ಆ್ಯಪ್ನಗರ

ವೀರಶೈವ ಧರ್ಮದ್ದು ನಿಸರ್ಗ ನಿರ್ಮಿತ ಸಿದ್ಧಾಂತ

ವೀರಶೈವ ಧರ್ಮವು ನಿಸರ್ಗ ನಿರ್ಮಿತ ಧರ್ಮದ ಸಿದ್ಧಾಂತದ ಹಿನ್ನೆಲೆ ಹೊಂದಿದೆ ಎಂದು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಹೇಳಿದರು.

ವಿಕ ಸುದ್ದಿಲೋಕ 13 Mar 2016, 12:48 pm
ಕಲಬುರಗಿ: ವೀರಶೈವ ಧರ್ಮವು ನಿಸರ್ಗ ನಿರ್ಮಿತ ಧರ್ಮದ ಸಿದ್ಧಾಂತದ ಹಿನ್ನೆಲೆ ಹೊಂದಿದೆ ಎಂದು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಹೇಳಿದರು.
Vijaya Karnataka Web vraaiva dharmaddu nisarga nirmita siddhnta
ವೀರಶೈವ ಧರ್ಮದ್ದು ನಿಸರ್ಗ ನಿರ್ಮಿತ ಸಿದ್ಧಾಂತ


ತಮ್ಮನ್ನು ಭೇಟಿ ಮಾಡಿದ ಫ್ರಾನ್ಸ್ ದೇಶದ ನಾಗರಿಕರಾದ ಲೀ, ಜಾನ್ ಸೇರಿದಂತೆ ಇತರರಿಗೆ ವೀರಶೈವ ಧರ್ಮದ ಹುಟ್ಟು, ಏಳಿಗೆ ಹಾಗೂ ಅದರ ಸಿದ್ಧಾಂತಗಳನ್ನು ವಿವರಿಸಿದರು.

ಧರ್ಮದಲ್ಲಿ ಎರಡು ಪ್ರಕಾರಗಳಿವೆ, ಮಾನವ ನಿರ್ಮಿತ ಧರ್ಮವಾದರೆ, ಮತ್ತೊಂದು ನಿಸರ್ಗ ನಿರ್ಮಿತ ಧರ್ಮ ಎಂದರು. ಶೈವ ಧರ್ಮ, ವೀರಶೈವ ಧರ್ಮ, ಲಿಂಗ, ರುದ್ರಾಕ್ಷಿ ಕುರಿತು ವಿವಿರ ಮಾಹಿತಿ ನೀಡಿ, ಆತ್ಮ ಮತ್ತು ಪರಮಾತ್ಮನ ಸಂಬಂಧದಂತೆ ಲಿಂಗ ಮತ್ತು ಭಕ್ತನ ಸಂಬಂಧವಿದೆ ಎಂದರು.

ಈ ವೇಳೆ ಜೊತೆಗಿದ್ದ ಭಾರತೀಯ ಕಲೆ ಮತ್ತು ಸಾಂಸ್ಕ್ರತಿಕ ಪರಂಪರೆಯ ರಾಷ್ಟ್ರೀಯ ಪ್ರತಿಷ್ಠಾನದ ಸಂಚಾಲಕ ಡಾ.ಶಂಭುಲಿಂಗ ಎಸ್.ವಾಣಿ ಮಾತನಾಡಿ,. ಕ್ರಿ.ಶ. 1822ರಲ್ಲಿ ದೇವಸ್ಥಾನದ ನಿರ್ಮಾಣ ಆರಂಭಗೊಂಡು ಕೆಲವೇ ವರ್ಷಗಳಲ್ಲಿ ಪೂರ್ಣಗೊಂಡಿದೆ. ಪೂಜ್ಯ ದೊಡ್ಡಪ್ಪ ಅಪ್ಪ ಮೊದಲ ಪೀಠಾಧಿಪತಿಯಾಗಿದ್ದರೆ ಈಗ ಡಾ.ಶರಣಬಸವಪ್ಪ ಅಪ್ಪ ಅವರು ಪೀಠಾಧಿಪತಿಯಾಗಿ ಅನ್ನ ದಾಸೋಹ ಮತ್ತು ಜ್ಞಾನ ದಾಸೋಹ ಮುಂದುವರೆಸಿಕೊಂಡು ಬರುತ್ತಿದ್ದಾರೆ ಎಂದರು.

ಶರಣಬಸವೇಶ್ವರ ದೇವಸ್ಥಾನದ ವಾಸ್ತುಶಿಲ್ಪ, ವಿನ್ಯಾಸ, ಕಲೆಯನ್ನು ಬಹುವಾಗಿ ಮೆಚ್ಚಿದ ಫ್ರಾನ್ಸ್ ತಂಡ, ದಾಸೋಹ ಮನೆ, ಶಾಲಾ ಕಾಲೇಜು, ಗ್ರಂಥಾಲಯ ವೀಕ್ಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ