ಆ್ಯಪ್ನಗರ

ಸಿಎಂ ವಿಚಾರಣೆಗೆ ಒಪ್ಪಿಗೆ ಕೋರಿ ರಾಜ್ಯಪಾಲರಿಗೆ ಮನವಿ

ಐಎಂಎಯಿಂದ 20 ಕೋಟಿ ರೂ. ಪಡೆದಿದ್ದಾರೆ ಎಂಬ ಆಪಾದನೆ ಹಿನ್ನಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಎಸ್‌ಐಟಿ ವಿಚಾರಣೆಗೆ ಒಳಪಡಿಸಲು ಒಪ್ಪಿಗೆ ಕೋರಿ ಹೈಕೋರ್ಟ್‌ ವಕೀಲರಿಬ್ಬರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

Vijaya Karnataka 20 Jul 2019, 5:00 am
ಬೆಂಗಳೂರು : ಐಎಂಎಯಿಂದ 20 ಕೋಟಿ ರೂ. ಪಡೆದಿದ್ದಾರೆ ಎಂಬ ಆಪಾದನೆ ಹಿನ್ನಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಎಸ್‌ಐಟಿ ವಿಚಾರಣೆಗೆ ಒಳಪಡಿಸಲು ಒಪ್ಪಿಗೆ ಕೋರಿ ಹೈಕೋರ್ಟ್‌ ವಕೀಲರಿಬ್ಬರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
Vijaya Karnataka Web
ಸಿಎಂ ವಿಚಾರಣೆಗೆ ಒಪ್ಪಿಗೆ ಕೋರಿ ರಾಜ್ಯಪಾಲರಿಗೆ ಮನವಿ


ಶುಕ್ರವಾರ ರಾಜಭವನಕ್ಕೆ ತೆರಳಿದ ವಕೀಲರಾದ ಟಿ.ಸಿ.ನಾಯ್ಕ ಹಾಗೂ ಎ.ವಿ.ಹಿರೇಮಠ್‌ ಅವರು ಮನವಿ ಸಲ್ಲಿಸಿದ್ದಾರೆ. ರಾಜ್ಯಪಾಲರ ಭೇಟಿಗೆ ಅವಕಾಶ ಸಿಗದ ಕಾರಣ ರಾಜಭವನದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ವಕೀಲರು ವಾಪಸಾದರು.

ಎಸ್‌ಐಟಿ ವಿಚಾರಣೆ ವೇಳೆ ಶಾಸಕ ರೋಷನ್‌ ಬೇಗ್‌ ಅವರು ತನಿಖಾಧಿಕಾರಿಗಳ ಮುಂದೆ ಸಿಎಂ 20 ಕೋಟಿ ರೂ. ಹಣವನ್ನು ಐಎಂಎಯಿಂದ ಪಡೆದಿದ್ದಾರೆ ಹೇಳಿಕೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ