ಆ್ಯಪ್ನಗರ

ಐಟಿ ದಾಳಿ: ಸಿಕ್ಕಿದೆ 2000ರೂ. ಮುಖಬೆಲೆಯ 4.7 ಕೋಟಿ ಹಣ

ಅಧಿಕಾರಿಗಳ ಮನೆಯಲ್ಲಿ 2000 ರೂ. ಮುಖಬೆಲೆಯ 4.7 ಕೋಟಿ ರೂ. ಹಣ ಪತ್ತೆ ಆಗಿದೆ.

ವಿಕ ಸುದ್ದಿಲೋಕ 1 Dec 2016, 8:35 pm
ಬೆಂಗಳೂರು: ಕಾಳಧನಿಕರ ಬೆನ್ನು ಬಿದ್ದಿರುವ ಐಟಿ ಅಧಿಕಾರಿಗಳು ಸಿಎಂ ಹಾಗೂ ಸಚಿವ ಮಹದೇವಪ್ಪ ಅವರ ಆಪ್ತ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಹಾಗೂ ಐಎಎಸ್‌ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಹೊಸ ನೋಟು ವಶಪಡಿಸಿಕೊಂಡಿದ್ದಾರೆ.
Vijaya Karnataka Web  it raid rs 4 7 crores is in new currency of rs 2000 notes found
ಐಟಿ ದಾಳಿ: ಸಿಕ್ಕಿದೆ 2000ರೂ. ಮುಖಬೆಲೆಯ 4.7 ಕೋಟಿ ಹಣ


ಬುಧವಾರವೇ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಗುರುವಾರವೂ ತಪಾಸಣೆ ಮುಂದುವರಿಸಿದ್ದರು. ಅಧಿಕಾರಿಗಳ ಮನೆಯಲ್ಲಿ 2000 ರೂ. ಮುಖಬೆಲೆಯ 4.7 ಕೋಟಿ ರೂ. ಹಣ ಪತ್ತೆ ಮಾಡಿದ್ದಾರೆ.

ಅಧಿಕಾರಿಗಳಿಗೆ ಭಾರಿ ಪ್ರಮಾಣದಲ್ಲಿ ಹೊಸ ನೋಟುಗಳು ಹೇಗೆ ಸಿಕ್ಕವು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಐಎಎಸ್‌ ಅಧಿಕಾರಿ ಚಕ್ರವರ್ತಿ ಮೋಹನ್‌, ಸಂಜಯನಗರದಲ್ಲಿರುವ ಚಿಕ್ಕರಾಯಪ್ಪ ಹಾಗೂ ಬಾಣಸವಾಡಿ ಧನಲಕ್ಷ್ಮಿ ಕೋಆಪರೇಟಿವ್‌ ಸೊಸೈಟಿ ವ್ಯವಸ್ಥಾಪಕ ಉಮಾಶಂಕರ್‌ ಎಂಬುವರ ಮನೆಯಲ್ಲಿ ತಪಾಸಣೆ ನಡೆಸಲಾಗಿದೆ. ಮೇಲೆ ನಾನಾ ತಂಡಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿತ್ತು.

ಚಿನ್ನವೂ ಇದೆ:

ಅಧಿಕಾರಿಗಳ ಮನೆಯಲ್ಲಿ 5 ಕೆಜಿಗಿಂತ ಹೆಚ್ಚು ಚಿನ್ನ, ಆರು ಕೆಜಿ ಬೆಳ್ಳಿ ಪತ್ತೆಯಾಗಿದೆ. ಅಲ್ಲದೇ, ಕೋಟ್ಯಂತರ ರೂಪಾಯಿ ಬೆಲೆಯ ಐಷಾರಾಮಿ 2ಲ್ಯಾಂಬೋರ್ ಗಿನಿ ಕಾರು, ಒಂದು ಬೈಕ್ ಅನ್ನು ಖರೀದಿಸಿರುವ ದಾಖಲೆ ಪತ್ರವೂ ಲಭ್ಯವಾಗಿದೆ.

ಪ್ರಭಾವ ಬಳಸಿ ಮೇಲೇರಿದ್ದರು

ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ ಆಗಿದ್ದ ಚಿಕ್ಕರಾಯಪ್ಪ ಅವರು ಪ್ರಭಾವ ಬಳಸಿ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಹುದ್ದೆಗೇರಿದ್ದರು. ಎಂಜಿನಿಯರೊಬ್ಬರು ಕಾರ್ಯದರ್ಶಿ ಹುದ್ದೆಗೇರಿದ್ದು ಇದೇ ಮೊದಲು. ಅರ್ಹತೆ ಇಲ್ಲದಿದ್ದರೂ ಆ ಹುದ್ದೆಗೇರಿಸಿದ ಸಿದ್ದರಾಮಯ್ಯ ಸರಕಾರದ ಕ್ರಮದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ನಂತರ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿ ಕಾವೇರಿ ನೀರಾವರಿ ನಿಗಮದ ಎಂಡಿ ಹುದ್ದೆಗೆ ವರ್ಗಾಯಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ