ಆ್ಯಪ್ನಗರ

ಅನರ್ಹತೆಗೆ ಸ್ಪೀಕರ್‌ ಕೊಟ್ಟ ಕಾರಣಗಳೇನು?

ಎಐಎಡಿಎಂಕೆಯ 18 ಶಾಸಕರ ವಿಚಾರದಲ್ಲಿ ತಮಿಳುನಾಡು ವಿಧಾನಸಭೆ ಸ್ಪೀಕರ್‌ ಧನಪಾಲ್‌ ಕೈಗೊಂಡ ನಿರ್ಧಾರವನ್ನೇ ಕರ್ನಾಟಕ ಸ್ಪೀಕರ್‌ ರಮೇಶ್‌ ಕುಮಾರ್‌ ತಮ್ಮ ತೀರ್ಪಿಗೆ ಸಮರ್ಥನೆಯಾಗಿ ಬಳಸಿಕೊಂಡಿದ್ದಾರೆ.

Vijaya Karnataka 26 Jul 2019, 5:00 am
ಬೆಂಗಳೂರು : ಎಐಎಡಿಎಂಕೆಯ 18 ಶಾಸಕರ ವಿಚಾರದಲ್ಲಿ ತಮಿಳುನಾಡು ವಿಧಾನಸಭೆ ಸ್ಪೀಕರ್‌ ಧನಪಾಲ್‌ ಕೈಗೊಂಡ ನಿರ್ಧಾರವನ್ನೇ ಕರ್ನಾಟಕ ಸ್ಪೀಕರ್‌ ರಮೇಶ್‌ ಕುಮಾರ್‌ ತಮ್ಮ ತೀರ್ಪಿಗೆ ಸಮರ್ಥನೆಯಾಗಿ ಬಳಸಿಕೊಂಡಿದ್ದಾರೆ.
Vijaya Karnataka Web
ಅನರ್ಹತೆಗೆ ಸ್ಪೀಕರ್‌ ಕೊಟ್ಟ ಕಾರಣಗಳೇನು?


''ರವಿನಾಯಕ್‌ ಮತ್ತು ಕೇಂದ್ರ ಸರಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ಇವುಗಳನ್ನು ಆಧಾರವಾಗಿಟ್ಟುಕೊಂಡು ತಾವು ಈ ತೀರ್ಮಾನ ಕೈಗೊಂಡಿರುವುದಾಗಿ'' ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪಕ್ಷಾಂತರಿ ಶಂಕರ್‌

- ರಾಣೆಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಪಕ್ಷದ ಆಟೋರಿಕ್ಷಾ ಚಿನ್ಹೆಯಡಿ ವಿಧಾನಸಭೆಗೆ ಆಯ್ಕೆಯಾಗಿದ್ದ ಶಂಕರ್‌ ಅವರು ಜೂ.14 ರಂದು ತಮಗೆ ಪತ್ರ ನೀಡಿ ಕೆಪಿಜೆಪಿಯನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡುವುದಾಗಿ ತಿಳಿಸಿದ್ದರು. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರೂ ಇದನ್ನು ಅನುಮೋದಿಸಿದ್ದರು.

-ಆದರೆ, ಜು.8 ರಂದು ಶಂಕರ್‌ ಅವರು ಮತ್ತೊಬ್ಬ ಪಕ್ಷೇತರ ಶಾಸಕ ನಾಗೇಶ್‌ ಅವರೊಟ್ಟಿಗೆ ರಾಜ್ಯಪಾಲರನ್ನು ನೇರವಾಗಿ ಭೇಟಿ ಮಾಡಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ,ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ಈ ಪತ್ರವನ್ನು ರಾಜ್ಯಪಾಲರು ನನಗೆ ರವಾನೆ ಮಾಡಿದ್ದರು. ಶಂಕರ್‌ ಅವರ ಈ ತೀರ್ಮಾನ ಪಕ್ಷಾಂತರ ನಿಷೇಧ ಕಾಯಿದೆ ಉಲ್ಲಂಘನೆ ಎಂದು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ದೂರು ಸಲ್ಲಿಸಿದ್ದರು. ಇದು 1985ರ ಶೆಡ್ಯೂಲ್‌ 10ರಡಿ ಪಕ್ಷಾಂತರ.

ಜಾರಕಿಹೊಳಿ/ ಕುಮಠಳ್ಳಿಗೆ ಅನರ್ಹತೆ ಶಿಕ್ಷೆ

-ಕಾಂಗ್ರೆಸ್‌ನ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಠಳ್ಳಿ, ಉಮೇಶ್‌ ಜಾಧವ್‌ ಮತ್ತು ಬಿ.ನಾಗೇಂದ್ರ ಅನರ್ಹತೆಗೆ ಕಾಂಗ್ರೆಸ್‌ ಕಳೆದ ಫೆ.11 ರಂದು ದೂರು ಸಲ್ಲಿಸಿತ್ತು. ಮತ್ತೆ ದೂರು ಮಾರ್ಪಡಿಸಿ ಉಮೇಶ್‌ ಜಾಧವ್‌ ಮತ್ತು ನಾಗೇಂದ್ರ ಅವರನ್ನು ಕೈಬಿಡಲು ಕಾಂಗ್ರೆಸ್‌ ಕೋರಿತು.

-ಜು.8 ರಂದು ಸಿಎಲ್‌ಪಿ ನಾಯಕರಿಂದ ರಮೇಶ್‌ ಜಾರಕಿಹೊಳಿ ಮತ್ತು ಮಹೇಶ್‌ ಕುಮಠಳ್ಳಿ ವಿರುದ್ಧ ಮತ್ತೆ ದೂರು ನೀಡಿದರು. ಈ ಇಬ್ಬರ ರಾಜೀನಾಮೆ ಸ್ವಯಂಪ್ರೇರಿತ ಮತ್ತು ನೈಜತೆಯಿಂದ ಕೂಡಿವೆ ಎಂದು ಮನವರಿಕೆಯಾಗಿಲ್ಲ.

ಜತೆಗೆ ಅವರು, ರಾಜೀನಾಮೆ ನೀಡುವ ದಿನ ವಿಶೇಷ ವಿಮಾನದಲ್ಲಿ ಬಂದಿಳಿದರು. ಸುಪ್ರೀಂಕೋರ್ಟ್‌ನಲ್ಲಿ ಅವರು ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಮಾಹಿತಿ ಸುಳ್ಳಾಗಿತ್ತು ಎಂಬುದನ್ನೂ ಆ ಶಾಸಕರು ಒಪ್ಪಿಕೊಂಡರು. ಆ ವಿಡಿಯೋ ಚಿತ್ರೀಕರಿಸಿ ಕೋರ್ಟ್‌ಗೂ ತಲುಪಿಸಲಾಗಿದೆ. ಈ ನಡವಳಿಕೆ ಆಧಾರದ ಮೇಲೆ ಈ ಇಬ್ಬರನ್ನೂ ಅನರ್ಹ ಮಾಡಲಾಗಿದೆ ಎಂದು ಸ್ಪೀಕರ್‌ ವಿವರಣೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ