ಕೊರೊನಾ ಮಣಿಸಿದ 104ರ ದೊರೆಸ್ವಾಮಿ, ಆಸ್ಪತ್ರೆಯಿಂದ ಬಿಡುಗಡೆ
ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ 104 ವರ್ಷದ ಎಚ್.ಎಸ್. ದೊರೆಸ್ವಾಮಿ ಅವರು ಕೋವಿಡ್-19ನಿಂದ ಗೆದ್ದು ಬಂದಿದ್ದಾರೆ. ಸೋಂಕಿನಿಂದ ಗುಣಮುಖರಾದ ಅವರು ಜಯದೇವ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Vijaya Karnataka 12 May 2021, 11:13 pm
ಹೈಲೈಟ್ಸ್:
- ಕೊರೊನಾ ಆತಂಕದಲ್ಲಿರುವ ರಾಜ್ಯದ ಜನತೆಗೆ ಇದೊಂದು ಶುಭ ಸುದ್ದಿಯೇ
- ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ 104 ವರ್ಷದ ಎಚ್.ಎಸ್. ದೊರೆಸ್ವಾಮಿ ಅವರು ಕೊರೊನಾವನ್ನು ಮಣಿಸಿದ್ದಾರೆ
- ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ದೊರೆಸ್ವಾಮಿ, ಜಯದೇವ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರು: ಕೊರೊನಾ ಆತಂಕದಲ್ಲಿರುವ ರಾಜ್ಯದ ಜನತೆಗೆ ಇದೊಂದು ಶುಭ ಸುದ್ದಿಯೇ ಸರಿ. ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ 104 ವರ್ಷದ ಎಚ್.ಎಸ್. ದೊರೆಸ್ವಾಮಿ ಅವರು ಕೊರೊನಾವನ್ನು ಗೆದ್ದು ಬಂದಿದ್ದಾರೆ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ದೊರೆಸ್ವಾಮಿ, ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾದರು.
ಈ ವೇಳೆ ಮಾತನಾಡಿದ ಎಚ್.ಎಸ್. ದೊರೆಸ್ವಾಮಿ, ''ನನಗೆ ಕೋವಿಡ್ ಸೋಂಕು ಇರಲಿಲ್ಲ. ಕಳೆದ ವಾರ ಕೊಂಚ ಉಸಿರಾಟಕ್ಕೆ ತೊಂದರೆಯಾಯಿತು. ನನಗೆ ಆಗಾಗ ಇಂತಹ ತೊಂದರೆ ಕಂಡು ಬರುತ್ತದೆ. ಆಗೆಲ್ಲಾ ಜಯದೇವ ಆಸ್ಪತ್ರೆಗೆ ಹೋಗಿ ಒಂದು ಇಂಜೆಕ್ಷನ್ ತೆಗೆದುಕೊಂಡು ಬರುತ್ತಿದ್ದೆ. ಅದೇ ರೀತಿ ಈಗಲೂ ಹೋಗಿ ಇಂಜೆಕ್ಷನ್ ತೆಗೆದುಕೊಂಡೆ. ಸರಿ ಹೋಯಿತು. ಆ ವೇಳೆಗೆ ಆಸ್ಪತ್ರೆಯವರು ಕೋವಿಡ್ ಟೆಸ್ಟ್ ಮಾಡಿದರು. ಆಗ ಪಾಸಿಟಿವ್ ಬಂತು. ಒಂದು ವಾರ ಇಲ್ಲಿಯೇ ಇರಬೇಕು ಎಂದರು. ವೈದ್ಯರಾದ ಡಾ. ಮಂಜುನಾಥ್ ಸಲಹೆಯಂತೆ ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾದೆ. ಜತೆಗೆ ನನಗೆ ಆಗಾಗ ಕಫ, ಕೆಮ್ಮು ಮಾಮೂಲಿಯಾಗಿ ಬರುತ್ತದೆ. ಏನೂ ತೊಂದರೆಯಿಲ್ಲ'' ಎಂದು ತಮ್ಮ ಅನುಭವ ಹಂಚಿಕೊಂಡರು.
ಜಯನಗರ ನಾಲ್ಕನೇ ಟಿ ಬ್ಲಾಕ್ನಲ್ಲಿ ನೆಲೆಸಿರುವ ದೊರೆಸ್ವಾಮಿಯವರಿಗೆ (ಪತ್ನಿ ನಿಧನರಾಗಿದ್ದಾರೆ) ಸ್ನೇಹಿತರೇ ಆಸರೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ಎಚ್.ಎಸ್. ದೊರೆಸ್ವಾಮಿ, ''ನನಗೆ ಕೋವಿಡ್ ಸೋಂಕು ಇರಲಿಲ್ಲ. ಕಳೆದ ವಾರ ಕೊಂಚ ಉಸಿರಾಟಕ್ಕೆ ತೊಂದರೆಯಾಯಿತು. ನನಗೆ ಆಗಾಗ ಇಂತಹ ತೊಂದರೆ ಕಂಡು ಬರುತ್ತದೆ. ಆಗೆಲ್ಲಾ ಜಯದೇವ ಆಸ್ಪತ್ರೆಗೆ ಹೋಗಿ ಒಂದು ಇಂಜೆಕ್ಷನ್ ತೆಗೆದುಕೊಂಡು ಬರುತ್ತಿದ್ದೆ. ಅದೇ ರೀತಿ ಈಗಲೂ ಹೋಗಿ ಇಂಜೆಕ್ಷನ್ ತೆಗೆದುಕೊಂಡೆ. ಸರಿ ಹೋಯಿತು. ಆ ವೇಳೆಗೆ ಆಸ್ಪತ್ರೆಯವರು ಕೋವಿಡ್ ಟೆಸ್ಟ್ ಮಾಡಿದರು. ಆಗ ಪಾಸಿಟಿವ್ ಬಂತು. ಒಂದು ವಾರ ಇಲ್ಲಿಯೇ ಇರಬೇಕು ಎಂದರು. ವೈದ್ಯರಾದ ಡಾ. ಮಂಜುನಾಥ್ ಸಲಹೆಯಂತೆ ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾದೆ. ಜತೆಗೆ ನನಗೆ ಆಗಾಗ ಕಫ, ಕೆಮ್ಮು ಮಾಮೂಲಿಯಾಗಿ ಬರುತ್ತದೆ. ಏನೂ ತೊಂದರೆಯಿಲ್ಲ'' ಎಂದು ತಮ್ಮ ಅನುಭವ ಹಂಚಿಕೊಂಡರು.
ಜಯನಗರ ನಾಲ್ಕನೇ ಟಿ ಬ್ಲಾಕ್ನಲ್ಲಿ ನೆಲೆಸಿರುವ ದೊರೆಸ್ವಾಮಿಯವರಿಗೆ (ಪತ್ನಿ ನಿಧನರಾಗಿದ್ದಾರೆ) ಸ್ನೇಹಿತರೇ ಆಸರೆಯಾಗಿದ್ದಾರೆ.