ಆ್ಯಪ್ನಗರ

ನಗರದಲ್ಲಿ ವೈಷ್ಣೋದೇವಿ ಮಂದಿರ ಸಿದ್ಧ

ನಗರದ ಹೊರ ವಲಯದ ಸೈಯ್ಯದ್‌ ಚಿಂಚೋಳಿ ಬಳಿಯ ರಿಂಗ್‌ ರಸ್ತೆಯಲ್ಲಿ ನಿರ್ಮಾಣವಾಗಿರುವ ವೈಷ್ಣೋದೇವಿ ಮಂದಿರ ಎಲ್ಲರ ಗಮನ ಸೆಳೆಯುತ್ತಿದೆ. ಗಬರಾದಿ ರಿಲಿಜಿಯಸ್‌ ಟ್ರಸ್ಟ್‌ ವತಿಯಿಂದ ನಿರ್ಮಾಣವಾಗಿರುವ ಈ ದೇವಸ್ಥಾನ ದೇಶದ ಎರಡನೇ ದೊಡ್ಡ ದೇವಸ್ಥಾನ ಎಂಬ ಖ್ಯಾತಿ ಪಡೆದಿದೆ.

Vijaya Karnataka 13 Jun 2018, 5:55 pm
ಕಲಬುರಗಿ : ನಗರದ ಹೊರ ವಲಯದ ಸೈಯ್ಯದ್‌ ಚಿಂಚೋಳಿ ಬಳಿಯ ರಿಂಗ್‌ ರಸ್ತೆಯಲ್ಲಿ ನಿರ್ಮಾಣವಾಗಿರುವ ವೈಷ್ಣೋದೇವಿ ಮಂದಿರ ಎಲ್ಲರ ಗಮನ ಸೆಳೆಯುತ್ತಿದೆ. ಗಬರಾದಿ ರಿಲಿಜಿಯಸ್‌ ಟ್ರಸ್ಟ್‌ ವತಿಯಿಂದ ನಿರ್ಮಾಣವಾಗಿರುವ ಈ ದೇವಸ್ಥಾನ ದೇಶದ ಎರಡನೇ ದೊಡ್ಡ ದೇವಸ್ಥಾನ ಎಂಬ ಖ್ಯಾತಿ ಪಡೆದಿದೆ.
Vijaya Karnataka Web vaishno devi temple is ready in the city
ನಗರದಲ್ಲಿ ವೈಷ್ಣೋದೇವಿ ಮಂದಿರ ಸಿದ್ಧ


ಜಮ್ಮು ಕಾಶ್ಮೀರದಲ್ಲಿರುವ ವೈಷ್ಣೋದೇವಿ ದೇವಸ್ಥಾನ ನೋಡಲು ಹೋಗುವುದು ಕಷ್ಟ ಎನ್ನುವವರಿಗೆ ಸ್ಥಳೀಯವಾಗಿಯೇ ದೇವಿಯನ್ನು ವೀಕ್ಷಿಸಿ ಕಣ್ತುಂಬಿಸಿಕೊಳ್ಳಬಹುದು. ವೈಷ್ಣೋದೇವಿ ದೇವಸ್ಥಾನ 14 ಕಿಮೀ ಎತ್ತರದಲ್ಲಿದೆ. ಇದು 108 ಅಡಿ ಎತ್ತರದವರೆಗೆ ನಿರ್ಮಿಸಲಾಗಿದೆ. ಜಮ್ಮು ಕಾಶ್ಮೀರದ ಮಾದರಿಯಲ್ಲಿಯೇ ನಿರ್ಮಿಸಿ ಬಣ್ಣ ಮಾಡಿದ್ದರಿಂದ ಎಲ್ಲರ ಗಮನ ಸೆಳೆಯುತ್ತಿದೆ.

ಮುಂದಿನ ತಿಂಗಳ ಕೇಂದ್ರದ ಸಚಿವರು, ನಾಯಕರನ್ನು ಆಹ್ವಾನಿಸಿ ಮಂದಿರ ಉದ್ಘಾಟಿಸಲು ನಿರ್ಧರಿಸಲಾಗಿದೆ ಎಂದು ಟ್ರಸ್ಟ್‌ ಮುಖಂಡ ರಾಜಕುಮಾರ ಬಿ. ವಾಕೋಡೆ ಗಬರಾದಿ ಹೇಳಿದರು.

ಇಲ್ಲಿನ ಗಬರಾದಿ ಲೇಔಟ್‌ನಲ್ಲಿ ಒಂದು ಎರಡು ಎಕರೆ ಪ್ರದೇಶದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಹೊರಗಿನಿಂದ ನೋಡಿದರೆ ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನ ನೋಡಿದಂತೆಯೇ ಭಾಸವಾಗುತ್ತದೆ. ಈಗಾಗಲೇ ಭಕ್ತರು ದೇವಸ್ಥಾನ ನೋಡಿ ಹೊರಗಿನಿಂದಲೇ ಕಣ್ಣು ತುಂಬಿಸಿಕೊಳ್ಳುತ್ತಿದ್ದಾರೆ. ಒಳಗಡೆ ವೈಷ್ಣೋದೇವಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.

ಕೆಳಗಡೆ ಅಮರನಾಥ ಗುಹೆ ನಿರ್ಮಿಸಲಾಗಿದ್ದು, ಮೇಲ್ಗಡೆ ವೈಷ್ಣೋದೇವಿ ದೇವಸ್ಥಾನ ನಿರ್ಮಿಸಲಾಗಿದೆ. ಟ್ರಸ್ಟ್‌ ಸದಸ್ಯರು, ಗೆಳೆಯರು ಇದಕ್ಕೆ ದೇಣಿಗೆ ನೀಡಿದ್ದಾರೆ. ಆದರೆ ಬೇರೆ ಯಾರಿಂದಲೂ ದೇಣಿಗೆ ಸಂಗ್ರಹಿಸಿಲ್ಲ ಎಂದು ಗಬರಾದಿ ನುಡಿದರು.

ಮೇಯರ್‌ ಭೇಟಿ:

ಈ ವೈಷ್ಣೋದೇವಿ ಮಂದಿರ ಅತ್ಯಾಕರ್ಷಕವಾಗಿ ನಿರ್ಮಿಸಲಾಗಿದ್ದು, ಮಹಾನಗರ ಪಾಲಿಕೆ ಮೇಯರ್‌ ಶರಣುಕುಮಾರ ಮೋದಿ ಭೇಟಿ ನೀಡಿ ವೀಕ್ಷಿಸಿದರು. ಭವ್ಯವಾಗಿ ನಿರ್ಮಾಣವಾಗಿರುವ ದೇವಸ್ಥಾನ ವೀಕ್ಷಿಸಿ ಸಂತಸಪಟ್ಟರು.

ಜಮ್ಮು ಕಾಶ್ಮೀರಕ್ಕೆ ಹೋಗಿ ವೈಷ್ಣೋದೇವಿ ದೇವಸ್ಥಾನ ನೋಡಲು ಅಸಾಧ್ಯವಾಗುವವರಿಗೆ ಕಲಬುರಗಿಯಲ್ಲಿಯೇ ನಿರ್ಮಿಸಲಾಗಿದೆ. ನಮ್ಮ ಕುಲದೇವತೆಯಾದ ಈ ದೇವಸ್ಥಾನ ನಿರ್ಮಾಣ ಕಾರ್ಯ ಮುಗಿದಿದ್ದು, ಉದ್ಘಾಟನೆ ಸಿದ್ಧವಾಗಿದೆ. ಶೀಘ್ರವೇ ಕೇಂದ್ರ ನಾಯಕರನ್ನು ಆಹ್ವಾನಿಸಿ ಉದ್ಘಾಟಿಸಲಾಗುವುದು.

-ರಾಜಕುಮಾರ ವಾಕೋಡೆ, ಗಬರಾದಿ, ಟ್ರಸ್ಟ್‌ ಮುಖಂಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ