ಆ್ಯಪ್ನಗರ

ಜಲ್ಲಿಕಲ್ಲು ಬ್ಲಾಸ್ಟಿಂಗ್‌ ಗಣಿಗಾರಿಕೆ ತಡೆಗೆ ಯಲಕಪಳ್ಳಿಗ್ರಾಮಸ್ಥರ ಆಗ್ರಹ

ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಜಲ್ಲಿಕಲ್ಲು ಬ್ಲಾಸ್ಟಿಂಗ್‌ ನಡೆಸುತ್ತಿರುವುದರಿಂದ ಹಲವು ಮನೆಳಿಗೆ ಹಾನಿ ಸಂಭವಿಸುತ್ತಿದ್ದು, ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

Vijaya Karnataka 15 Jun 2019, 9:43 pm
ಕಲಬುರಗಿ:ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಜಲ್ಲಿಕಲ್ಲು ಬ್ಲಾಸ್ಟಿಂಗ್‌ ನಡೆಸುತ್ತಿರುವುದರಿಂದ ಹಲವು ಮನೆಳಿಗೆ ಹಾನಿ ಸಂಭವಿಸುತ್ತಿದ್ದು, ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
Vijaya Karnataka Web yalakapalli gramasatra demand for barricade blasting mining
ಜಲ್ಲಿಕಲ್ಲು ಬ್ಲಾಸ್ಟಿಂಗ್‌ ಗಣಿಗಾರಿಕೆ ತಡೆಗೆ ಯಲಕಪಳ್ಳಿಗ್ರಾಮಸ್ಥರ ಆಗ್ರಹ


ಗ್ರಾಮದ ಹತ್ತಿರವೇ ಜಲ್ಲಿಕಲ್ಲು ಒಡೆಯುವ ಯಂತ್ರ ಅಳವಡಿಸಲಾಗಿದೆ. ಇದರ ಮಾಲೀಕರು ನಿತ್ಯ 40-50 ಅಡಿ ರಂಧ್ರ ಕೊರೆದು ಬ್ಲಾಸ್ಟಿಂಗ್‌ ಮಾಡುತ್ತಾರೆ. ಇದರಿಂದ ಶಬ್ದ ಮಾಲಿನ್ಯ ಜೊತೆಗೆ ಗ್ರಾಮದಲ್ಲಿರುವ ಮನೆಗಳೂ ಬಿರುಕು ಬೀರುತ್ತಿವೆ. ಗಣಿಗಾರಿಕೆ ಸಮಯದಲ್ಲಿ ಬ್ಲಾಸ್ಟಿಂಗ್‌ ಮಾಡುತ್ತಿರುವುದರಿಂದ ಭೂಕಂಪನದಂತಹ ಶಬ್ದವಾಗುತ್ತಿದೆ. ಆದ್ದರಿಂದ ನಾಗರಿಕರು ನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಜಲ್ಲಿಕಲ್ಲು ಬ್ಲಾಸ್ಟಿಂಗ್‌ ಮಾಡುವುದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಗ್ರಾಮಸ್ಥರ ರಕ್ಷ ಣೆಗೆ ಜಿಲ್ಲಾಡಳಿತ ಮುಂದಾಗಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಹಿಂದೆ ಅನೇಕ ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿ ಒತ್ತಾಯಿಸಿದ್ದರೂ ಇದುವರೆಗೂ ಕ್ರಮಕೈಗೊಂಡಿಲ್ಲ. ಆದ್ದರಿಂದ ಶೀಘ್ರ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಒಂದು ವೇಳೆ ಜಿಲ್ಲಾಡಳಿತ ಗ್ರಾಮಸ್ಥರ ಸಹಾಯಕ್ಕೆ ಬಾರದೆ ಇದ್ದಲ್ಲಿ ಇಡೀ ಗ್ರಾಮಸ್ಥರು ಗ್ರಾಮ ತೊರೆಯವುದಾಗಿ ಎಚ್ಚರಿಸಿದ್ದಾರೆ.

ಸಿದ್ದಲಿಂಗಪ್ಪ ಖೈತಾಪುರ, ಚಂದ್ರಶೇಖರಯ್ಯ ಸ್ವಾಮಿ, ಸಂಜೀವ ಕಳಸ್ಕರ್‌, ಮಹೇಶ ಕಳಸ್ಕರ್‌, ವಿಜಯಕುಮಾರ ಮಾಲಿ ಪಾಟೀಲ, ರೇವಣಸಿದ್ದಪ್ಪ ಪೊಲೀಸ್‌ ಪಾಟೀಲ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ