ಆ್ಯಪ್ನಗರ

ಕಲಬುರಗಿ: ವಾಮಾಚಾರ ಶಂಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಬಳ್ಳಾರಿಯ ಯುವತಿಗೆ ವಾಮಾಚಾರ ಮಾಡಿ ಕದ್ದು ಮದುವೆಯಾಗಿದ್ದಲ್ಲದೇ ನಗರಕ್ಕೆ ಕರೆ ತಂದು ಸಂಸಾರ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಈ ವಿಷಯ ತಿಳಿದ ಯುವತಿಯ ಕುಟುಂಬ ಸದಸ್ಯರು ಗುರುವಾರ ಕಲಬುರಗಿಗೆ ಆಗಮಿಸಿ ಯುವಕನನ್ನು ಕಾರಿನಲ್ಲಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

Vijaya Karnataka Web 21 Oct 2021, 10:24 pm
ಕಲಬುರಗಿ: ಬಳ್ಳಾರಿಯ ಯುವತಿಯೊಬ್ಬಳಿಗೆ ವಾಮಾಚಾರ ಮಾಡಿ ಆಕೆಯನ್ನು ಕದ್ದು ಮದುವೆಯಾಗಿದ್ದ ಯುವಕನೊಬ್ಬನಿಗೆ ಯುವತಿಯ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದಲ್ಲಿ ಗುರುವಾರ ನಡೆದಿದೆ ಎನ್ನಲಾಗಿದೆ.
Vijaya Karnataka Web ಪೊಲೀಸ್
ಪೊಲೀಸ್


ಕಲಬುರಗಿ ನಗರದ ಶಹಾಬಜಾರ್ ತಾಂಡಾ ನಿವಾಸಿ ಕಾಶಿಪತಿ ಎಂಬಾತನೇ ಈ ವಾಮಾಚಾರ ಮಾಡಿದ ಯುವಕನಾಗಿದ್ದಾನೆ.

ಬಳ್ಳಾರಿಯ ಯುವತಿಗೆ ವಾಮಾಚಾರ ಮಾಡಿ ಕದ್ದು ಮದುವೆಯಾಗಿದ್ದಲ್ಲದೇ ನಗರಕ್ಕೆ ಕರೆ ತಂದು ಸಂಸಾರ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

ನೀವು ನಮ್ಮ ಲೀಡರ್ ಬಗ್ಗೆ ಮಾತಾಡಿದ್ರೆ, ನಿಮ್ಮ ಲೀಡರ್ ಬಗ್ಗೆ ನಾವು ಮಾತಾಡೋದನ್ನೂ ಕೇಳ್ಬೇಕು; ಬಿಜೆಪಿಗರಿಗೆ ಪ್ರಿಯಾಂಕ್ ಎಚ್ಚರಿಕೆ

ಈ ವಿಷಯ ತಿಳಿದ ಯುವತಿಯ ಕುಟುಂಬ ಸದಸ್ಯರು ಗುರುವಾರ ಕಲಬುರಗಿಗೆ ಆಗಮಿಸಿ ಯುವಕನನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಬಳಿಕ ಯುವಕನನ್ನು ಚೌಕ್ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ ವಾಹನದಲ್ಲೇ ಥಳಿಸಿದ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದು ಈಗ ಸಖತ್ ವೈರಲ್ ಆಗಿದೆ. ಅಲ್ಲದೇ ಆ ಮೂಲಕ ಪ್ರಕರಣವೂ ಬಯಲಾಗಿದೆ.

ಆರೋಪಿಗೆ ಕಾರಾಗೃಹ ಶಿಕ್ಷೆ

ತನ್ನ ಮಗಳ ಮದುವೆಗೆ ನಿರಾಕರಿಸಿದ ಕುಟುಂಬದ ಸದಸ್ಯರ ಮೇಲೆ ಹಲ್ಲೆನಡೆಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ನಾಲ್ವರು ಆರೋಪಿಗಳಿಗೆ ಇಲ್ಲಿನ 3ನೇ ಅಪರ ಜೆಎಂಎಫ್‌ಸಿ ನ್ಯಾಯಾಲಯ 6 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ.

ಶಾಂತಪ್ಪ ಮಲ್ಲಪ್ಪ ಕೆಲ್ಲೂರ್‌,ಸುಶೀಲಾ ಶಾಂತಪ್ಪ, ಚಂದ್ರಕಾಂತ, ಪ್ರಕಾಶ ಶಿಕ್ಷೆಗೊಳಗಾದ ಆರೋಪಿಗಳು.

ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ ನೇಸರ್ಗಿ ಅವರು ಪ್ರಕರಣ ಕುರಿತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ,ಈ ತೀರ್ಪು ನೀಡಿದ್ದಾರೆ.

ಕೈದಿಯಾದರೇನಂತೆ? ಜೈಲಲ್ಲೇ ಕುಳಿತು 10 ಸಾವಯವ ಘಟಕಗಳ ನಿರ್ಮಾಣ ಮಾಡಿ ರಾಜ್ಯಕ್ಕೆ ಮಾದರಿಯಾದರು

* ಏನಿದು ಪ್ರಕರಣ?: 2013ರ ನ.25 ರಂದು ಫಿರ್ಯಾದಿದಾರ ಕರಜಗಿಯ ಮೆಹರ್‌ನಂದ ಮಲ್ಲಿಕಾರ್ಜುನ ನಿವಾಸಕ್ಕೆ ಆರೋಪಿತರು ತೆರಳಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ‘‘ಮದುವೆಗೆ ನಿರಾಕರಿಸಿದ್ದಕ್ಕೆ ನಮ್ಮ ಮಗಳು ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ,’’ ಎಂದು ಆರೋಪಿಸಿ,ಹಲ್ಲೆನಡೆಸಿದ್ದ. ಜೀವ ಬೆದರಿಕೆಯೂ ಹಾಕಿದ್ದ.

ಈ ಸಂಬಂಧ ಚೌಕ್‌ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು. ಪ್ರಕರಣದ ಕುರಿತು ಪಿಎಸ್‌ಐ ಪ್ರದೀಪ ಕೊಳ್ಳ ಅವರು,ಆರೋಪಿಗಳಾದ ಶಾಂತಪ್ಪ ಮಲ್ಲಪ್ಪ ಕೆಲ್ಲೂರ್‌,ಸುಶೀಲಾ ಶಾಂತಪ್ಪ, ಚಂದ್ರಕಾಂತ, ಪ್ರಕಾಶ ಎಂಬುವರ ವಿರುದ್ಧ ದೋಷಾರೋಪಣೆ ಸಲ್ಲಿಸಿದ್ದರು. ಈ ಕುರಿತು ಸಹಾಯಕ ಸರಕಾರಿ ಅಭಿಯೋಜಕರಾಗಿ ಶಿವಶರಣಪ್ಪ ಎಚ್‌.ನಾಟೇಕರ್‌ ಅವರು ವಾದ ಮಂಡಿಸಿದ್ದರು.

ಮುಂದಿನ ಲೇಖನ