ಆ್ಯಪ್ನಗರ

ಯೋಧ ಹುತಾತ್ಮ: ಸೀಮಂತ ನಡೆಯಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ

'ಅಪ್ಪ, ಏಳು ಅಪ್ಪ, ಮಾತಾಡು ಅಪ್ಪ' -ಇದು ಹುತಾತ್ಮ ಸಿಆರ್‌ಪಿಎಫ್‌ ಯೋಧ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿಯ ಮಹದೇವ ಪಾಟೀಲ್‌ ಪಾರ್ಥೀವ ಶರೀರದ ಮುಂದೆ ಮಕ್ಕಳ ಆಕ್ರಂದನ ನೆರೆದವರ ಮನಕಲಕುವಂತಿತ್ತು. ಮಕ್ಕಳ ರೋದನ ನೆರೆದವರ ಕಣ್ಣಾಲೆಗಳು ಒದ್ದೆಯಾಗುವಂತೆ ಮಾಡಿತು.

Vijaya Karnataka 30 Jun 2019, 10:36 pm
ಕಲಬುರಗಿ :'ಅಪ್ಪ, ಏಳು ಅಪ್ಪ, ಮಾತಾಡು ಅಪ್ಪ' -ಇದು ಹುತಾತ್ಮ ಸಿಆರ್‌ಪಿಎಫ್‌ ಯೋಧ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿಯ ಮಹದೇವ ಪಾಟೀಲ್‌ ಪಾರ್ಥೀವ ಶರೀರದ ಮುಂದೆ ಮಕ್ಕಳ ಆಕ್ರಂದನ ನೆರೆದವರ ಮನಕಲಕುವಂತಿತ್ತು. ಮಕ್ಕಳ ರೋದನ ನೆರೆದವರ ಕಣ್ಣಾಲೆಗಳು ಒದ್ದೆಯಾಗುವಂತೆ ಮಾಡಿತು.
Vijaya Karnataka Web warrior martyrdom
ಯೋಧ ಹುತಾತ್ಮ: ಸೀಮಂತ ನಡೆಯಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ


ಮಕ್ಕಳ ರೋದನ ಮುಗಿಲು ಮುಟ್ಟಿತ್ತು. ಮಕ್ಕಳಾದ ಸಂದೀಪ್‌ ಪಾಟೀಲ್‌, ಜ್ಯೋತಿ ಹಾಗೂ ಕುಲದೀಪ್‌ ಪಾಟೀಲ್‌ ಅವರ ಪಾಲಿಗೆ ನಮ್ಮ ಅಪ್ಪ ಇನ್ನೂ ಬದುಕಿದ್ದಾರೆ ಎಂಬಂತಿದ್ದರು.

ಅಪ್ಪ, ಏಳು ಅಪ್ಪ, ಮಾತಾಡು ಅಪ್ಪ ಎಂದು ಕಣ್ಣೀರಾದರು. ಯೋಧನ ಅಗಲಿಕೆ ಇಡೀ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿತ್ತು. ಹುತಾತ್ಮ ಯೋಧನ ಧರ್ಮಪತ್ನಿ ಮಲ್ಲಮ್ಮ ಅವರ ಎದೆ ಬಡಿದುಕೊಂಡು ಅಳುತ್ತಿರುವುದನ್ನು ಕಂಡ ಊರಿನವರಲ್ಲಿ ಕಣ್ಣೀರು ಕೋಡಿ ಹರಿಯಿತು.

ಮಗಳು ಜ್ಯೋತಿಯ ಸೀಮಂತ ಕಾರ್ಯಕ್ರಮ ಜುಲೈ 1ನೇ ರಂದು ಸೋಮವಾರ ಮನೆಯಲ್ಲಿ ನಡೆಸಲು ಸಿದ್ಧತೆ ನಡೆದಿತ್ತು. ಮಗಳ ಸಂಭ್ರಮದಲ್ಲಿ ಭಾಗಿಯಾಗಲು ರಜೆ ಪಡೆಯುವುದಕ್ಕಾಗಿ ಸಿಆರ್‌ಪಿಎಫ್‌ ಕಚೇರಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ನಕ್ಸಲ್‌ ದಾಳಿಯಲ್ಲಿ ಮಹಾದೇವ ಪಾಟೀಲ ಪ್ರಾಣತೆತ್ತಿದ್ದಾರೆ. ಆ ವಿಧಿ ಸಂಭ್ರಮ-ಸಡಗರ ಕಿತ್ತುಕೊಂಡು ಸೂತಕದ ಛಾಯೆ ಮೂಡಿಸಿದೆ ಎಂದು ಹುತಾತ್ಮ ಯೋಧನ ಅಣ್ಣ ಬಿಕ್ಕುತ್ತಾ ಕಣ್ಣೀರಾದರು.

199ನೇ ಬ್ಯಾಟಾಲಿಯನ್‌ ಸಿಆರ್‌ಫಿಎಫ್‌ ಯೋಧ ಮಹಾದೇವ ಅವರು ಛತ್ತೀಸ್‌ಗಡದಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಮಕ್ಕಳು, ಮಡದಿ ಹೈದ್ರಾಬಾದ್‌ನಲ್ಲಿ ಪೊಲೀಸ್‌ ವಸತಿ ಗೃಹದಲ್ಲಿ ನೆಲೆಸಿದ್ದಾರೆ. ಸೀಮಂತ ಕಾರ್ಯಕ್ರಮದಲ್ಲಿ ಸಂತಸದಲ್ಲಿ ಭಾಗಿಯಾಗಬೇಕಾದವರು ಈಗ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ. ಆದರೆ ದೇಶಕ್ಕಾಗಿ ಪ್ರಾಣಕೊಟ್ಟ ಹೆಮ್ಮೆ ಈ ಕುಟುಂಬಕ್ಕೆ ಇದೆ ಎಂದು ಗ್ರಾಮಸ್ಥರು ಅಭಿಮಾನದಿಂದಲೇ ಹೇಳಿದರು.

ಮಹದೇವ ಅವರ ದೇಶ ಸೇವೆ ನಾಡಿನ ಯುವಕರೂ ಸೇರಿದಂತೆ ಎಲ್ಲರಿಗೂ ಸ್ಫೂರ್ತಿಯಾಗಿದೆ. 'ಮಹಾದೇವ ಅಮರ್‌ ರಹೆ ' ಅಮರ್‌ ರಹೆ' ಎಂದು ಶಾಲಾ ಮಕ್ಕಳು ರಾಷ್ಟ್ರ ಧ್ವಜ ಹಿಡಿದು ಕೂಗುತ್ತಿದ್ದ ಘೋಷಣೆ ಇಡೀ ಪರಿಸರದಲ್ಲಿ ಮಾರ್ಧನಿಸುತ್ತಿದ್ದುದು ಇದಕ್ಕೆ ಸಾಕ್ಷಿ ಎನ್ನುವಂತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ