ಆ್ಯಪ್ನಗರ

ಕಲ್ಲಿನಿಂದ ಹೊಡೆದು ಮಗು ಕೊಲೆಪ್ರಕರಣ: ಮೂವರ ಬಂಧನ

ಸೈಕಲ್‌ ಪಂಕ್ಚರ್‌ ವಿಚಾರವಾಗಿ ಮಗುವನ್ನು ಕಲ್ಲಿನಿಂದ ಹೊಡೆದು ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಗಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Vijaya Karnataka 27 Apr 2019, 5:00 am
ಮುಳಬಾಗಲು : ಸೈಕಲ್‌ ಪಂಕ್ಚರ್‌ ವಿಚಾರವಾಗಿ ಮಗುವನ್ನು ಕಲ್ಲಿನಿಂದ ಹೊಡೆದು ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಗಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
Vijaya Karnataka Web
ಕಲ್ಲಿನಿಂದ ಹೊಡೆದು ಮಗು ಕೊಲೆಪ್ರಕರಣ: ಮೂವರ ಬಂಧನ


ಸೈಕಲ್‌ ಪಂಕ್ಚರ್‌ ಮಾಡಿದನೆಂಬ ಕಾರಣಕ್ಕೆ ಮಹಿಳೆಯೊಬ್ಬರು ಮಗುವಿನ ಜೀವವನ್ನು ತೆಗೆದ ಘಟನೆ ತಾಲೂಕಿನ ಎಚ್‌.ಬೈಪನಹಳ್ಳಿಯಲ್ಲಿ ಗುರುವಾರ ಸಂಜೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಲ್ಯಾಣ ಕುಮಾರ್‌, ಕಿರಣ್‌ ಕುಮಾರ್‌, ರೆಡ್ಡಮ್ಮ ಎಂಬುವವರನ್ನು ಬಂಧಿಸಿದ್ದಾರೆ.

ಕೊಲೆಯಾದ ಮಗುವಿನ ಹೆಸರು ಗೋವರ್ಧನ. ಆತನಿಗೆ ಕೇವಲ ಐದು ವರ್ಷ ವಯಸ್ಸಾಗಿತ್ತು. ಬಾಲಕ ಗೋವರ್ಧನ್‌ ಸೈಕಲ್‌ ಪಂಕ್ಚರ್‌ ಮಾಡಿದ್ದಾನೆಂಬ ವಿಷಯವಾಗಿ ಆತನ ತಾಯಿ ಜ್ಯೋತಿ ಹಾಗೂ ಸೈಕಲ್‌ ಮಾಲೀಕರಾದ ರೆಡ್ಡಮ್ಮ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಇಬ್ಬರೂ ಕಲ್ಲುಗಳಿಂದ ಹೊಡೆದಾಡುತ್ತಿದ್ದಾಗ ರೆಡ್ಡಮ್ಮ ಹೊಡೆದ ಕಲ್ಲು ಗೋವರ್ಧನನ ತಲೆಗೆ ಬಡಿದಿದ್ದರಿಂದ, ಆತನ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಕೂಡಲೇ ಆತನನ್ನು ಹೆಬ್ಬಣಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮೃತಪಟ್ಟಿದ್ದ. ಈ ಸಂಬಂಧ ಗೋವರ್ಧನ್‌ ಪೋಷಕರು ನೀಡಿದ ದೂರಿನ ಅನ್ವಯ ನಂಗಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ