ಆ್ಯಪ್ನಗರ

ಮೈಸೂರು ಲ್ಯಾಂಫ್ಸ್‌ ಕಾರ್ಖಾನೆ ಸ್ಥಗಿತ: ವಿವರ ನೀಡಲು ಸರಕಾರಕ್ಕೆ ಹೈಕೋರ್ಟ್‌ ಸೂಚನೆ

ಸರಕಾರಿ ಒಡೆತನದ ಮೈಸೂರು ಲ್ಯಾಂಫ್ಸ್‌ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಬಗ್ಗೆ ವಿವರ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿತು.

Vijaya Karnataka 12 Dec 2018, 5:00 am
ಬೆಂಗಳೂರು: ಸರಕಾರಿ ಒಡೆತನದ ಮೈಸೂರು ಲ್ಯಾಂಫ್ಸ್‌ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಬಗ್ಗೆ ವಿವರ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿತು.
Vijaya Karnataka Web
ಮೈಸೂರು ಲ್ಯಾಂಫ್ಸ್‌ ಕಾರ್ಖಾನೆ ಸ್ಥಗಿತ: ವಿವರ ನೀಡಲು ಸರಕಾರಕ್ಕೆ ಹೈಕೋರ್ಟ್‌ ಸೂಚನೆ


ಮೈಸೂರು ಲ್ಯಾಂಫ್ಸ್‌ ಕಾರ್ಖಾನೆಯ ಕಾರ್ಮಿಕರ ಒಕ್ಕೂಟ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ಸಿಜೆ ದಿನೇಶ್‌ ಮಹೇಶ್ವರಿ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ.

ಕೆಲ ಕಾಲ ವಿಚಾರಣೆ ನಂತರ 2019ರ ಫೆ.4 ರೊಳಗೆ ಸರಕಾರ ಕಾರ್ಖಾನೆ ಮುಚ್ಚುವ ಪ್ರಕ್ರಿಯೆಯ ಬಗ್ಗೆ ವಿವರ ನೀಡಬೇಕು. ಅಲ್ಲದೆ ಕಾರ್ಖಾನೆಯ ಆಡಳಿತ ಮಂಡಳಿ ಸಿಬ್ಬಂದಿಗೆ ನೀಡುವ ಸ್ವಯಂ ನಿವೃತ್ತಿ ಯೋಜನೆಯ ವಿವರಗಳನ್ನು ನೀಡುವಂತೆಯೂ ಆದೇಶಿಸಿತು.

ಅರ್ಜಿದಾರರ ಪರ ವಕೀಲರು ''2014ರಲ್ಲಿ ಕಾರ್ಖಾನೆ ಮುಚ್ಚಲು ಆದೇಶ ನೀಡಲಾಗಿದೆ. ಅಲ್ಲಿಂದಲೂ 1484 ಸಿಬ್ಬಂದಿ ಹೋರಾಟ ನಡೆಸುತ್ತಿದ್ದಾರೆ. ಕಾರ್ಖಾನೆ ಅವರಿಗೆ ಹಿಂದಿನ ಅಂದರೆ 2001ರ ವಿಆರ್‌ಎಸ್‌ ಪ್ಯಾಕೇಜ್‌ ನೀಡುವುದಾಗಿ ಹೇಳುತ್ತಿದೆ. ಇದರಿಂದ ಸಿಬ್ಬಂದಿಗೆ ಅನ್ಯಾಯವಾಗಲಿದೆ''ಎಂದು ಹೇಳಿದರು.

ಸರಕಾರಿ ವಕೀಲರು, ''ಸರಕಾರ ಬಹಳ ಹಿಂದೆಯೇ ಕಾರ್ಖಾನೆಯನ್ನು ಮುಚ್ಚುವ ಆದೇಶವನ್ನು ಒಪ್ಪಿಕೊಂಡಿದೆ. ಆ ಕುರಿತು ಪ್ರಕ್ರಿಯೆ ಕೈಗೆತ್ತಿಕೊಳ್ಳಲಿದೆ,'' ಎಂದರು.

''ರಾಜ್ಯ ಸರಕಾರ ಸುಮಾರು 80ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಮೈಸೂರು ಲ್ಯಾಂಫ್ಸ್‌ ಕಾರ್ಖಾನೆಯ ಪುನರುಜ್ಜೀವನ ಪ್ಯಾಕೇಜ್‌ ಅಂತಿಮಗೊಳಿಸದ ಹಿನ್ನೆಲೆಯಲ್ಲಿ ಹೈಕೋರ್ಟ್‌ 2014ರಲ್ಲಿಯೇ, ಕಾರ್ಖಾನೆ ಮುಚ್ಚುವಂತೆ 2000ದಲ್ಲಿ ಬೋರ್ಡ್‌ ಆಫ್‌ ಇಂಡಸ್ಟ್ರಿಯಲ್‌ ಆ್ಯಂಡ್‌ ಫೈನಾನ್ಷಿಯಲ್‌ ರಿಕಸ್ಟ್ರಕ್ಷನ್‌ (ಬಿಐಎಫ್‌ಆರ್‌) ನೀಡಿದ್ದ ಆದೇಶವನ್ನು ಎತ್ತಿಹಿಡಿದಿತ್ತು. ಅದರ ವಿರುದ್ಧ ಸಿಬ್ಬಂದಿ ಮೇಲ್ಮನವಿ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ