ಆ್ಯಪ್ನಗರ

ಮಕ್ಕಳ ಜಗಳ ಮಹಿಳೆ ಕೊಲೆಯಲ್ಲಿ ಅಂತ್ಯ

ಕೊಲೆಯಾದ ಮಹಿಳೆಯನ್ನು ಮಂಗಳಾ ರಾಮು ಕಟಬರ್‌(30) ಎಂದು ಗುರುತಿಸಲಾಗಿದೆ. ಇದೇ ಕಟಬರ್‌ ಸಮುದಾಯದ ಮಾನಯ್ಯ ಮಾರೆಪ್ಪ ಕಟಬರ್‌ ಕುಟುಂಬದ ಸದಸ್ಯರು ಹಾಗೂ ಇತರರು ಸೇರಿ ಕೊಲೆ ಮಾಡಿದ್ದಾಗಿ ದೂರಲಾಗಿದೆ. ಈ ಸಂಬಂಧ ಮೂರು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಉಳಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Vijaya Karnataka 5 Mar 2019, 8:54 am
ಕಲಬುರಗಿ: ಆಟವಾಡುತ್ತಿದ್ದ ಮಕ್ಕಳು ಜಗಳವಾಡಿದ್ದರ ಕುರಿತು ವಿಚಾರಿಸಲು ಹೋದ ಮಹಿಳೆಯ ಮೇಲೆ ಜನರ ಗುಂಪೊಂದು ದಾಳಿ ಮಾಡಿ ಕೊಲೆ ಮಾಡಿರುವ ಘಟನೆ ತಾಲೂಕಿನ ಫರಹತಾಬಾದ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಹೇರೂರ(ಬಿ) ಗ್ರಾಮದಲ್ಲಿ ನಡೆದಿದೆ.
Vijaya Karnataka Web crime_1


ಕೊಲೆಯಾದ ಮಹಿಳೆಯನ್ನು ಮಂಗಳಾ ರಾಮು ಕಟಬರ್‌(30) ಎಂದು ಗುರುತಿಸಲಾಗಿದೆ. ಇದೇ ಕಟಬರ್‌ ಸಮುದಾಯದ ಮಾನಯ್ಯ ಮಾರೆಪ್ಪ ಕಟಬರ್‌ ಕುಟುಂಬದ ಸದಸ್ಯರು ಹಾಗೂ ಇತರರು ಸೇರಿ ಕೊಲೆ ಮಾಡಿದ್ದಾಗಿ ದೂರಲಾಗಿದೆ. ಈ ಸಂಬಂಧ ಮೂರು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಉಳಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಎರಡು ದಿನಗಳ ಹಿಂದೆ ಮಕ್ಕಳು ಆಟವಾಡುತ್ತಿದ್ದಾಗ ಜಗಳವಾಡಿಕೊಂಡಿದ್ದರು. ಮಕ್ಕಳು ಜಗಳವಾಡಿಕೊಂಡಿರುವ ವಿಷಯ ಮುಂದು ಮಾಡಿಕೊಂಡಿ ಮಂಗಳಾ ಮಾನಯ್ಯ ಕಟಬರ್‌ ಕುಟುಂಬದ ಸದಸ್ಯರನ್ನು ವಿಚಾರಿಸಲು ತೆರಳಿದ್ದಾರೆ. ಈ ವೇಳೆ ವಿಚಾರಣೆ ವಾಗ್ವಾದಕ್ಕೆ ತಿರುಗಿದೆ. ಜನರ ಗುಂಪು ಸೇರಿಕೊಂಡು ಮಂಗಳಾ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಂಗಳಾ ಅವರನ್ನು ಕಲಬುರಗಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮಂಗಳಾ ಸಾವನ್ನಪ್ಪಿದ್ದಾಳೆ. ಈ ಕುರಿತು 13 ಜನರ ವಿರುದ್ಧ ಫರಹತಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಉಳಿದವರನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪಿಎಸ್‌ಐ ಸುರೇಶಕುಮಾರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ