ಆ್ಯಪ್ನಗರ

ವಚನ ಸಾಹಿತ್ಯ ಧರ್ಮ ಸಮಾರಂಭಕ್ಕೆ ಚಾಲನೆ

ಮುಕ್ತಿಯ ಸಾಧನೆಗಳಲ್ಲಿ ಭಕ್ತಿಯು ಪ್ರಮುಖವಾದದ್ದು ಈ ಭಕ್ತಿಯಲ್ಲಿ 9 ವಿಧಾನವಾಗಿದ್ದು ಅವುಗಳಲ್ಲಿ ಶ್ರವಣ ಭಕ್ತಿಯೇ ಶ್ರೇಷ್ಠವಾದದ್ದು ಎಂದು ಕಾಶಿಜ್ಞಾನ ಸಿಂಹಾಸನಾಧೀಶ್ವರ ಜಗದ್ಗರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.

Vijaya Karnataka 20 Jul 2019, 5:17 pm
ಕಲಬುರಗಿ :ಮುಕ್ತಿಯ ಸಾಧನೆಗಳಲ್ಲಿ ಭಕ್ತಿಯು ಪ್ರಮುಖವಾದದ್ದು ಈ ಭಕ್ತಿಯಲ್ಲಿ 9 ವಿಧಾನವಾಗಿದ್ದು ಅವುಗಳಲ್ಲಿ ಶ್ರವಣ ಭಕ್ತಿಯೇ ಶ್ರೇಷ್ಠವಾದದ್ದು ಎಂದು ಕಾಶಿಜ್ಞಾನ ಸಿಂಹಾಸನಾಧೀಶ್ವರ ಜಗದ್ಗರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
Vijaya Karnataka Web vachana literary religious ceremony
ವಚನ ಸಾಹಿತ್ಯ ಧರ್ಮ ಸಮಾರಂಭಕ್ಕೆ ಚಾಲನೆ


ನಗರದ ಸೊಗಸನಗೇರಿಯ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಧರ್ಮ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಂಸಾರದಲ್ಲಿ ಜನ್ಮತಾಳಿದ ಪ್ರತಿಯೊಬ್ಬ ಮನುಷ್ಯನ ಜೀವನದ ಅಂತಿಮಗುರಿ ಮುಕ್ತಿ ಆಗಿರುತ್ತದೆ. ಆ ಮುಕ್ತಿಯನ್ನು ಪಡೆಯಲು ಶ್ರವಣ ಭಕ್ತಿಯು ಅನೇಕ ಜನ್ಮಗಳಿಂದ ಬಂದಿರುವ ಅನಾದಿ ಅಹಂಕಾರ ಮಮಕಾರಗಳು ತೊಡಗಬೇಕಾದರೆ ಗುರುವಿನ ಉಪದೇಶವೇ ಮುಖ್ಯವಾದದ್ದು, ಸದ್ಗುರು ಉಪದೇಶದ ಮೂಲಕ ಮನುಷ್ಯನ ಮನಸ್ಸಿನಲ್ಲಿ ಬಂದಿರುವ ನಾನು ಮತ್ತು ನನ್ನದೆಂಬ ತಪ್ಪು ತಿಳಿವಳಿಕೆಯನ್ನು ದೂರಮಾಡುತ್ತಾರೆ. ಹೀಗೆ ಗುರುವಿನ ಉಪದೇಶದ ಶ್ರವಣವೇ ಮುಕ್ತಿಯ ಸಾಧನವು. ಕಾರಣ 9ವಿಧ ಭಕ್ತಿಗಳಲ್ಲಿ ಶ್ರವಣ ಭಕ್ತಿ ಇಷ್ಠವಾದದ್ದು, ಪ್ರತಿಯೋಬ್ಬರು ಧರ್ಮಗ್ರಂಥಗಳ ಸ್ವಾಧ್ಯಯ ಹಾಗೂ ಪ್ರವಚನಗಳ ಶ್ರವಣಮಾಡಬೇಕೆಂದು ನುಡಿದರು.

ಮಾಜಿ ಸಂಸದರಾದ ಡಾ. ಬಿ.ಜಿ. ಜವಳಿ ಧರ್ಮಸಭೆ ಉದ್ಘಾಟಿಸಿದರು. ಎಚ್‌.ಕೆ.ಇ. ಸಂಸ್ಥೆಯ ಅಧ್ಯಕ್ಷ ರಾದ ಬಸವರಾಜ ಭೀಮಳ್ಳಿ, ಕಡಗಂಚಿಯ ವೀರಭದ್ರಶಿವಾಚಾರ್ಯರು ನೇತೃತ್ವ ವಹಿಸಿದರು, ಆಳಂದ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು, ಕಿಣ್ಣಿಸುಲ್ತಾನದ ಶಿವ ಶಾಂತಲಿಂಗ ಶಿವಾಚಾರ್ಯರು, ಇಟಗಾದ ಶಿವಸಿದ್ಧ ಶಿವಾಚಾರ್ಯರು, ಸುಲೇಪಟ, ಕಡಗಂಚಿ ಶ್ರೀಗಳು, ಕರಿಸಿದ್ದಪ್ಪ ಪಾಟೀಲ ಹರಸೂರ ಸರ್ವರನ್ನು ಸ್ವಾಗತಿಸಿದರು. ಹಿರಿಯ ಸಾಹಿತಿ ಡಾ. ಎಸ್‌.ಎಂ. ಹಿರೇಮಠ, ಎಂ.ಎಸ್‌. ಪಾಟೀಲ ನರಿಬೋಳ, ದಿವ್ಯಾ ಹಾಗರಗಿ, ಉಮಾಕಾಂತ ಪಾಟೀಲ ಕೇದಾರ, ಬಾಬುರಾವ ಕೋಬಾಳ, ರಾಜಪ್ಪ ಮದಗೊಂಡ, ಮಲ್ಲಣ್ಣ ಕಣ್ಣಿ, ಅಣ್ಣಾರಾವ ಬೆಣ್ಣೂರ, ಶಿವಾನಂದ ಬೆಣ್ಣೂರ, ರೇವಣಸಿದ್ದಪ್ಪ ಪಾಟೀಲ, ಕಲ್ಯಾಣರಾವ ಮಾಸ್ತರ, ಶಿವಾನಂದ ಪಠಪತಿ ಇದ್ದರು. ಗುರುಲಿಂಗಯ್ಯ ಹಿತ್ತಲಶೀರೂರ ಸಂಗಡಿಗರಿಂದ ಸಂಗೀತ ಜರುಗಿತು. ಶಿವಶರಣಪ್ಪ ಸರಸಂಬಾ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ