ಆ್ಯಪ್ನಗರ

ಹಣಕಾಸು ನಿರ್ವಹಣೆಗೆ ತಾಯಂದಿರೇ ಸಮರ್ಥ; ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ

ಭೀಮಾ ನದಿ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಸಂತ್ರಸ್ತರೊಂದಿಗೆ ಜಿಲ್ಲೆಯ ಜೇವರ್ಗಿ ತಾಲೂಕಿನ ಇಟಗಾದಲ್ಲಿ ಭಾನುವಾರ ದೀಪಾವಳಿ ಆಚರಿಸಿ ಮಾತನಾಡಿದ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ಹಣವನ್ನು ಅತ್ಯಂತ ಜಾಗರೂಕವಾಗಿ ಖರ್ಚು ಮಾಡುವುದನ್ನು ತಾಯಂದಿರು ರೂಢಿಸಿಕೊಂಡಿರುವ ಕಾರಣಕ್ಕಾಗಿಯೇ ಕುಟುಂಬಗಳು ಆರ್ಥಿಕವಾಗಿ ಸ್ವಾವಲಂಬಿ ಆಗಿರಲು ಸಾಧ್ಯವಾಗಿದೆ ಎಂದರು.

Vijaya Karnataka Web 17 Nov 2020, 7:02 am
ಕಲಬುರಗಿ: ಹಳ್ಳಿಯ ಹೆಣ್ಣು ಮಕ್ಕಳ ಬಳಿ ನೂರು ರೂಪಾಯಿ ಇದ್ದರೂ ಗಂಡಸರ ಬಳಿ ಇರುವ ಸಾವಿರ ರೂಪಾಯಿಗೆ ಸಮ. ಹಣವನ್ನು ಅತ್ಯಂತ ಜಾಗರೂಕವಾಗಿ ಖರ್ಚು ಮಾಡುವುದನ್ನು ತಾಯಂದಿರು ರೂಢಿಸಿಕೊಂಡಿರುವ ಕಾರಣಕ್ಕಾಗಿಯೇ ಕುಟುಂಬಗಳು ಆರ್ಥಿಕವಾಗಿ ಸ್ವಾವಲಂಬಿ ಆಗಿರಲು ಸಾಧ್ಯವಾಗಿದೆ ಎಂದು ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ನುಡಿದರು.
Vijaya Karnataka Web nagatihalli


‘ಬಸವಕಲ್ಯಾಣಕ್ಕೆ ನಾನಂತೂ ಟಿಕೆಟ್‌ ಆಕಾಂಕ್ಷಿಯಲ್ಲ’; ಬಿವೈ ವಿಜಯೇಂದ್ರ

ಜಿಲ್ಲೆಯ ಜೇವರ್ಗಿ ತಾಲೂಕಿನ ಇಟಗಾದಲ್ಲಿ ಭಾನುವಾರ, ಭೀಮಾ ನದಿ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಸಂತ್ರಸ್ತರೊಂದಿಗೆ ದೀಪಾವಳಿ ಆಚರಿಸಿದ ಬಳಿಕ ಅವರು ಮಾತನಾಡಿದರು. ಗ್ರಾಮೀಣ ಜನರು ಆರ್ಥಿಕ ನಿರ್ವಹಣೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಮನೆಗಳಲ್ಲಿರುವ ಹೆಣ್ಣು ಮಕ್ಕಳಂತೆಯೇ ಹಣವನ್ನು ಎಚ್ಚರದಿಂದ ಬಳಸುವುದನ್ನು ಕಲಿಯಬೇಕು. ಇದರಿಂದ ಕುಟುಂಬಗಳಲ್ಲಿನೆಮ್ಮದಿ ನೆಲೆಸುತ್ತದೆ ಎಂದು ಹೇಳಿದರು.

'ಕೈ' ಜಾರಿ ಬಿಜೆಪಿ ತೆಕ್ಕೆಗೆ ಬಿದ್ದ ಈಶಾನ್ಯ ಶಿಕ್ಷಕರ ಕ್ಷೇತ್ರ..! ಮಟ್ಟೂರು ವಿರುದ್ಧ ಶಶೀಲ್ ನಮೋಶಿ ಗೆಲುವು

ಇಂದಿಗೂ ಗ್ರಾಮೀಣ ಭಾಗದ ಕೆಲವೆಡೆ ಕುಡಿಯುವ ನೀರು ಸಿಗುತ್ತಿಲ್ಲ. ಮತ್ತೊಂದೆಡೆ, ತಮ್ಮ ಗ್ರಾಮದ ಮಗ್ಗುಲಲ್ಲಿರುವ ನದಿ ನೀರನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಸಹ ಗ್ರಾಮಸ್ಥರಿಗೆ ಗೊತ್ತಿರುವುದಿಲ್ಲ. ಗ್ರಾಮಸ್ಥರ ಸಂಘಟನಾತ್ಮಕ ಪ್ರಯತ್ನ ಇರುವುದಾದರೆ, ನದಿಯ ನೀರನ್ನು ತಂತ್ರಜ್ಞಾನದ ಸಹಾಯದೊಂದಿಗೆ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಸರಕಾರಗಳು ಅಗತ್ಯ ಯೋಜನೆ ರೂಪಿಸಬೇಕೆಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ