ಬೆಂಗಳೂರು: ಅನರ್ಹ ಶಾಸಕರ ಕುರಿತಾಗಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಬೆನ್ನಲ್ಲೇ ಗುರುವಾರ ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಮತ್ತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ 16 ಮಂದಿ ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡರು.
'ಅನರ್ಹತೆ' ಕುರಿತಾಗಿ ಸುಪ್ರೀಂ ತೀರ್ಪು; ಅನರ್ಹ ಶಾಸಕರ ಜೊತೆ ಸಿಎಂ ಗೌಪ್ಯ ಮಾತುಕತೆ
ಸುಪ್ರೀಂ ಕೋರ್ಟ್ನಲ್ಲಿ ಗೆದ್ದ ಅನರ್ಹರಿಗೆ ಜನತಾ ನ್ಯಾಯಾಲಯದಲ್ಲಿ ಅಗ್ನಿಪರೀಕ್ಷೆ
ಶಿವಾಜಿನಗರದ ಅನರ್ಹ ಶಾಸಕ ರೋಷನ್ ಬೇಗ್ ಅವರನ್ನು ಬಿಟ್ಟು ಮಿಕ್ಕ ಎಲ್ಲಾ 16 ಅನರ್ಹ ಶಾಸಕರು ಬಿಜೆಪಿ ಸೇರಿಕೊಂಡಿದ್ದು, ಸಂಜೆ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಯಾಗುವ ಸಾಧ್ಯತೆಯಿದೆ. ಹುಣಸೂರು ಕ್ಷೇತ್ರದಿಂದ ಎಚ್. ವಿಶ್ವನಾಥ್ ಅವರು ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಇರುವ ಕಾರಣ ಅವರನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಕ್ಷೇತ್ರಗಳಿಗೂ ಅನರ್ಹ ಶಾಸಕರೇ ಅಭ್ಯರ್ಥಿಗಳಾಗಲಿದ್ದಾರೆ. ಹೀಗಾಗಿ ಹುಣಸೂರು ಕ್ಷೇತ್ರದಿಂದ ಯಾರನ್ನು ಬಿಜೆಪಿ ಆಯ್ಕೆ ಮಾಡಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.
ಅನರ್ಹರಿಗೆ ಸಿಕ್ತು ‘ಸುಪ್ರೀಂ’ ರಿಲ್ಯಾಕ್ಸ್ : ಮುಂದಿನ ಕಮಲ ಪಯಣ ಸುಗಮವೇ !
ಬಿಜೆಪಿ ಸೇರ್ಪಡೆಗೊಂಡ ಶಾಸಕರ ಪಟ್ಟಿ:
ಎಚ್. ವಿಶ್ವನಾಥ್(ಹುಣಸೂರು), ಮಹೇಶ್ ಕುಮಟಳ್ಳಿ(ಅಥಣಿ), ರಮೇಶ್ ಜಾರಕಿಹೊಳಿ(ಗೋಕಾಕ್), ಆರ್. ಶಂಕರ್ (ರಾಣೆಬೆನ್ನೂರು), ಪ್ರತಾಪ್ ಗೌಡ ಪಾಟೀಲ್(ಮಸ್ಕಿ), ಬಿ.ಸಿ.ಪಾಟೀಲ್(ಹಿರೇಕೆರೂರು), ಶಿವರಾಂ ಹೆಬ್ಬಾರ್(ಯಲ್ಲಾಪುರ), ಆನಂದ್ ಸಿಂಗ್(ವಿಜಯನಗರ), ಕೆ.ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ಬೈರತಿ ಬಸವರಾಜ(ಕೆ.ಆರ್.ಪುರ), ಮುನಿರತ್ನ(ರಾಜರಾಜೇಶ್ವರಿ), ಎಂ.ಟಿ.ಬಿ ನಾಗರಾಜ್(ಹೊಸಕೋಟೆ), ಕೆ.ಸಿ.ನಾರಾಯಣ ಗೌಡ(ಕೆ.ಆರ್.ಪೇಟೆ), ಶ್ರೀಮಂತ ಪಾಟೀಲ(ಕಾಗಾವಾಡ), ಡಾ.ಸುಧಾಕರ್ ಕೆ(ಚಿಕ್ಕಬಳ್ಳಾಪುರ) ಹಾಗೂ ಎಸ್ ಟಿ ಸೋಮಶೇಖರ್(ಯಶವಂತಪುರ) ಬಿಜೆಪಿ ಸೇರ್ಪಡೆಗೊಂಡ ಅನರ್ಹ ಶಾಸಕರು.
'ಅನರ್ಹತೆ' ಕುರಿತಾಗಿ ಸುಪ್ರೀಂ ತೀರ್ಪು; ಅನರ್ಹ ಶಾಸಕರ ಜೊತೆ ಸಿಎಂ ಗೌಪ್ಯ ಮಾತುಕತೆ
ಸುಪ್ರೀಂ ಕೋರ್ಟ್ನಲ್ಲಿ ಗೆದ್ದ ಅನರ್ಹರಿಗೆ ಜನತಾ ನ್ಯಾಯಾಲಯದಲ್ಲಿ ಅಗ್ನಿಪರೀಕ್ಷೆ
ಶಿವಾಜಿನಗರದ ಅನರ್ಹ ಶಾಸಕ ರೋಷನ್ ಬೇಗ್ ಅವರನ್ನು ಬಿಟ್ಟು ಮಿಕ್ಕ ಎಲ್ಲಾ 16 ಅನರ್ಹ ಶಾಸಕರು ಬಿಜೆಪಿ ಸೇರಿಕೊಂಡಿದ್ದು, ಸಂಜೆ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಯಾಗುವ ಸಾಧ್ಯತೆಯಿದೆ. ಹುಣಸೂರು ಕ್ಷೇತ್ರದಿಂದ ಎಚ್. ವಿಶ್ವನಾಥ್ ಅವರು ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಇರುವ ಕಾರಣ ಅವರನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಕ್ಷೇತ್ರಗಳಿಗೂ ಅನರ್ಹ ಶಾಸಕರೇ ಅಭ್ಯರ್ಥಿಗಳಾಗಲಿದ್ದಾರೆ. ಹೀಗಾಗಿ ಹುಣಸೂರು ಕ್ಷೇತ್ರದಿಂದ ಯಾರನ್ನು ಬಿಜೆಪಿ ಆಯ್ಕೆ ಮಾಡಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.
ಅನರ್ಹರಿಗೆ ಸಿಕ್ತು ‘ಸುಪ್ರೀಂ’ ರಿಲ್ಯಾಕ್ಸ್ : ಮುಂದಿನ ಕಮಲ ಪಯಣ ಸುಗಮವೇ !
ಬಿಜೆಪಿ ಸೇರ್ಪಡೆಗೊಂಡ ಶಾಸಕರ ಪಟ್ಟಿ:
ಎಚ್. ವಿಶ್ವನಾಥ್(ಹುಣಸೂರು), ಮಹೇಶ್ ಕುಮಟಳ್ಳಿ(ಅಥಣಿ), ರಮೇಶ್ ಜಾರಕಿಹೊಳಿ(ಗೋಕಾಕ್), ಆರ್. ಶಂಕರ್ (ರಾಣೆಬೆನ್ನೂರು), ಪ್ರತಾಪ್ ಗೌಡ ಪಾಟೀಲ್(ಮಸ್ಕಿ), ಬಿ.ಸಿ.ಪಾಟೀಲ್(ಹಿರೇಕೆರೂರು), ಶಿವರಾಂ ಹೆಬ್ಬಾರ್(ಯಲ್ಲಾಪುರ), ಆನಂದ್ ಸಿಂಗ್(ವಿಜಯನಗರ), ಕೆ.ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ಬೈರತಿ ಬಸವರಾಜ(ಕೆ.ಆರ್.ಪುರ), ಮುನಿರತ್ನ(ರಾಜರಾಜೇಶ್ವರಿ), ಎಂ.ಟಿ.ಬಿ ನಾಗರಾಜ್(ಹೊಸಕೋಟೆ), ಕೆ.ಸಿ.ನಾರಾಯಣ ಗೌಡ(ಕೆ.ಆರ್.ಪೇಟೆ), ಶ್ರೀಮಂತ ಪಾಟೀಲ(ಕಾಗಾವಾಡ), ಡಾ.ಸುಧಾಕರ್ ಕೆ(ಚಿಕ್ಕಬಳ್ಳಾಪುರ) ಹಾಗೂ ಎಸ್ ಟಿ ಸೋಮಶೇಖರ್(ಯಶವಂತಪುರ) ಬಿಜೆಪಿ ಸೇರ್ಪಡೆಗೊಂಡ ಅನರ್ಹ ಶಾಸಕರು.