸಿಲುಕಿ ಇಬ್ಬರು ಬಾಲಕರು ಸಾವಿಗೀಡಾದ ಘಟನೆ ಆಳಂದ ತಾಲೂಕಿನ ಹೆಬಳಿ ತಾಂಡಾದಲ್ಲಿ ಬುಧವಾರ ನಡೆದಿದೆ.

Vijaya Karnataka 23 May 2019, 5:00 am
ಆಳಂದ :ರಸ್ತೆ ಬದಿ ಗೇರ್‌ ಹಾಕಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ ಮೇಲೆ ಕುಳಿತು ನ್ಯೂಟ್ರಲ್‌ಗೊಳಿಸಿದ ಪರಿಣಾಮ ಅದರ ಅಡಿಯಲ್ಲೇ ಸಿಲುಕಿ ಇಬ್ಬರು ಬಾಲಕರು ಸಾವಿಗೀಡಾದ ಘಟನೆ ಆಳಂದ ತಾಲೂಕಿನ ಹೆಬಳಿ ತಾಂಡಾದಲ್ಲಿ ಬುಧವಾರ ನಡೆದಿದೆ.
Vijaya Karnataka Web two boys were killed in the truck
ಟ್ರ್ಯಾಕ್ಷ ರ್‌ ಚಲಾಯಿಸಿ ಇಬ್ಬರು ಬಾಲಕರ ಸಾವು


ಸುಪ್ರಿಯಾ ಸಂಜು ರಾಠೋಡ (7), ರೋಹನ್‌ ದಶರಥ ಚವ್ಹಾಣ (8) ಸಾವಿಗೀಡಾದ ಬಾಲಕರು. ಇಬ್ಬರೂ ಟ್ರ್ಯಾಕರ್‌ ಮೇಲೆ ಕುಳಿತು ಆಟವಾಡುತ್ತಿದ್ದರು. ಗೇರ್‌ನಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ನ ಗೇರ್‌ ಲಿವರ್‌ ಅಲುಗಾಡಿಸಿದ ಪರಿಣಾಮ ಟ್ರ್ಯಾಕ್ಟರ್‌ ನ್ಯೂಟ್ರಲ್‌ ಆಗಿದೆ. ಅದಾಗಲೇ ಇಳಿಜಾರಿನಲ್ಲಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್‌ ಮುಂದೆ ಹೋಗಲು ಆರಂಭಿಸಿದೆ. ಇದೇವೇಳೆ, ರಸ್ತೆ ಮಧ್ಯೆ ಇದ್ದ ನಿಖಿಲ್‌ ಸಂಜು ರಾಠೋಡ್‌, ಅಶ್ವಿನಿ ದಶರಥ ಚವ್ಹಾಣ, ಆರೋಷ್‌ ಸಂತೋಷ ರಾಠೋಡ್‌ ಗಾಯಗೊಂಡಿದ್ದು, ನಿಖಿಲ್‌ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಗಾಯಾಳುಗಳನ್ನು ಮಹಾರಾಷ್ಟ್ರದ ಉಮರ್ಗಾ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಆಳಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಎಸ್‌ಐ ಮಹಾಂತೇಶ ಬಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ