ಆ್ಯಪ್ನಗರ

ವಿಕ ಚಿತ್ರಕಲಾ ಸ್ಪರ್ಧೆ: ವಿಜೇತರಿಗೆ ಬಹುಮಾನ

ಗಣೇಶ ಉತ್ಸವದ ಪ್ರಯುಕ್ತ ವಿಜಯ ಕರ್ನಾಟಕ ಸಂಘಟಿಸಿದ್ದ 'ವಿಕೆ ಗಣೇಶ ಪೇಂಟಿಂಗ್‌ ಸ್ಪರ್ಧೆ-2018'ರಲ್ಲಿ ವಿಜೇತರಾದ ಕಲಬುರಗಿ ಸಂತ ಮೇರಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ವರುಣ್‌ ಎಂ. ಬುಕ್ಯಾಲಕರ್‌ಗೆ ಆಳಂದ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಅನಿತಾ ಕೊಂಡಾಪುರ ಬಹುಮಾನ ನೀಡಿ ಗೌರವಿಸಿದರು.

Vijaya Karnataka 14 Oct 2018, 5:02 pm
ಕಲಬುರಗಿ : ಗಣೇಶ ಉತ್ಸವದ ಪ್ರಯುಕ್ತ ವಿಜಯ ಕರ್ನಾಟಕ ಸಂಘಟಿಸಿದ್ದ 'ವಿಕೆ ಗಣೇಶ ಪೇಂಟಿಂಗ್‌ ಸ್ಪರ್ಧೆ-2018'ರಲ್ಲಿ ವಿಜೇತರಾದ ಕಲಬುರಗಿ ಸಂತ ಮೇರಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ವರುಣ್‌ ಎಂ. ಬುಕ್ಯಾಲಕರ್‌ಗೆ ಆಳಂದ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಅನಿತಾ ಕೊಂಡಾಪುರ ಬಹುಮಾನ ನೀಡಿ ಗೌರವಿಸಿದರು.
Vijaya Karnataka Web vk painting competition the winners are rewarded
ವಿಕ ಚಿತ್ರಕಲಾ ಸ್ಪರ್ಧೆ: ವಿಜೇತರಿಗೆ ಬಹುಮಾನ


ವಿಜಯ ಕರ್ನಾಟಕ ಕಚೇರಿಯಲ್ಲಿ ವರುಣ್‌ಗೆ ಬಹುಮಾನ ನೀಡಿದ ಅನಿತಾ ಅವರು, ವಿದ್ಯಾರ್ಥಿಯ ಸಾಧನೆಗೆ ಅಭಿನಂದಿಸಿದರು. ಜೀವನದಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿದರೆ, ಮಕ್ಕಳಲ್ಲಿ ಸೃಜನಾತ್ಮಕತೆ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.

''ನನ್ನ ಗಣೇಶನ ಅವತಾರ'' ಎಂಬ ಶೀರ್ಷಿಕೆ ಈ ಚಿತ್ರಕಲಾ ಸ್ಪರ್ಧೆಗೆ ನೂರಾರು ಚಿತ್ರಗಳು ಬಂದಿದ್ದವು. ಖ್ಯಾತ ಕಲಾವಿದೆ ಡಾ. ವಿಶ್ವೇಶ್ವರಿ ತಿವಾರಿ ಅವರು ಎಲ್ಲ ಚಿತ್ರಗಳನ್ನು ವೀಕ್ಷಿಸಿ ವರುಣ್‌ ಹೆಸರನ್ನು ಬಹುಮಾನಕ್ಕೆ ಆಯ್ಕೆ ಮಾಡಿದ್ದರು.

ಗಣೇಶ ಉತ್ಸವ ಪ್ರಯುಕ್ತ ವಿಜಯ ಕರ್ನಾಟಕ ಏರ್ಪಡಿಸಿದ್ದ ಪೇಂಟಿಂಗ್‌ ಸ್ಪರ್ಧೆಯಲ್ಲಿ ಬಹುಮಾನ ಬಂದಿರುವುದು ಸಂತಸ ತಂದಿದೆ. ಚಿತ್ರ ಬಿಡಿಸಲು ಹುಮ್ಮಸ್ಸು ನೀಡಿದೆ.

- ವರುಣ್‌ ಎಂ. ಬುಕ್ಯಾಲಕರ್‌, ವಿಕ ಪೇಂಟಿಂಗ್‌ ಸ್ಪರ್ಧೆ ವಿಜೇತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ