ಆ್ಯಪ್ನಗರ

ಮಹಿಳಾ ದಿನಾಚರಣೆ ಪ್ರಯುಕ್ತ ಅರಿವಿನ ಪಯಣ ಸಾಂಸ್ಕೃತಿಕ ಸರಣಿಗೆ ಕಲಬುರಗಿಯಲ್ಲಿ ಚಾಲನೆ

ಅರಿವಿನ ಪಯಣ ಆರಂಭವೇ ಕುತೂಹಲ. ನಾಡಿನ ನಾನಾ ಸಾಧಕಿಯರು ಪಾಲ್ಗೊಂಡು ತಮ್ಮ ಪಯಣ ತಿಳಿ ಹೇಳ್ತಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಸಮಾರಂಭ ಆಯೋಜನೆಗೆ ಬ್ರೆಕ್‌ ಹಾಕಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖೇನ ಮಹಿಳೆಯ ವಿಕಾಸಕ್ಕೆ ಶ್ರಮಿಸಲಾಗುತ್ತಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಳ್ಳಲಿದೆ ಎಂದು ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಂಚಾಲಕರು ಮೀನಾಕ್ಷಿ ಬಾಳಿ ಹೇಳಿದರು.

Vijaya Karnataka 13 Jan 2022, 9:03 am
ಕಲಬುರಗಿ: ಇಂದು ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಕೇವಲ ಮಹಿಳೆಯರದ್ದೇ ಮಾತ್ರವಲ್ಲ, ಅದು ಇಡೀ ಸಮಾಜದ ಸಮಸ್ಯೆಯಾಗಿದೆ ಎಂದು ಹೋರಾಟಗಾರ ಡಾ.ಪ್ರಭು ಖಾನಾಪುರೆ ವ್ಯಾಖ್ಯಾನಿಸಿದರು.
Vijaya Karnataka Web kalaburagi


ನಗರದ ವಿ.ಜಿ.ವುಮೆನ್ಸ್‌ ಕಾಲೇಜಿನಲ್ಲಿ ಬುಧವಾರ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ನಗರದ ನಾನಾ ಮಹಿಳಾ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಅರಿವಿನ ಪಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳೆ ಕೇವಲ ಮಹಿಳೆಯಾಗಿದರೆ ಆಕೆ, ಇಡೀ ಪುರುಷ ಪ್ರಧಾನ ಸಮಾಜದ ಚಲಾವಣೆಯ ವ್ಯಕ್ತಿಯಾಗಿದ್ದಾಳೆ. ಆಕೆ ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಮಗಳಾಗಿ ಮತ್ತು ಇತರೆಲ್ಲ ಸಂದರ್ಭದಲ್ಲಿ ಕಷ್ಟ ಸಹೀಷ್ಣುವಾಗಿ ಮನೆ ನಿಭಾಯಿಸುತ್ತಾಳೆ, ಕುಟುಂಬ ನಿರ್ವಹಣೆ ಮಾಡುತ್ತಾಳೆ. ಆದ್ದರಿಂದ ಆಕೆಯ ಮತ್ತು ಆಕೆ ಎದುರಿಸುವ ಸಮಸ್ಯೆಗಳು ಕೇವಲ ಆಕೆಯದ್ದಲ್ಲ, ಅದು ಸಮಾಜದ್ದು ಎಂದರು.
ಹುಬ್ಬಳ್ಳಿಯಲ್ಲಿ 9 ತಿಂಗಳಾದರೂ ಸಖಿಯಲ್ಲಿ ಆಪ್ತ ಸಮಾಲೋಚಕರ ನೇಮಕವಿಲ್ಲ; ಅಹವಾಲು ಆಲಿಸಲು ಸಿಬ್ಬಂದಿಯೇ ಇಲ್ಲ!
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ರಾಜೇಂದ್ರ ಕೊಂಡಾ ಮಾತನಾಡಿ, ಇದೊಂದು ವಿನೂತನ ಕಾರ್ಯಕ್ರಮ. ಹಾಡು, ನಾಟಕ, ಸಂವಾದ, ಕಥೆಗಳ ಮೂಲಕ ಲಿಂಗ ಸಂವೇದನಾಶೀಲತೆ ಮೂಡಿಸುವುದು ಹೆಚ್ಚು ಪರಿಣಾಮಕಾರಿ. ನೂರು ಉಪದೇಶಗಳಿಗಿಂತ ಒಂದು ಮನುಷ್ಯರನ್ನು ಸಾಕಷ್ಟು ಬದಲಿಸುತ್ತದೆ. ಇಂಥ ಅರಿವಿನ ಪಯಣದಲ್ಲಿ ನಮ್ಮ ಕಾಲೇಜು ಯಾವತ್ತೂ ಮುಂಚೂಣಿಯಲ್ಲಿ ಇರಲಿದೆ ಎಂದು ಹೇಳಿದರು.

ಅರಿವಿನ ಪಯಣ ಆರಂಭವೇ ಕುತೂಹಲ. ನಾಡಿನ ನಾನಾ ಸಾಧಕಿಯರು ಪಾಲ್ಗೊಂಡು ತಮ್ಮ ಪಯಣ ತಿಳಿ ಹೇಳ್ತಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಸಮಾರಂಭ ಆಯೋಜನೆಗೆ ಬ್ರೆಕ್‌ ಹಾಕಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖೇನ ಮಹಿಳೆಯ ವಿಕಾಸಕ್ಕೆ ಶ್ರಮಿಸಲಾಗುತ್ತಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಳ್ಳಲಿದೆ ಎಂದು ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಂಚಾಲಕರು ಮೀನಾಕ್ಷಿ ಬಾಳಿ ಹೇಳಿದರು.

ಮುಖ್ಯ ಅತಿಥಿ ಪೊ. ಎನ್‌.ಜಿ ಪಾಟೀಲ ಮಾತನಾಡಿದರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ವಿವಿಧ ಕಾಲೇಜುಗಳಲ್ಲಿ ಸಾಂಸ್ಕೃತಿಕ ಆಂದೋಲನ ಮಾಡಿದ ವಾಣಿ ಪೆರಿಯೋಡಿ ಮಂಗಳೂರು, ಅಖಿಲಾ ವಿದ್ಯಾಸಂದ್ರ ಬೆಂಗಳೂರು, ಮಲ್ಲಿಗೆ ಸಿರಿಮನೆ ಮಂಡ್ಯ, ಶೀಲಾ ಹಾಲಕುರ್ಕಿ ಕೊಪ್ಪಳ, ರೇಖಾಂಬಾ ಶಿವಮೊಗ್ಗ, ವೃಂದಾ ಹೆಗಡೆ ಶಿವಮೊಗ್ಗ, ಮಲ್ಲಮ್ಮ ಯಾಳವಾರ ವಿಜಯಪುರ ಹಾಗೂ ಸ್ಥಳೀಯರಾದ ಆಯ್‌.ಟಿ.ಆಯ್‌ ವಿದ್ಯಾಲಯದ ಡಾ. ರುಬಿನಾ, ವಿ.ಜಿ ಕಾಲೇಜಿನ ಡಾ ಶರಣಮ್ಮ ಕುಪ್ಪಿ, ಪೊ›. ಶಕುಂತಲಾ ಬಿ, ಪೊ. ಶಿವಲೀಲಾ ಧೋತ್ರೆ, ಡಾ. ಸುಷ್ಮಾ ಕುಲಕರ್ಣಿ, ಜನವಾದಿ ಮಹಿಳಾ ಸಂಘಟನೆಯ ಮುಖ್ಯಸ್ಥರಾದ ಪದ್ಮಿನಿ ಕಿರಣಗಿ, ಜಗದೇವಿ ನೂಲಕರ್‌, ಶಹನಾಜ್‌ ಬೇಗಂ, ಪ್ರಬುದ್ಧ ಭಾರತ ಸಂಘಟನೆಯ ಅಶ್ವಿನಿ ಮದನಕರ್‌ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ವಿಜಯ ದಬ್ಬೆ ಪ್ರಾರ್ಥನೆ ಹಾಡಿದರು. ಪೊ. ಶಿವಲೀಲಾ ಧೋತ್ರೆ ವಂದಿಸಿದರು. ಡಾ ಶರಣಮ್ಮ ಕುಪ್ಪಿ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ