ಆ್ಯಪ್ನಗರ

ರುದ್ರಭೂಮಿಯಲ್ಲಿ ಯೋಗ ಕಾರ್ಯಕ್ರಮ

ನಗರದ ನೆಹರು ಗಂಜ್‌ ವೀರಶೈವ ರುದ್ರಭೂಮಿಯ ಉದ್ಯಾನದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Vijaya Karnataka 24 Jun 2019, 5:00 am
ಕಲಬುರಗಿ:ನಗರದ ನೆಹರು ಗಂಜ್‌ ವೀರಶೈವ ರುದ್ರಭೂಮಿಯ ಉದ್ಯಾನದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web yoga program at rudrabhumi
ರುದ್ರಭೂಮಿಯಲ್ಲಿ ಯೋಗ ಕಾರ್ಯಕ್ರಮ


ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಸನ್ನಿಧಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯೋಗ ಗುರು ಸಿದ್ಧಪ್ಪ ಮಾಸ್ತರ ಹಾಗೂ ತಂಡದ ಸದಸ್ಯರು ಯೋಗ ತರಬೇತಿ ನೀಡಿದರು.

ಸಿದ್ದಪ್ಪ ಮಾಸ್ತರ ಅವರು ಉಪನ್ಯಾಸ ನೀಡುತ್ತಾ, ಮೌಢ್ಯಗಳನ್ನು ದಿಕ್ಕರಿಸುವ ನಿಟ್ಟಿನಲ್ಲಿ ಸ್ಮಶಾನ ಭೂಮಿಯಲ್ಲಿ ಯೋಗ ದಿನ ಆಯೋಜಿಸಿರುವುದು ಅತ್ಯುತ್ತಮ ಬೆಳವಣಿಗೆ ಎಂದು ಸಮಾಧಾನ ವ್ಯಕ್ತಪಡಿಸಿದರು.

300ಕ್ಕೂ ಹೆಚ್ಚು ಆಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಡಾ.ಆರಾಧನಾ, ಬಸವರಾಜ ಖಂಡೇರಾವ್‌, ಉಮೇಶ ಶೆಟ್ಟಿ, ಸೋಮಶೇಖರ ಚಿನ್ಮಳ್ಳಿ, ಅನಿಲ್‌ ರೋಣದ, ಕೆ.ಎಸ್‌.ವಾಲಿ, ನೀಲಕಂಠ ಬಿರಾದಾರ, ಪರಸರೆಡ್ಡಿ, ಸಂತೋಷ್‌ ಗಂಗಸಿರಿ, ಮಲ್ಲಿನಾಥ ಅಣಕಲ್‌, ಶರಣು ರೋಣದ, ಸುನಂದಾ ಜೀವಣಗಿ, ಜಗದೇವಿ ಗಂಗಸಿರಿ, ಯುವರಾಜ ವಾಡಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ