ಆ್ಯಪ್ನಗರ

ಸಭಾಪತಿ ಪಟ್ಟಕ್ಕೆ ಕಾಂಗ್ರೆಸ್‌ ಪಟ್ಟು

sabapati post

Vijaya Karnataka 9 Jul 2018, 5:00 am
ಬೆಂಗಳೂರು : ವಿಧಾನ ಪರಿಷತ್‌ ಸಭಾಪತಿ ಹುದ್ದೆಗಾಗಿ ಕಾಂಗ್ರೆಸ್‌ ಬಿಗಿಪಟ್ಟು ಹಾಕಿದ್ದು ಈ ವಿಚಾರದಲ್ಲಿ ಸಹಮತಕ್ಕೆ ಬರುವುದು ಸವಾಲಾಗಿ ಪರಿಣಮಿಸಿದೆ.
Vijaya Karnataka Web basavaraj horatti


ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಮುಂದುವರಿಸುವುದು ಜೆಡಿಎಸ್‌ ಇಚ್ಛೆಯಾಗಿದೆ. ಈ ಸಂಬಂಧ ಕಾಂಗ್ರೆಸ್‌ ಬೆಂಬಲವನ್ನೂ ಕೇಳಲಾಗಿದೆ. ಆದರೆ, ಪರಿಷತ್‌ನಲ್ಲಿ ಹೆಚ್ಚು ಸ್ಥಾನ ಹೊಂದಿರುವ ತನಗೆ ಸಭಾಪತಿ ಹುದ್ದೆ ದಕ್ಕಬೇಕು ಎನ್ನವುದು ಕಾಂಗ್ರೆಸ್‌ನ ಒತ್ತಡವಾಗಿದೆ. ವಿಧಾನಸಭೆ ಸ್ಪೀಕರ್‌ ಸ್ಥಾನವನ್ನು ಮಿತ್ರಪಕ್ಷಕ್ಕೆ ಬಿಟ್ಟುಕೊಟ್ಟಿದ್ದರಿಂದ ಸಭಾಪತಿ ಸ್ಥಾನ ತನಗಿರಲಿ ಎನ್ನುವುದು ಜೆಡಿಎಸ್‌ ಒತ್ತಾಯವಾಗಿದೆ.

ಸಭಾಪತಿಯಾಗಲು ಕಾಂಗ್ರೆಸ್‌ನಲ್ಲಿ ವಿ.ಎಸ್‌. ಉಗ್ರಪ್ಪ, ಪ್ರತಾಪಚಂದ್ರ ಶೆಟ್ಟಿ ಸೇರಿ ಹಿರಿಯ ಸದಸ್ಯರು ಆಕಾಂಕ್ಷಿಗಳಾಗಿದ್ದಾರೆ. ಈ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮೇಲೂ ಒತ್ತಡ ತಂದಿದ್ದಾರೆ. ಸಭಾಪತಿ ಹುದ್ದೆ ಯಾವ ಪಕ್ಷಕ್ಕೆನ್ನುವುದು ಇತ್ಯರ್ಥವಾಗದ್ದರಿಂದ ಉಪ ಸಭಾಪತಿ ಸ್ಥಾನದ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ ಎನ್ನಲಾಗಿದೆ.

ಎಚ್‌ಡಿಡಿ ಭೇಟಿಯಾದ ಹೊರಟ್ಟಿ

ಈ ಮಧ್ಯೆ ಹಂಗಾಮಿ ಸಭಾಪತಿ ಹೊರಟ್ಟಿ ಅವರನ್ನು ತಮ್ಮ ನಿವಾಸಕ್ಕೆ ಭಾನುವಾರ ಕರೆಸಿಕೊಂಡ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸಮಾಲೋಚನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ