ದೇವಯ್ಯ ಗುತ್ತೇದಾರ್
ಕಲಬುರಗಿ : ಕೊಡಗು ನೆರೆ ಸಂತ್ರಸ್ತರಿಗಾಗಿ ದಾನಿಗಳು ಜಿಲ್ಲಾಡಳಿತಕ್ಕೆ ನೀಡಿದ್ದ ಸಾಮಗ್ರಿಗಳು ಸಂಕಷ್ಟದಲ್ಲಿರುವವರಿಗೆ ತಲುಪಿಸದೇ ಇಲ್ಲಿನ ಶಾಲೆಯೊಂದರಲ್ಲಿ ಕೊಳೆಯುತ್ತಿರುವ ಅಂಶ ಬೆಳಕಿಗೆ ಬಂದಿದೆ. ದಾನಿಗಳು ನೀಡಿದ ವಸ್ತುಗಳು ಸಂತ್ರಸ್ತರಿಗೆ ತಲುಪಿಸದೇ ಇದ್ದರಿಂದ ದೇಣಿಗೆ ನೀಡಿದವರಿಗೆ ತೀವ್ರ ನಿರಾಸೆ ಉಂಟು ಮಾಡಿದಂತಾಗಿದೆ.
ನೆರೆ ಸಂತ್ರಸ್ತರಿಗಾಗಿ ಸಹಾಯ ಮಾಡುವಂತೆ ಜಿಲ್ಲಾಧಿಕಾರಿ ಮಾಡಿದ್ದ ಮನವಿಗೆ ಸ್ಪಂದಿಸಿದ ದಾನಿಗಳು ಔಷಧಿ, ಬಿಸ್ಕಿಟ್, ಹೊದಿಕೆ, ಬಟ್ಟೆ ಸೇರಿದಂತೆ ಸಂತ್ರಸ್ತರಿಗೆ ತುರ್ತು ಬೇಕಿರುವ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರು. ಈ ವಸ್ತುಗಳನ್ನು ಜಿಲ್ಲಾಡಳಿತ ಇಲ್ಲಿನ ಸಂತ ಮೇರಿ ಶಾಲೆಯಲ್ಲಿ ಸಂಗ್ರಹಿಸಿ ಇಟ್ಟಿದ್ದು, ಹದಿನೈದು ದಿನಗಳಾದರೂ ಅವುಗಳನ್ನು ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡದೇ ಇರುವುದು ದಾನಿಗಳ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.
ಏನೇನಿವೆ?:
ಸಂತ್ರಸ್ತರಿಗೆ ಬೇಕಿರುವ ಸಾಮಗ್ರಿಗಳ ಪಟ್ಟಿಯನ್ನು ಜಿಲ್ಲಾಡಳಿತ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿತ್ತು. ಅದರನ್ವಯ 32 ಮಾದರಿಯ ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ಮಹಿಳೆಯರಿಗೆ ಬಟ್ಟೆ, ಸೀರೆ , ಮಕ್ಕಳ ಬಟ್ಟೆ, ಕ್ಯಾಂಡಲ್ಸ್, ಬೆಂಕಿ ಪೊಟ್ಟಣ, ಕುಕಿಂಗ್ ಆಯಿಲ್ ಪೊಟ್ಟಣ, ರೇನ್ ಕೋಟ್, ವಾಶಿಂಗ್ ಸೋಫ್ಸ್, ಲುಂಗಿ, ಸೋಫ್ಸ್ ,ಮೇಣದ ಬತ್ತಿ , ಟೂತ್ ಪೇಸ್ಟ್, ಬ್ರಶ್ , ಟಾಲ್ಕಂ ಪೌಡರ್, ಪ್ಯಾಂಪರ್ಸ್, ಶಾಂಪು, ಛತ್ರಿ, ಪ್ಲಾಸ್ಟಿಕ್ ಗ್ಲಾಸ್, ಮೇಣದ ಬತ್ತಿ, ಸ್ಲೀಪ್ಪರ್ಸ್, ಮಕ್ಕಳ ಡ್ರೆಸ್, ವಾರ್ಮ್ ಶಾಲ್ಗಳು, ಟವಲ್ಗಳು, ಮ್ಯಾಟ್ಗಳು, ಪಾದರಕ್ಷೆ, ಬೆಡ್ಶೀಟ್ಗಳು, ಮಿನರಲ್ ವಾಟರ್ ಬಾಟಲ್ಗಳು, ಲಗೇಜ್ ಬ್ಯಾಗ್, ತಲೆ ದಿಂಬು, ಅಡುಗೆ ಪಾತ್ರೆ, ವಾಟರ್ ಪಾಟ್ಸ್ ಸೇರಿದಂತೆ ಸಾವಿರಾರು ಸಾಮಗ್ರಿಗಳನ್ನು ಪ್ಯಾಕ್ ಮಾಡಿ ಇಲ್ಲಿನ ಸೇಂಟ್ ಮೇರಿ ಶಾಲೆಯಲ್ಲಿ ಡಂಪ್ ಇಡಲಾಗಿದೆ. ಯಾರೂ ಕಣ್ಣೆತ್ತಿಯೂ ನೋಡುತ್ತಿಲ್ಲ.
ಜಿಲ್ಲಾಡಳಿತ ಹೇಳಿದ್ದೇನು?:
ಕೊಡಗು ಸಂತ್ರಸ್ತರ ನೆರವಿಗೆ ದಾನಿಗಳು ಉದಾರವಾದ ದೇಣಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಮಾಧ್ಯಮದ ಮೂಲಕ ಕೋರಿದ್ದರು. ''ಹಲವಾರು ಜನರು ಆಹಾರ ಸಾಮಗ್ರಿ, ಬಟ್ಟೆ, ನೀರು, ಹೊದಿಕೆ ನೀಡಿರುವುದು ಸಹಕಾರಿಯಾಗಿದೆ. ಸಂತ್ರಸ್ತರ ದಿನನಿತ್ಯದ ಜೀವನಕ್ಕೆ ಉಪಯೋಗ ಆಗುವಂತಹ ಐಟಂಗಳನ್ನು ಮಾಡಲು ಕೋರಿದ್ದರು. ಅದಕ್ಕೆ ಸ್ಪಂದಿಸಿ ಸಂಘ ಸಂಸ್ಥೆಗಳವರು, ಸ್ವಯಂ ಸೇವಕರು ದೇಣಿಗೆ ನೀಡಿದ್ದರು. ಈ ದೇಣಿಗಯನ್ನು ಸಂಗ್ರಹಿಸಿ ಸೇಂಟ್ ಮೇರಿ ಶಾಲೆಯಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಅದಕ್ಕಾಗಿ ಒಬ್ಬರು ಸಮನ್ವಯ ಅಧಿಕಾರಿಯನ್ನೂ ನಿಯೋಜಿಸಲಾಗಿತ್ತು. ಇವುಗಳನ್ನು ಸಂಗ್ರಹಿಸಿ ಇಟ್ಟು 15 ದಿನಗಳಾದರೂ ಅವುಗಳನ್ನು ಕೊಡಗಿಗೆ ಸಾಗಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಿಲ್ಲ.
ಅಗತ್ಯ ಇದ್ದಾಗ ಕೊಡದಿದ್ದರೆ ಉಪಯೋಗ ಏನು?:
ಕೊಡಗಿನ ಸಂತ್ರಸ್ತರಿಗೆ ಸಕಾಲದಲ್ಲಿ ನೆರವು ಸಿಗಲಿ ಎಂದು ಜಿಲ್ಲೆಯ ಜನರು ಕೈಲಾದಷ್ಟು ದೇಣಿಗೆ ನೀಡಿದ್ದಾರೆ. ಅಲ್ಲಿ ಈಗ ಸಂತ್ರಸ್ತರಿಗೆ ಮಾನವೀಯ ನೆರವು ಬೇಕಿದೆ. ಈಗ ಅವರಿಗೆ ಅಗತ್ಯವಿರುವ ವಸ್ತುಗಳನ್ನು ನೀಡಿದರೆ ದಾನ ನೀಡಿದ್ದಕ್ಕೂ ಸಾರ್ಥಕವಾಗುತ್ತದೆ. ಆದರೆ ಅದು ತಲುಪಿಸಲು ಆಗಿಲ್ಲ. ಹೀಗಾಗಿ ದೇಣಿಗೆ ನೀಡಿದ್ದರೂ ಉಪಯೋಗಕ್ಕೆ ಬರುತ್ತಿಲ್ಲ ಎಂಬ ನೋವು ದೇಣಿಗೆದಾರರನ್ನು ಕಾಡುತ್ತಿದೆ.
ಕೊಡಗು ಸಂತ್ರಸ್ತರಿಗಾಗಿ ನೀಡಿರುವ ನೆರವಿನ ಸಾಮಗ್ರಿಗಳು ಒಂದೆಡೆ ಸಂಗ್ರಹಿಸಿರುವ ಮಾಹಿತಿ ಇದೀಗ ಬಂದಿದೆ. ಶೀಘ್ರವೇ ಅವುಗಳನ್ನು ಸಂತ್ರಸ್ತರಿಗೆ ತಲುಪಿಸಲು ಅಪರ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.
-ಆರ್. ವೆಂಕಟೇಶಕುಮಾರ್,ಜಿಲ್ಲಾಧಿಕಾರಿ, ಕಲಬುರಗಿ
-
ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಗರದಲ್ಲಿ ಸಂಚರಿಸಿ ಸಂತ್ರಸ್ತರ ನೆರವಿಗೆ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಸಂಘ ಸಂಸ್ಥೆಗಳವರೂ ತಂದು ಕೊಟ್ಟಿದ್ದು, ಸಂತಮೇರಿ ಶಾಲೆಯಲ್ಲಿ ಸಂಗ್ರಹಿಸಿ ಇಡಲಾಗಿದೆ. ಆದರೆ ಅವುಗಳನ್ನು ಕೊಡಗು ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಲ್ಲ. ತಕ್ಷಣವೇ ಮಾಡಬೇಕು.
ವಿಠಲ್ ಚಿಕಣಿ, ಸಾಮಾಜಿಕ ಕಾರ್ಯಕರ್ತ, ಕಲಬುರಗಿ
ಕಲಬುರಗಿ : ಕೊಡಗು ನೆರೆ ಸಂತ್ರಸ್ತರಿಗಾಗಿ ದಾನಿಗಳು ಜಿಲ್ಲಾಡಳಿತಕ್ಕೆ ನೀಡಿದ್ದ ಸಾಮಗ್ರಿಗಳು ಸಂಕಷ್ಟದಲ್ಲಿರುವವರಿಗೆ ತಲುಪಿಸದೇ ಇಲ್ಲಿನ ಶಾಲೆಯೊಂದರಲ್ಲಿ ಕೊಳೆಯುತ್ತಿರುವ ಅಂಶ ಬೆಳಕಿಗೆ ಬಂದಿದೆ. ದಾನಿಗಳು ನೀಡಿದ ವಸ್ತುಗಳು ಸಂತ್ರಸ್ತರಿಗೆ ತಲುಪಿಸದೇ ಇದ್ದರಿಂದ ದೇಣಿಗೆ ನೀಡಿದವರಿಗೆ ತೀವ್ರ ನಿರಾಸೆ ಉಂಟು ಮಾಡಿದಂತಾಗಿದೆ.
ನೆರೆ ಸಂತ್ರಸ್ತರಿಗಾಗಿ ಸಹಾಯ ಮಾಡುವಂತೆ ಜಿಲ್ಲಾಧಿಕಾರಿ ಮಾಡಿದ್ದ ಮನವಿಗೆ ಸ್ಪಂದಿಸಿದ ದಾನಿಗಳು ಔಷಧಿ, ಬಿಸ್ಕಿಟ್, ಹೊದಿಕೆ, ಬಟ್ಟೆ ಸೇರಿದಂತೆ ಸಂತ್ರಸ್ತರಿಗೆ ತುರ್ತು ಬೇಕಿರುವ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರು. ಈ ವಸ್ತುಗಳನ್ನು ಜಿಲ್ಲಾಡಳಿತ ಇಲ್ಲಿನ ಸಂತ ಮೇರಿ ಶಾಲೆಯಲ್ಲಿ ಸಂಗ್ರಹಿಸಿ ಇಟ್ಟಿದ್ದು, ಹದಿನೈದು ದಿನಗಳಾದರೂ ಅವುಗಳನ್ನು ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡದೇ ಇರುವುದು ದಾನಿಗಳ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.
ಏನೇನಿವೆ?:
ಸಂತ್ರಸ್ತರಿಗೆ ಬೇಕಿರುವ ಸಾಮಗ್ರಿಗಳ ಪಟ್ಟಿಯನ್ನು ಜಿಲ್ಲಾಡಳಿತ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿತ್ತು. ಅದರನ್ವಯ 32 ಮಾದರಿಯ ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ಮಹಿಳೆಯರಿಗೆ ಬಟ್ಟೆ, ಸೀರೆ , ಮಕ್ಕಳ ಬಟ್ಟೆ, ಕ್ಯಾಂಡಲ್ಸ್, ಬೆಂಕಿ ಪೊಟ್ಟಣ, ಕುಕಿಂಗ್ ಆಯಿಲ್ ಪೊಟ್ಟಣ, ರೇನ್ ಕೋಟ್, ವಾಶಿಂಗ್ ಸೋಫ್ಸ್, ಲುಂಗಿ, ಸೋಫ್ಸ್ ,ಮೇಣದ ಬತ್ತಿ , ಟೂತ್ ಪೇಸ್ಟ್, ಬ್ರಶ್ , ಟಾಲ್ಕಂ ಪೌಡರ್, ಪ್ಯಾಂಪರ್ಸ್, ಶಾಂಪು, ಛತ್ರಿ, ಪ್ಲಾಸ್ಟಿಕ್ ಗ್ಲಾಸ್, ಮೇಣದ ಬತ್ತಿ, ಸ್ಲೀಪ್ಪರ್ಸ್, ಮಕ್ಕಳ ಡ್ರೆಸ್, ವಾರ್ಮ್ ಶಾಲ್ಗಳು, ಟವಲ್ಗಳು, ಮ್ಯಾಟ್ಗಳು, ಪಾದರಕ್ಷೆ, ಬೆಡ್ಶೀಟ್ಗಳು, ಮಿನರಲ್ ವಾಟರ್ ಬಾಟಲ್ಗಳು, ಲಗೇಜ್ ಬ್ಯಾಗ್, ತಲೆ ದಿಂಬು, ಅಡುಗೆ ಪಾತ್ರೆ, ವಾಟರ್ ಪಾಟ್ಸ್ ಸೇರಿದಂತೆ ಸಾವಿರಾರು ಸಾಮಗ್ರಿಗಳನ್ನು ಪ್ಯಾಕ್ ಮಾಡಿ ಇಲ್ಲಿನ ಸೇಂಟ್ ಮೇರಿ ಶಾಲೆಯಲ್ಲಿ ಡಂಪ್ ಇಡಲಾಗಿದೆ. ಯಾರೂ ಕಣ್ಣೆತ್ತಿಯೂ ನೋಡುತ್ತಿಲ್ಲ.
ಜಿಲ್ಲಾಡಳಿತ ಹೇಳಿದ್ದೇನು?:
ಕೊಡಗು ಸಂತ್ರಸ್ತರ ನೆರವಿಗೆ ದಾನಿಗಳು ಉದಾರವಾದ ದೇಣಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಮಾಧ್ಯಮದ ಮೂಲಕ ಕೋರಿದ್ದರು. ''ಹಲವಾರು ಜನರು ಆಹಾರ ಸಾಮಗ್ರಿ, ಬಟ್ಟೆ, ನೀರು, ಹೊದಿಕೆ ನೀಡಿರುವುದು ಸಹಕಾರಿಯಾಗಿದೆ. ಸಂತ್ರಸ್ತರ ದಿನನಿತ್ಯದ ಜೀವನಕ್ಕೆ ಉಪಯೋಗ ಆಗುವಂತಹ ಐಟಂಗಳನ್ನು ಮಾಡಲು ಕೋರಿದ್ದರು. ಅದಕ್ಕೆ ಸ್ಪಂದಿಸಿ ಸಂಘ ಸಂಸ್ಥೆಗಳವರು, ಸ್ವಯಂ ಸೇವಕರು ದೇಣಿಗೆ ನೀಡಿದ್ದರು. ಈ ದೇಣಿಗಯನ್ನು ಸಂಗ್ರಹಿಸಿ ಸೇಂಟ್ ಮೇರಿ ಶಾಲೆಯಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಅದಕ್ಕಾಗಿ ಒಬ್ಬರು ಸಮನ್ವಯ ಅಧಿಕಾರಿಯನ್ನೂ ನಿಯೋಜಿಸಲಾಗಿತ್ತು. ಇವುಗಳನ್ನು ಸಂಗ್ರಹಿಸಿ ಇಟ್ಟು 15 ದಿನಗಳಾದರೂ ಅವುಗಳನ್ನು ಕೊಡಗಿಗೆ ಸಾಗಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಿಲ್ಲ.
ಅಗತ್ಯ ಇದ್ದಾಗ ಕೊಡದಿದ್ದರೆ ಉಪಯೋಗ ಏನು?:
ಕೊಡಗಿನ ಸಂತ್ರಸ್ತರಿಗೆ ಸಕಾಲದಲ್ಲಿ ನೆರವು ಸಿಗಲಿ ಎಂದು ಜಿಲ್ಲೆಯ ಜನರು ಕೈಲಾದಷ್ಟು ದೇಣಿಗೆ ನೀಡಿದ್ದಾರೆ. ಅಲ್ಲಿ ಈಗ ಸಂತ್ರಸ್ತರಿಗೆ ಮಾನವೀಯ ನೆರವು ಬೇಕಿದೆ. ಈಗ ಅವರಿಗೆ ಅಗತ್ಯವಿರುವ ವಸ್ತುಗಳನ್ನು ನೀಡಿದರೆ ದಾನ ನೀಡಿದ್ದಕ್ಕೂ ಸಾರ್ಥಕವಾಗುತ್ತದೆ. ಆದರೆ ಅದು ತಲುಪಿಸಲು ಆಗಿಲ್ಲ. ಹೀಗಾಗಿ ದೇಣಿಗೆ ನೀಡಿದ್ದರೂ ಉಪಯೋಗಕ್ಕೆ ಬರುತ್ತಿಲ್ಲ ಎಂಬ ನೋವು ದೇಣಿಗೆದಾರರನ್ನು ಕಾಡುತ್ತಿದೆ.
ಕೊಡಗು ಸಂತ್ರಸ್ತರಿಗಾಗಿ ನೀಡಿರುವ ನೆರವಿನ ಸಾಮಗ್ರಿಗಳು ಒಂದೆಡೆ ಸಂಗ್ರಹಿಸಿರುವ ಮಾಹಿತಿ ಇದೀಗ ಬಂದಿದೆ. ಶೀಘ್ರವೇ ಅವುಗಳನ್ನು ಸಂತ್ರಸ್ತರಿಗೆ ತಲುಪಿಸಲು ಅಪರ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.
-ಆರ್. ವೆಂಕಟೇಶಕುಮಾರ್,ಜಿಲ್ಲಾಧಿಕಾರಿ, ಕಲಬುರಗಿ
-
ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಗರದಲ್ಲಿ ಸಂಚರಿಸಿ ಸಂತ್ರಸ್ತರ ನೆರವಿಗೆ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಸಂಘ ಸಂಸ್ಥೆಗಳವರೂ ತಂದು ಕೊಟ್ಟಿದ್ದು, ಸಂತಮೇರಿ ಶಾಲೆಯಲ್ಲಿ ಸಂಗ್ರಹಿಸಿ ಇಡಲಾಗಿದೆ. ಆದರೆ ಅವುಗಳನ್ನು ಕೊಡಗು ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಲ್ಲ. ತಕ್ಷಣವೇ ಮಾಡಬೇಕು.
ವಿಠಲ್ ಚಿಕಣಿ, ಸಾಮಾಜಿಕ ಕಾರ್ಯಕರ್ತ, ಕಲಬುರಗಿ