ಆ್ಯಪ್ನಗರ

ಎತ್ತಿನ ಬಂಡಿಗೆ ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತ, ಎರಡು ಎತ್ತು ಸ್ಥಳದಲ್ಲೇ ಸಾವು..!

ಇಂದು ಬೆಳಗ್ಗೆ ಕಾರಿನಲ್ಲಿ ಹೊರಟಿದ್ದಾಗ ಕೋಡ್ಲಿ ಸಮೀಪದ ರಾಜ್ಯ ಹೆದ್ದಾರಿ 32ರ ಮೇಲೆ ಸ್ವಿಫ್ಟ್ ಕಾರು ರಭಸವಾಗಿ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಎರಡೂ ಎತ್ತುಗಳು ತಕ್ಷಣ ಸಾವನ್ನಪ್ಪಿವೆ.

Vijaya Karnataka Web 24 Aug 2020, 12:14 pm
ಕಲಬುರಗಿ: ಶಿಕ್ಷಕಿಯೊಬ್ಬರು ಚಾಲನೆ ಮಾಡುತ್ತಿದ್ದ ಕಾರು ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಎತ್ತುಗಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ಚಿಂಚೋಳಿ ತಾಲೂಕಿನ ಕೋಡ್ಲಿ ಗ್ರಾಮದ ಬಳಿ ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ನಡೆದಿದೆ.
Vijaya Karnataka Web Kalaburgi


ಗುಲ್ಬರ್ಗ ವಿವಿ ಪ್ರೊಫೆಸರ್‌ಗೆ ಕಪಾಳಮೋಕ್ಷ , ಪ್ರೊ. ಮೇಲಕೇರಿ ವಿರುದ್ಧ ಎಫ್‌ಐಆರ್‌

ಕಲಬುರಗಿಯಿಂದ ಕಾರು ಸುಲೇಪೇಟ ಕಡೆಗೆ ಹೊರಟಿತ್ತು. ಈ ಕಾರಿನಲ್ಲಿ ಓರ್ವ ಬಾಲಕ ಸೇರಿದಂತೆ ಮೂವರು ಶಿಕ್ಷಕಿಯರು ಇದ್ದರು. ಈ ಶಿಕ್ಷಕಿಯರು ನಿತ್ಯ ಕಲಬುರಗಿ-ಸುಲೇಪೇಟ ಮಧ್ಯೆ ಪ್ರಯಾಣಿಸುತ್ತಾರೆ. ಇಂದು ಬೆಳಗ್ಗೆ ಕಾರಿನಲ್ಲಿ ಹೊರಟಿದ್ದಾಗ ಕೋಡ್ಲಿ ಸಮೀಪದ ರಾಜ್ಯ ಹೆದ್ದಾರಿ 32ರ ಮೇಲೆ ಸ್ವಿಫ್ಟ್ ಕಾರು ರಭಸವಾಗಿ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಎರಡೂ ಎತ್ತುಗಳು ತಕ್ಷಣ ಸಾವನ್ನಪ್ಪಿವೆ.

ಗಂಡ ಕಾಂಗ್ರೆಸ್‌, ಹೆಂಡತಿ ಬಿಜೆಪಿ..! ಕಲಬುರಗಿಯಲ್ಲೊಂದು ಪಕ್ಷ ಮೀರಿದ ಲವ್‌ ಸ್ಟೋರಿ

ಸಾವ್ನಪ್ಪಿರುವ ಎತ್ತುಗಳು ಗ್ರಾಮದ ತಮ್ಮಣ್ಣ ಪೂಜಾರಿ ಎಂಬ ರೈತರಿಗೆ ಸೇರಿದವುಗಳಾಗಿದ್ದು, ಎತ್ತಿನ ಬಂಡಿಯಲ್ಲಿದ್ದ ವ್ಯಕ್ತಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಗಾಯಗೊಂಡಿರುವ ಶಿಕ್ಷಕಿಯರನ್ನು ಆಂಬ್ಯುಲೆನ್ಸ್ ಮೂಲಕ ತಕ್ಷಣ ಕಾಳಗಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

ಎಐಸಿಸಿ ಅಧ್ಯಕ್ಷ ಸ್ಥಾನ ವಿಚಾರದಲ್ಲಿ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಿದ ಮಲ್ಲಿಕಾರ್ಜುನ ಖರ್ಗೆ..!

ರಟಕಲ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ಇನ್ನೂ ದಾಖಲಾಗಿಲ್ಲ‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ