ಆ್ಯಪ್ನಗರ

ಯುವಜನೋತ್ಸವದಲ್ಲಿ ಮೇಳೈಸಿದ ಸಾಂಸ್ಕೃತಿಕ ಮೆರಗು

ಶರಣಬಸವ ವಿಶ್ವವಿದ್ಯಾಲಯದ ಯುವಜನೋತ್ಸವ ಕಾರ್ಯಕ್ರಮವು ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿಮಂಗಳವಾರ ಅದ್ಧೂರಿಯಾಗಿ ನಡೆಯಿತು. ವಿವಿಧ ಸಾಂಸ್ಕೃತಿಕ ಚಟುವಟಿಕೆ, ಸಮೂಹ ಗಾಯನ ಮತ್ತು ನೃತ್ಯದೊಂದಿಗೆ ವಿದ್ಯಾರ್ಥಿಗಳು ಗಮನ ಸೆಳೆದರು.

Vijaya Karnataka 14 Nov 2019, 10:25 pm
ಕಲಬುರಗಿ:ಶರಣಬಸವ ವಿಶ್ವವಿದ್ಯಾಲಯದ ಯುವಜನೋತ್ಸವ ಕಾರ್ಯಕ್ರಮವು ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿಮಂಗಳವಾರ ಅದ್ಧೂರಿಯಾಗಿ ನಡೆಯಿತು. ವಿವಿಧ ಸಾಂಸ್ಕೃತಿಕ ಚಟುವಟಿಕೆ, ಸಮೂಹ ಗಾಯನ ಮತ್ತು ನೃತ್ಯದೊಂದಿಗೆ ವಿದ್ಯಾರ್ಥಿಗಳು ಗಮನ ಸೆಳೆದರು.
Vijaya Karnataka Web 12GLB122_42
ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿಯುವಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಬಿಸಿಎ ವಿಭಾಗದ ವಿದ್ಯಾರ್ಥಿನಿ ಸ್ವರೂಪ ಹಾಗೂ ತಂಡದವರು ಭಾರತೀಯ ಸಂಸ್ಕೃತಿಯಲ್ಲಿಇಳಕಲ್‌ ಸೀರೆಯ ಮಹತ್ವ ವಿವರಿಸಲು ಅಭಿನಯಿಸಿದ ವಿದ್ಯಾರ್ಥಿಗಳು.


ಭಾರತೀಯ ಸಂಸ್ಕೃತಿಯಲ್ಲಿಇಳಕಲ್‌ ಸೀರೆಯ ಮಹತ್ವದ ಕುರಿತು ಬಿಸಿಎ ವಿಭಾಗದ ವಿದ್ಯಾರ್ಥಿನಿ ಸ್ವರೂಪ ಹಾಗೂ ತಂಡದವರು ಅಭಿನಯಸಿದ ನಾಟಕ ಹಾಗೂ ವಿದ್ಯಾರ್ಥಿನಿ ಪದ್ಮಾ ಆರ್‌.ಎಸ್‌. ಶಾಸ್ತ್ರೀಯ ನೃತ್ಯ ಗಮನ ಸೆಳೆಯಿತು.

ಎಂಎಸ್‌ಸಿ ಲಕ್ಷ್ಮಿಪುತ್ರ ತಂಡದಿಂದ ಮೈಮ್‌, ಗೋದುತಾಯಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಪಲ್ಲವಿ ಹಾಗೂ ನೇಹಾ ಪ್ರಸ್ತುತಪಡಿಸಿದ ಶಾಸ್ತ್ರೀಯ ಸಂಗೀತ ಗಾಯನ, ಬಿ.ಟೆಕ್‌ ವಿದ್ಯಾರ್ಥಿನಿ ಸ್ಫೂರ್ತಿ ಹಾಗೂ ತಂಡ ಪ್ರದರ್ಶಿಸಿದ ಸ್ಕಿಟ್‌, ಸಿಎಸ್‌ಇ ವಿಭಾಗದ ಐಶ್ವರ್ಯ ಮತ್ತು ತಂಡ ಹಾಗೂ ಗೋದುತಾಯಿ ಮಹಿಳಾ ಎಂಜಿನಿಯರಿಂಗ್‌ ವಿಭಾಗದ ಪ್ರೀತಿ ಮತ್ತು ತಂಡದವರು ಪಾಶ್ಚಿಮಾತ್ಯ ಸಮೂಹ ಗಾಯನ ನಡೆಸಿಕೊಟ್ಟರು.

ಗೋದುತಾಯಿ ಬಿಎಡ್‌ ಗೀತಾಂಜಲಿ ಮತ್ತು ತಂಡದಿಂದ ಇಂಡಿಯನ್‌ ಗ್ರೂಪ್‌ ಸಾಂಗ್‌, ಸಂಗೀತ ವಿಭಾಗದ ಮಲ್ಲಿಕಾರ್ಜುನ ವಸ್ತ್ರದಮಠರ ಕ್ಲಾಸಿಕಲ್‌ ಲೈಟ್‌ ವೋಕಲ್‌ ಸೋಲೊ, ನರೇಂದ್ರ ಪ್ರಸ್ತುತಪಡಿಸಿದ ಶಾಸ್ತ್ರೀಯ ವಾದ್ಯ ಗಾಯನ, ಗೋದುತಾಯಿ ಮಹಿಳಾ ಎಂಜನಿಯರಿಂಗ್‌ ಕಾಲೇಜಿನ ಪ್ರೀತಿ ಪ್ರಸ್ತುತಪಡಿಸಿದ ಪಾಶ್ಚಿಮಾತ್ಯ ಗೀತ ಗಾಯನ, ವಿ.ಪ್ರಶಾಂತ್‌ ಪ್ರಸ್ತುತಪಡಿಸಿದ ವೆಸ್ಟರ್ನ್‌ ಇನ್‌ಸ್ಟು್ರಮೆಂಟಲ್‌ ಸೋಲೊ ಆಕರ್ಷಕವಾಗಿತ್ತು.

ವಿವಿ ಕುಲಪತಿ ಡಾ.ನಿರಂಜನ ನಿಷ್ಠಿ, ಸಮ ಕುಲಪತಿ ಡಾ.ವಿ.ಡಿ.ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ, ಡೀನ್‌ ಡಾ.ಲಕ್ಷ್ಮಿ ಪಾಟೀಲ್‌ ಮಾಕಾ, ಡಾ.ಬಸವರಾಜ ಮಠಪತಿ, ಪತ್ರಿಕೋದ್ಯಮ ಮುಖ್ಯಸ್ಥ ಟಿ.ವಿ.ಶಿವಾನಂದನ್‌, ಎಂಎ ವಿಭಾಗದ ಮುಖ್ಯಸ್ಥ ಡಾ.ಹರೀಶ ಬಿದನೂರಕರ್‌ ಇದ್ದರು.

ಶಿವಾನಿ ಸ್ವಾಗತಿಸಿದರು. ವಿದ್ಯಾರ್ಥಿನಿ ಮಮತಾ ಮತ್ತು ವಿಜಯಲಕ್ಮಿ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ