ಆ್ಯಪ್ನಗರ

ರಾಜ್ಯದಲ್ಲಿ ಕಾಂಗ್ರೆಸ್‌ ಮುಕ್ತಮಾಡಲು ಸಿದ್ದರಾಮಯ್ಯ ಖರ್ಗೆ ಇಬ್ಬರೆ ಸಾಕು

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನಾಲ್ಕು ಬಾರಿ ರಾಜ್ಯಕ್ಕೆ ಬಂದರೂ ನನಗೆ ಒಮ್ಮೆಯೂ ಭೇಟಿಗೆ ಅವಕಾಶ ನೀಡಿಲ್ಲ. ಈ ಕುರಿತು ಸ್ವತಃ ಸಿಎಂ ಸಿದ್ದರಾಮಯ್ಯಗೆ ಆಸಕ್ತಿ ಇದ್ದರೂ ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅಡ್ಡಗಾಲು ಹಾಕಿದ್ದಾರೆ. ಅವರು ನನ್ನನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸಿದ್ದು, ಇದಕ್ಕೆ ತಕ್ಕ ಪಾಠ ಕಲಿಸುವ ಕಾಲ ಇದೀಗ ಬಂದಿದೆ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಗುಡುಗಿದರು.

Vijaya Karnataka 19 Apr 2018, 5:34 pm
ಜೇವರ್ಗಿ : ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನಾಲ್ಕು ಬಾರಿ ರಾಜ್ಯಕ್ಕೆ ಬಂದರೂ ನನಗೆ ಒಮ್ಮೆಯೂ ಭೇಟಿಗೆ ಅವಕಾಶ ನೀಡಿಲ್ಲ. ಈ ಕುರಿತು ಸ್ವತಃ ಸಿಎಂ ಸಿದ್ದರಾಮಯ್ಯಗೆ ಆಸಕ್ತಿ ಇದ್ದರೂ ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅಡ್ಡಗಾಲು ಹಾಕಿದ್ದಾರೆ. ಅವರು ನನ್ನನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸಿದ್ದು, ಇದಕ್ಕೆ ತಕ್ಕ ಪಾಠ ಕಲಿಸುವ ಕಾಲ ಇದೀಗ ಬಂದಿದೆ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಗುಡುಗಿದರು.
Vijaya Karnataka Web zp member shobha bani joined the bjp
ರಾಜ್ಯದಲ್ಲಿ ಕಾಂಗ್ರೆಸ್‌ ಮುಕ್ತಮಾಡಲು ಸಿದ್ದರಾಮಯ್ಯ ಖರ್ಗೆ ಇಬ್ಬರೆ ಸಾಕು


ಪಟ್ಟಣದ ಎಂ.ಬಿ.ಪಾಟೀಲ್‌ ದಾಲ್‌ ಮಿಲ್‌ನಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯೆ ಹಾಗೂ ಹಿಂದುಳಿದ ವರ್ಗಗಳ ನಾಯಕಿ ಶೋಭಾ ಬಾಣಿ ಅವರನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಮುಕ್ತ ಮಾಡಲು ಮುಖ್ಯಮಂತ್ರಿ ಸಿದ್ಧ್ದರಾಮಯ್ಯ ಮತ್ತು ಸಂಸದ ಮಲ್ಲಿಕಾರ್ಜುನ ಖರ್ಗೆ ಈ ಇಬ್ಬರೇ ಸಾಕು. ಈ ನಾಯಕರಿಂದ ಇದೇ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಕ್ತ ಆಗಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿಗೆ ಸೇರ್ಪಡೆಗೊಂಡು ಮಾತನಾಡಿದ ಶೋಭಾ ಬಾಣಿ , ದೇಶದಲ್ಲಿ ಬದಲಾವಣೆ ಗಾಳಿ ಬೀಸಿಸುತ್ತಿದೆ. ಎಲ್ಲರೂ ಬಿಜೆಪಿಯತ್ತ ವಾಲುತ್ತಿದ್ದಾರೆ. ರಾಷ್ಟ್ರದಲ್ಲಿ ಗಾಂಧಿ ಮನೆತನಕ್ಕೆ ಕಾಂಗ್ರೆಸ್‌ ಸಿಮೀತವಾದರೆ ಜೇವರ್ಗಿಯಲ್ಲಿ ಸಿಂಗ್‌ ಮನೆಗೆ ಸಿಮೀತ. ಅವರು 35ವರ್ಷ ರಾಜಕೀಯ ಮಾಡಿದರೂ ಯಾವುದೇ ಅಭಿವೃದ್ಧಿ ಮಾಡದ ಕಾರಣ ಇವತ್ತಿಗೂ ಜೇವರ್ಗಿ ಕೊನೆ ಸ್ಥಾನದಲ್ಲಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್‌ ಮಾತನಾಡಿದರು. ಎಸ್‌.ಕೆ.ಹೇರೂರ, ಎಂ.ಬಿ.ಪಾಟೀಲ್‌, ರಮೇಶ ಕುಲಕರ್ಣಿ, ಷಣ್ಮುಖಪ್ಪ ಸಾಹು ಗೋಗಿ, ಪುಂಡಲೀಕ ಗಾಯಕವಾಡ, ಶಿವು ಪಾಟೀಲ್‌, ಶಿವಾನಂದ ಮಾಕಾ, ಭೀಮರಾವ ಗುಜಗುಂಡ, ಪ್ರಭಾಕರ್‌ ರಬಶಟ್ಟಿ, ಸಾಯಬಣ್ಣ ದೊಡಮನಿ, ಗುಂಡು ಸಾಹು ಗೋಗಿ, ವಿಶ್ವನಾಥ ಇಮ್ಮಣ್ಣಿ, ಶರಣಗೌಡ ಸರಡಗಿ, ಸಂಗಣ್ಣಗೌಡ ರದ್ದೇವಾಡಗಿ, ಅಂಬರೇಷ ರಾಠೋಡ, ಶಿವರಾಜ ಧನ್ನಾಕರ್‌, ರಜನೀಶ ಪಂಚಶೀಲ, ಸುನೀಲ ಕೊಂಬಿನ್‌, ಅನೀಲಕುಮಾರ ದೊಡಮನಿ, ಚಂದ್ರಶೇಖರ ಸೀರಿ, ರುಕುಂ ಪಟೇಲ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ