ಆ್ಯಪ್ನಗರ

ಸಾರಾ ಮಹೇಶ್ ರಾಜೀನಾಮೆ ವಾಪಸ್‌ಗೆ ಸೂಚಿಸಿರುವೆ, ಒಪ್ಪಿಕೊಂಡಿದ್ದಾರೆ: ದೇವೇಗೌಡ

ಜೆಡಿಎಸ್‌ನಲ್ಲಿ ಈಗ ಬಿಕ್ಕಟ್ಟು ಉಲ್ಬಣಗೊಂಡಿದೆ. ಎಚ್‌ಡಿಕೆ, ದೇವೇಗೌಡರ ಪರಮಾಪ್ತ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಸಾರಾ ಮಹೇಶ್‌ ರಾಜೀನಾಮೆ ನೀಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

Vijaya Karnataka Web 16 Oct 2019, 10:14 pm
ಬೆಂಗಳೂರು: ''ಎಚ್‌.ವಿಶ್ವನಾಥ್‌ ಹಾಗೂ ಸಾ.ರಾ.ಮಹೇಶ್‌ ಅವರ ಕೆಟ್ಟ ರಾಜಕಾರಣದಲ್ಲಿನಾನು ಭಾಗಿಯಾಗುವುದಿಲ್ಲ. ಆದರೆ ರಾಜೀನಾಮೆ ವಾಪಸ್‌ ಪಡೆಯುವಂತೆ ಮಹೇಶ್‌ಗೆ ಕರೆ ಮಾಡಿ ತಿಳಿ ಹೇಳಿದ್ದೇನೆ. ಅವರು ಒಪ್ಪಿದ್ದಾರೆ'' ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.
Vijaya Karnataka Web ದೇವೇಗೌಡ
ದೇವೇಗೌಡ


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀನಾಮೆ ಏಕೆ ಎಂದು ಸ್ಪೀಕರ್‌ ಕೂಡಾ ಸಲಹೆ ನೀಡಿದ್ದಾರೆ. ಹೀಗಾಗಿ ಮಹೇಶ್‌ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈಗ ಸ್ಪೀಕರ್‌ ಬೇರೆ ಕೆಲಸದಲ್ಲಿದ್ದಾರೆ ಎಂದರು.

ಅವರು ಬಂದ ನಂತರ ಮಹೇಶ್‌ ರಾಜೀನಾಮೆ ವಾಪಸ್‌ ಪಡೆಯುತ್ತಾರೆ. ನಾನು ಎಚ್‌.ವಿಶ್ವನಾಥ್‌ ಬಗ್ಗೆ ಮಾತನಾಡುವುದಿಲ್ಲ. ಒಬ್ಬರು ದೇವಸ್ಥಾನದಲ್ಲಿ ಆಣೆ-ಪ್ರಮಾಣ ಮಾಡುತ್ತೇನೆ ಎನ್ನುತ್ತಾರೆ. ಇನ್ನೊಬ್ಬರು ನನಗೇನು ದರ್ದು ಇಲ್ಲಎನ್ನುತ್ತಾರೆ. ಹೀಗಾಗಿ ನಾನು ಈ ವಿಚಾರದಲ್ಲಿ ಭಾಗಿಯಾಗುವುದಿಲ್ಲ'' ಎಂದು ಎಚ್‌ಡಿ ದೇವೇಗೌಡ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ