ಬೆಂಗಳೂರು: ರಾಜ್ಯದಲ್ಲಿ ಮುಂಗಾರುಪೂರ್ವ ಮಳೆ ಚಟುವಟಿಕೆ ಆರಂಭವಾಗಿದೆ. ಏಪ್ರಿಲ್ ಕೊನೆ ವಾರದಲ್ಲಿ ಭಾರಿ ಮಳೆಯ ನಿರೀಕ್ಷೆ ಇದೆ.
ಏ.15ರಿಂದ ಪೂರ್ವ ಮುಂಗಾರು ಆರಂಭವಾಗುತ್ತದೆ ಎನ್ನಲಾಗಿತ್ತು. ಅದರಂತೆ ಸೋಮವಾರ ರಾಜ್ಯದ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯ ಸಾಧ್ಯತೆ ಇದ್ದರೂ, ರಾಜ್ಯಾದ್ಯಂತ ಮಳೆ ಆರಂಭವಾಗುವುದು ಏಪ್ರಿಲ್ ಕೊನೆಯ ವಾರ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಸೋಮವಾರ ತುಮಕೂರಿನ ಹುಲಿಯೂರುದುರ್ಗದಲ್ಲಿ ಅತ್ಯಧಿಕ 9 ಸೆಮೀ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಬಸರಾಳು, ಮಳವಳ್ಳಿಯಲ್ಲಿ 5 ಸೆಮೀ. ಮಲೆಮಹಾದೇಶ್ವರ ಬೆಟ್ಟ, ಹೊನಕೆರೆ, ಮದ್ದೂರು, ಚಿಂತಾಮಣಿಯಲ್ಲಿ ತಲಾ 3 ಸೆಮೀ, ಕೆ.ಆರ್.ನಗರ, ಟಿ.ನರಸೀಪುರ, ಶ್ರೀರಂಗಪಟ್ಟಣ, ಮಂಡ್ಯ, ರಾಯಲ್ಪಾಡು, ಕೆಜಿಎಫ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಚಿಂತಾಮಣಿ, ಗೌರಿಬಿದನೂರು, ಕುಣಿಗಲ್ನಲ್ಲಿ 2 ಸೆಮೀ, ಯಳಂದೂರು, ಕೊಳ್ಳೇ ಗಾಲ, ಚನ್ನರಾಯಪಟ್ಟಣ, ಮಾಲೂರು, ಜಿಕೆವಿಕೆ, ತೊಂಡೆಬಾವಿ, ಕನಕಪುರ, ಕೊರಟಗೆರೆ ತಲಾ 1 ಸೆಮೀ ಮಳೆಯಾಗಿದೆ.
ಬೆಂಗಳೂರಿನಲ್ಲಿ 3.2 ಮಿಮೀ ಮಳೆ ಸುರಿದಿದೆ. ಹೆಸರಘಟ್ಟ 6 ಮಿಮೀ, ಟಿ.ಜಿ. ಹಳ್ಳಿ 3.2 ಮಿಮೀ, ಜಿಕೆವಿಕೆ 11.8 ಮಿಮೀ, ನೈಸ್ ರಸ್ತೆ ಸಮೀಪದ ಗೋಪಾಲಪುರ 1 ಮಿಮೀ, ನೆಲಮಂಗಲ 19 ಮಿಮೀ, ಹೊಸಕೋಟೆ 1.4 ಮಿಮೀ ಹಾಗೂ ದೇವನಹಳ್ಳಿಯಲ್ಲಿ 3.2 ಮಿಮೀ ಮಳೆಯಾಗಿದೆ.
ಹಗಲಿನ ಹೆಚ್ಚಳ
ಏ.15ರ ನಂತರ ಹಗಲಿನ ಅವಧಿ ಹೆಚ್ಚುತ್ತದೆ. ಕೆಲವೆಡೆ ಹಗಲು 13 ತಾಸು, ರಾತ್ರಿ 11 ತಾಸು ಬರುತ್ತದೆ. ಬೆಂಗಳೂರಿನಲ್ಲಿ ಸದ್ಯ ಹಗಲಿನ ಅವಧಿ 24 ನಿಮಿಷ ಹೆಚ್ಚು ಇದ್ದು, 55 ನಿಮಿಷ ತಲುಪುತ್ತದೆ. ಹಗಲು ಹೆಚ್ಚಿದಂತೆ ಉಷ್ಣಾಂಶದಲ್ಲೂ ಏರಿಕೆಯಾಗುತ್ತದೆ. ಮೋಡ ಕಟ್ಟಿಕೊಂಡು ಭಾರಿ ಮಳೆ, ಗುಡುಗು-ಸಿಡಿಲು ಸಾಮಾನ್ಯ.
-----
ಪೂರ್ವ ಮುಂಗಾರು ಚಟುವಟಿಕೆ ಏ.15ರಿಂದ ಆರಂಭವಾಗಿದೆ. ಇನ್ನು ಮುಂದೆ ಮಳೆಯ ಸಾಧ್ಯತೆ ಹೆಚ್ಚು. ಬೆಳಗ್ಗೆ ಬಿಸಿಲು ಇದ್ದರೂ ಸಂಜೆ ಮೋಡ ಕವಿದು ಕಡಿಮೆ ಅವಧಿಯಲ್ಲಿ ಭಾರಿ ಮಳೆಯಾಗುತ್ತದೆ.ದಕ್ಷಿಣ ಒಳನಾಡು ಹೊರತುಪಡಿಸಿ ಒಣ ಹವೆ ಮುಂದುವರಿದಿದ್ದು, ಏಪ್ರಿಲ್ ಕೊನೆಯ ವಾರದಲ್ಲಿ ಭಾರಿ ಮಳೆ ಸಾಧ್ಯತೆ ಇದೆ.
* ಬಿ.ಪುಟ್ಟಣ್ಣ, ಹವಾಮಾನ ಇಲಾಖೆ ನಿರ್ದೇಶಕ
ಏ.15ರಿಂದ ಪೂರ್ವ ಮುಂಗಾರು ಆರಂಭವಾಗುತ್ತದೆ ಎನ್ನಲಾಗಿತ್ತು. ಅದರಂತೆ ಸೋಮವಾರ ರಾಜ್ಯದ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯ ಸಾಧ್ಯತೆ ಇದ್ದರೂ, ರಾಜ್ಯಾದ್ಯಂತ ಮಳೆ ಆರಂಭವಾಗುವುದು ಏಪ್ರಿಲ್ ಕೊನೆಯ ವಾರ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಸೋಮವಾರ ತುಮಕೂರಿನ ಹುಲಿಯೂರುದುರ್ಗದಲ್ಲಿ ಅತ್ಯಧಿಕ 9 ಸೆಮೀ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಬಸರಾಳು, ಮಳವಳ್ಳಿಯಲ್ಲಿ 5 ಸೆಮೀ. ಮಲೆಮಹಾದೇಶ್ವರ ಬೆಟ್ಟ, ಹೊನಕೆರೆ, ಮದ್ದೂರು, ಚಿಂತಾಮಣಿಯಲ್ಲಿ ತಲಾ 3 ಸೆಮೀ, ಕೆ.ಆರ್.ನಗರ, ಟಿ.ನರಸೀಪುರ, ಶ್ರೀರಂಗಪಟ್ಟಣ, ಮಂಡ್ಯ, ರಾಯಲ್ಪಾಡು, ಕೆಜಿಎಫ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಚಿಂತಾಮಣಿ, ಗೌರಿಬಿದನೂರು, ಕುಣಿಗಲ್ನಲ್ಲಿ 2 ಸೆಮೀ, ಯಳಂದೂರು, ಕೊಳ್ಳೇ ಗಾಲ, ಚನ್ನರಾಯಪಟ್ಟಣ, ಮಾಲೂರು, ಜಿಕೆವಿಕೆ, ತೊಂಡೆಬಾವಿ, ಕನಕಪುರ, ಕೊರಟಗೆರೆ ತಲಾ 1 ಸೆಮೀ ಮಳೆಯಾಗಿದೆ.
ಬೆಂಗಳೂರಿನಲ್ಲಿ 3.2 ಮಿಮೀ ಮಳೆ ಸುರಿದಿದೆ. ಹೆಸರಘಟ್ಟ 6 ಮಿಮೀ, ಟಿ.ಜಿ. ಹಳ್ಳಿ 3.2 ಮಿಮೀ, ಜಿಕೆವಿಕೆ 11.8 ಮಿಮೀ, ನೈಸ್ ರಸ್ತೆ ಸಮೀಪದ ಗೋಪಾಲಪುರ 1 ಮಿಮೀ, ನೆಲಮಂಗಲ 19 ಮಿಮೀ, ಹೊಸಕೋಟೆ 1.4 ಮಿಮೀ ಹಾಗೂ ದೇವನಹಳ್ಳಿಯಲ್ಲಿ 3.2 ಮಿಮೀ ಮಳೆಯಾಗಿದೆ.
ಹಗಲಿನ ಹೆಚ್ಚಳ
ಏ.15ರ ನಂತರ ಹಗಲಿನ ಅವಧಿ ಹೆಚ್ಚುತ್ತದೆ. ಕೆಲವೆಡೆ ಹಗಲು 13 ತಾಸು, ರಾತ್ರಿ 11 ತಾಸು ಬರುತ್ತದೆ. ಬೆಂಗಳೂರಿನಲ್ಲಿ ಸದ್ಯ ಹಗಲಿನ ಅವಧಿ 24 ನಿಮಿಷ ಹೆಚ್ಚು ಇದ್ದು, 55 ನಿಮಿಷ ತಲುಪುತ್ತದೆ. ಹಗಲು ಹೆಚ್ಚಿದಂತೆ ಉಷ್ಣಾಂಶದಲ್ಲೂ ಏರಿಕೆಯಾಗುತ್ತದೆ. ಮೋಡ ಕಟ್ಟಿಕೊಂಡು ಭಾರಿ ಮಳೆ, ಗುಡುಗು-ಸಿಡಿಲು ಸಾಮಾನ್ಯ.
-----
ಪೂರ್ವ ಮುಂಗಾರು ಚಟುವಟಿಕೆ ಏ.15ರಿಂದ ಆರಂಭವಾಗಿದೆ. ಇನ್ನು ಮುಂದೆ ಮಳೆಯ ಸಾಧ್ಯತೆ ಹೆಚ್ಚು. ಬೆಳಗ್ಗೆ ಬಿಸಿಲು ಇದ್ದರೂ ಸಂಜೆ ಮೋಡ ಕವಿದು ಕಡಿಮೆ ಅವಧಿಯಲ್ಲಿ ಭಾರಿ ಮಳೆಯಾಗುತ್ತದೆ.ದಕ್ಷಿಣ ಒಳನಾಡು ಹೊರತುಪಡಿಸಿ ಒಣ ಹವೆ ಮುಂದುವರಿದಿದ್ದು, ಏಪ್ರಿಲ್ ಕೊನೆಯ ವಾರದಲ್ಲಿ ಭಾರಿ ಮಳೆ ಸಾಧ್ಯತೆ ಇದೆ.
* ಬಿ.ಪುಟ್ಟಣ್ಣ, ಹವಾಮಾನ ಇಲಾಖೆ ನಿರ್ದೇಶಕ