ಆ್ಯಪ್ನಗರ

ರಾಜೀನಾಮೆ ಅಂಗೀಕಾರ ವಿಳಂಬದ ಹಿಂದೆ ಖರ್ಗೆ ಕೈವಾಡ ಶಂಕೆ: ಉಮೇಶ್ ಜಾಧವ್

ನನ್ನ ರಾಜೀನಾಮೆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬಾರದು. ರಾಜೀನಾಮೆ ಅಂಗೀಕಾರ ಆಗದೇ ಇದ್ದರೂ ಲೋಕಸಭೆಗೆ ಸ್ಪರ್ಧಿಸಲು ಯಾವುದೇ ಅಡ್ಡಿ ಇಲ್ಲ. ಸ್ಪೀಕರ ರಮೇಶ್ ಕುಮಾರ್ ಅವರು ನನ್ನ ರಾಜೀನಾಮೆ ಅಂಗೀಕರಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Vijaya Karnataka Web 14 Mar 2019, 2:29 pm
ಕಲಬುರಗಿ: 'ನಾನು ನೀಡಿರುವ ರಾಜೀನಾಮೆ ಅಂಗೀಕಾರ ವಿಳಂಬವಾಗುತ್ತಿರುವುದರ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ಇತ್ತೀಚೆಗೆ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಉಮೇಶ್ ಜಾಧವ್ ಹೇಳಿದರು.
Vijaya Karnataka Web jadhav


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜೀನಾಮೆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬಾರದು. ರಾಜೀನಾಮೆ ಅಂಗೀಕಾರ ಆಗದೇ ಇದ್ದರೂ ಲೋಕಸಭೆಗೆ ಸ್ಪರ್ಧಿಸಲು ಯಾವುದೇ ಅಡ್ಡಿ ಇಲ್ಲ. ಸ್ಪೀಕರ ರಮೇಶ್ ಕುಮಾರ್ ಅವರು ನನ್ನ ರಾಜೀನಾಮೆ ಅಂಗೀಕರಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸೋಲಿನ ಭೀತಿಯಿಂದ ಖರ್ಗೆ ಕುಟುಂಬ ಮಾನಸಿಕ ತೊಂದರೆ ನೀಡುವ ಉದ್ದೇಶವನ್ನು ಇರಬಹುದು ಎಂದು ಆರೋಪಿಸಿರುವ ಜಾಧವ್, ಸೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ನನಗೆ ಟಿಕೆಟ್ ಘೋಷಣೆಯಾಗಲಿದೆ ಎಂದು ತಿಳಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಚಿಂಚೋಳಿಗೆ ದತ್ತು ಪುತ್ರನಾಗಿ ಬರುವುದಾಗಿ ಹೇಳಿದ್ದಾರೆ. ಆದರೆ ಮಕ್ಕಳು ಇಲ್ಲದಿದ್ದರೆ ಮಾತ್ರ ದತ್ತು ಪಡೆಯುತ್ತಾರೆ. ಆದರೆ ಚಿಂಚೋಳಿಯಲ್ಲಿ ನೂರಾರು ಮಕ್ಕಳು ಇರುವಾಗ ಇವರ ಅವಶ್ಯಕತೆ ಕ್ಷೇತ್ರದ ಜನತೆಗೆ ಇಲ್ಲ ಎಂದು ಹೇಳಿದರು.

ನಾನು ಹಣ ಪಡೆದು ಬಿಜೆಪಿ ಸೇರ್ಪಡೆಯಾಗಿದ್ದೇನೆಂದು ಪ್ರಿಯಾಂಕ್ ಖರ್ಗೆ ಆರೋಪಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.

ನಾನು ಮಾರಾಟವಾಗಿದ್ದೇನೆಂದು ಸುಳ್ಳು ಹೇಳುವ ಮೂಲಕ ಚಿಂಚೋಳಿ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಜಾಧವ್ ಕಿಡಿಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ