ಆ್ಯಪ್ನಗರ

ನೌಕರರ ಸಂಘಕ್ಕೆ 13ರಂದು ಮತದಾನ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆಗೆ ಜೂನ್‌ 13ರಂದು ಮತದಾನ ನಡೆಯಲಿದೆ. ಮತದಾನಕ್ಕೆ ಆಧಾರ್‌ ಕಾರ್ಡ್‌, ಇಪಿಐಸಿ, ಪ್ಯಾನ್‌ ಕಾರ್ಡ್‌ ಅಥವಾ ಇಲಾಖಾ ಮುಖ್ಯಸ್ಥರಿಂದ ಅಧಿಕೃತವಾಗಿ ನೀಡಲಾದ ಗುರುತಿಸಿ ಚೀಟಿ ಅಥವಾ ಅಧಿಕೃತ ದಾಖಲೆ ತೋರಿಸುವುದು ಕಡ್ಡಾಯ ಎಂದು ಚುನಾವಣಾಧಿಕಾರಿ ಎಂ.ಬಿ. ಶಾಸ್ತ್ರಿ ತಿಳಿಸಿದ್ದಾರೆ.

Vijaya Karnataka 10 Jun 2019, 9:32 pm
ಕಲಬುರಗಿ :ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆಗೆ ಜೂನ್‌ 13ರಂದು ಮತದಾನ ನಡೆಯಲಿದೆ. ಮತದಾನಕ್ಕೆ ಆಧಾರ್‌ ಕಾರ್ಡ್‌, ಇಪಿಐಸಿ, ಪ್ಯಾನ್‌ ಕಾರ್ಡ್‌ ಅಥವಾ ಇಲಾಖಾ ಮುಖ್ಯಸ್ಥರಿಂದ ಅಧಿಕೃತವಾಗಿ ನೀಡಲಾದ ಗುರುತಿಸಿ ಚೀಟಿ ಅಥವಾ ಅಧಿಕೃತ ದಾಖಲೆ ತೋರಿಸುವುದು ಕಡ್ಡಾಯ ಎಂದು ಚುನಾವಣಾಧಿಕಾರಿ ಎಂ.ಬಿ. ಶಾಸ್ತ್ರಿ ತಿಳಿಸಿದ್ದಾರೆ.
Vijaya Karnataka Web voting for the employees association on 13th
ನೌಕರರ ಸಂಘಕ್ಕೆ 13ರಂದು ಮತದಾನ


ಇದೇ ಜೂ.13ರಂದು ಬೆಳಗ್ಗೆ 11ರಿಂದ ಸಂಜೆ 4ರವರೆಗೆ 50 ಇಲಾಖೆಗಳ 6852 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿರುತ್ತಾರೆ. ಆದರೆ, ಈಗಾಗಲೇ 20 ಇಲಾಖೆಗಳಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಹೀಗಾಗಿ, 30 ಇಲಾಖೆಗಳ 5376 ಮತದಾರರು ಮಾತ್ರ ಈ ಚುನಾವಣೆಯಲ್ಲಿ ಮತ ಚಲಾಯಿಸುವ ಅಧಿಕಾರ ಹೊಂದಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಟ್ಟು 62 ಸ್ಥಾನಗಳಿಗೆ ಈಗಾಗಲೇ 143 ನಾಮಪತ್ರಗಳು ಸ್ವೀಕೃತಗೊಂಡಿವೆ. ಮೇಲಾಗಿ, ಸಂಘದ ನಿಯಮ 8 (1)ರ ಪ್ರಕಾರ ನಿವೃತ್ತಿ, ರಾಜೀನಾಮೆ ಮತ್ತು ವಜಾ ಅಥವಾ ನಿವೃತ್ತಿ-ಕಡ್ಡಾಯ ನಿವೃತ್ತಿ, ಮರಣದಿಂದ ಸದಸ್ಯತ್ವ ತಾನಾಗಿಯೇ ನಿಂತು ಹೋಗುತ್ತದೆ. ಇಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಮತದಾನ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಎಲ್ಲ ಸರಕಾರಿ ನೌಕರರು ಈ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿ ಪೂರ್ಣವಾಗಿ ಸಂಪನ್ನಗೊಳಿಸಬೇಕೆಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿಗಾಗಿ ಚುನಾವಣಾಧಿಕಾರಿ ಎಂ.ಬಿ.ಶಾಸ್ತ್ರಿ ಅವರನ್ನು (ಮೊ.9448552319) ಸಂಪರ್ಕಿಸಬಹುದು ಎಂದಿದ್ದಾರೆ.

ಅವಿರೋಧವಾಗಿ ಆಯ್ಕೆಗೊಂಡವರು

ಪ್ರಕಾಶ ಶಿವಶರಣಪ್ಪ-ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕ ಕಚೇರಿ, ಸತೀಶ-ಕೈಗಾರಿಕೆ ಮತ್ತು ಉದ್ಯೋಗ ತರಬೇತಿ ಕೇಂದ್ರ, ನಾಗೇಂದ್ರ ಪಾನಗಾಂವ ಮತ್ತು ವೀರಭದ್ರಯ್ಯ-ನ್ಯಾಯಾಂಗ ಇಲಾಖೆ, ಜಿಲ್ಲಾ ಸತ್ರ ನ್ಯಾಯಾಲಯ, ಮಾನಸಿಂಗ್‌-ಸರಕಾರಿ ಮುದ್ರಣಾಲಯ ಮತ್ತು ಬಂದರು, ಸರಕಾರಿ ಮುದ್ರಣಾಲಯ ಮತ್ತು ಸ್ಟೇಷನರಿ ಇಲಾಖೆ, ಉದಯಕುಮಾರ ಮೋದಿ-ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ತಾಲೂಕು ಪಂಚಾಯತಿ, ಹಣಮಂತ ಲೇಂಗಟಿ-ಅಕ್ಷರ ದಾಸೋಹ ಯೋಜನೆ ಶಾಖೆ ಜಿಲ್ಲಾ ಮತ್ತು ತಾಲೂಕು ಪಂಚಾಯತಿ, ಮಲ್ಲಿನಾಥ ಮಂಗಲಗಿ ಮತ್ತು ವಿಜಯಕುಮಾರ-ಲಿಪಿಕ ನೌಕರರು,ಆಯುಕ್ತರ ಕಚೇರಿ ಮತ್ತು ಉಪ ನಿರ್ದೇಶಕರ ಕಚೇರಿ ಸಾ.ಶಿ.ಇಲಾಖೆ, ಪ್ರಕಾಶ ಹಯ್ಯಾಳಕರ್‌-ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸುಭಾಶ್ಚಂದ್ರ ಫುಲಾರಿ-ಮೋಟಾರು ವಾಹನ ಇಲಾಖೆ, ಎಸ್‌.ಆರ್‌.ಪಲ್ಲೇದ-ರೇಷ್ಮೆ ಇಲಾಖೆ, ರೇಷ್ಮೆ ಸಹಾಯಕರ ನಿರ್ದೇಶಕರ ಕಾರ್ಯಾಲಯ, ಗುರುಲಿಂಗಪ್ಪ ಪಾಟೀಲ್‌-ರಾಜ್ಯ ಲೆಕ್ಕ ಪತ್ರ ಇಲಾಖೆ, ಜಂಟಿ ನಿರ್ದೇಶಕರ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ, ಶಿವಕುಮಾರ-ಕೇಂದ್ರ ಕಾರಾಗೃಹ ಇಲಾಖೆ ಮತ್ತು ಎನ್‌ಸಿಸಿ ಕಲಬುರಗಿ. ಕೇಂದ್ರ ಕಾರಾಗೃಹ, ಅಬ್ದುಲ್‌ ಅಜೀಮ್‌-ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ರವಿ ಎಸ್‌. ಮಿರಸ್ಕರ್‌- ವಾರ್ತಾ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಅನಿಲ್‌ಕುಮಾರ ಬಿ.ಹಾಲು-ಪದವಿ ಕಾಲೇಜುಗಳ ಮತ್ತು ಜಂಟಿ ನಿರ್ದೇಶಕರ ಕಾರ್ಯಾಲಯ, ಕುಪೇಂದ್ರ ಪಾಟೀಲ್‌-ಜಿಲ್ಲಾ ಪಂಚಾಯಿತಿ ಕಲಬುರಗಿ, ಡಾ.ರಿಯಾಜ್‌ ಎಚ್‌. ಸುಳ್ಳದ-ಆಯುಷ್‌, ಡ್ರಗ್ಸ್‌ ಮತ್ತು ಇಎಸ್‌ಐ ಇಲಾಖೆ ಆಯುಷ್‌ ಇಲಾಖೆ, ಬಾಬುರಾವ್‌, ಕೆ.ಕಿರಣಕುಮಾರ, ಎನ್‌.ಎಂ.ಉಮಾಮಹೇಶ್ವರ - ಕಂದಾಯ ಇಲಾಖೆ, ವಿಶ್ವನಾಥ ಸಿಂಗ್‌-ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ, ಅರುಣಕುಮಾರ ಎನ್‌. ಪಾಟೀಲ್‌-ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ, ಅಧೀಕ್ಷಕ ಅಭಿಯಂತರರು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವೃತ್ತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ