ಆ್ಯಪ್ನಗರ

25 ಸಾವಿರ ದಾಟಿದ ಕೊರೊನಾ: ಸಮುದಾಯ ಹಂತಕ್ಕೆ ಹರಡಿದ ಸೋಂಕು?

ರಾಜ್ಯದಲ್ಲಿ ಕೊರೊನಾ ಸೋಂಕು ಸಮುದಾಯ ಹಂತ ತಲುಪಿದ ಎಲ್ಲ ಸೂಚನೆಗಳೂ ಬಂದಾಗಿದೆ. ಸೋಮವಾರ ಕೂಡ 1843 ಕೊರೊನಾ ಪ್ರಕರಣಗಳು ದೃಢವಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 25317ಕ್ಕೆ ಏರಿಕೆಯಾಗಿದೆ.

Vijaya Karnataka Web 6 Jul 2020, 9:34 pm
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಸಮುದಾಯ ಹಂತ ತಲುಪಿದ ಎಲ್ಲ ಸೂಚನೆಗಳೂ ಬಂದಾಗಿದೆ. ಈಗಾಗಲೇ ಕಂದಾಯ ಸಚಿವ ಆರ್‌. ಅಶೋಕ್‌ ಅವರು ರಾಜ್ಯದಲ್ಲಿ ಕೊರೊನಾ ಸೋಂಕು ಸದ್ಯಕ್ಕೆ ನಿಯಂತ್ರಣಕ್ಕೆ ಬರುವುದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸೋಂಕಿನ ಅಪಾಯದ ಮಟ್ಟವನ್ನು ತಿಳಿಸಿದ್ದಾರೆ.
Vijaya Karnataka Web corona


ರಾಜ್ಯದಲ್ಲಿ ಸೋಮವಾರ ಕೂಡ 1843 ಕೊರೊನಾ ಪ್ರಕರಣಗಳು ದೃಢವಾಗಿವೆ. ಕಳೆದ ಮೂರು ದಿನಗಳಿಂದಲೂ ಕೊರೊನಾ ಸೋಂಕು 2 ಸಾವಿರದ ಗಡಿ ತಲುಪುತ್ತಿದೆ. ವಾರದಿಂದೀಚೆಗೆ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ.

ಸೊಮವಾರ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿದಂತಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 25317ಕ್ಕೆ ಏರಿಕೆಯಾಗಿದೆ. ಇದಲ್ಲದೆ ಇಂದು ಒಂದೇ ದಿನ 30 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ಸೋಂಕಿಗೆ ಮೃತಪಟ್ಟವರ ಸಂಖ್ಯೆ 401ಕ್ಕೆ ಏರಿಕೆಯಾಗಿದೆ. 279 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೂ ಕೊರೊನಾ ಪಾಸಿಟೀವ್‌!

ಸೋಮವಾರ 680 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 10527 ಮಂದಿ ಸಂಪೂರ್ಣ ಗುಣವಾಗಿದ್ದು, ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಆಗಿದ್ದಾರೆ. ಪ್ರಸ್ತುತ 14385 ಸಕ್ರಿಯ ಪ್ರಕರಣಗಳಿವೆ.

ಕೊರೊನಾ ನಿಯಂತ್ರಣಕ್ಕೆ ಕೊಬ್ಬರಿ ಎಣ್ಣೆ ಸಹಾಯಕವೇ? ವೈದ್ಯಕೀಯ ಮ್ಯಾಗಜಿನ್‌ ವರದಿ ಇದು!

ಬೆಂಗಳೂರಲ್ಲಿ 10 ಸಾವಿರ ಗಡಿ ದಾಟಿದ ಸೋಂಕು:
ಬೆಂಗಳೂರು ನಗರ ಒಂದರಲ್ಲೇ ಸೋಮವಾರ 981 ಸೋಂಕುಗಳು ದೃಢವಾಗಿದ್ದು, ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10 ಸಾವಿರ ದಾಟಿದೆ. ಒಟ್ಟು ಸೋಂಕಿತರ ಸಂಖ್ಯೆ 10561ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕು ಅಪಾಯದ ಮಟ್ಟ ತಲುಪಿದೆ. ಇದುವರೆಗೆ ನಗರದಲ್ಲಿ ಒಟ್ಟು 155 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಬಳ್ಳಾರಿಯಲ್ಲಿ 99, ಉತ್ತರ ಕನ್ನಡದಲ್ಲಿ 81, ಬೆಂಗಳೂರು ಗ್ರಾಮಾಂತರದಲ್ಲಿ 68, ಧಾರವಾಡದಲ್ಲಿ 56, ಕಲಬುರಗಿಯಲ್ಲಿ53, ಹಾಸನದಲ್ಲಿ 49, ಮೈಸೂರಿನಲ್ಲಿ 45, ಬೀದರ್‌ನಲ್ಲಿ 44, ಉಡುಪಿಯಲ್ಲಿ 40, ಮಂಡ್ಯದಲ್ಲಿ39, ವಿಜಯಪುರದಲ್ಲಿ 36, ಯಾದಗಿರಿಯಲ್ಲಿ 35, ದಕ್ಷಿಣ ಕನ್ನಡದಲ್ಲಿ 34, ಬಾಗಲಕೋಟದಲ್ಲಿ 33, ತುಮಕೂರಿನಲ್ಲಿ 31, ಶಿವಮೊಗ್ಗದಲ್ಲಿ 24, ಗದಗದಲ್ಲಿ 18, ಚಾಮರಾಜನಗರದಲ್ಲಿ 12, ರಾಮನಗರದಲ್ಲಿ 11, ಕೋಲಾರದಲ್ಲಿ 10 ಪ್ರಕರಣ ವರದಿಯಾಗಿದೆ.

ವಿವಿಧೆಡೆ ಸಾವು:
ಬೆಂಗಳೂರು ನಗರದಲ್ಲಿ 10 ರೋಗಿಗಳು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 155 ಕ್ಕೇರಿದೆ. ಬೀದರ್‌ನಲ್ಲಿ 8, ಮೈಸೂರಿನಲ್ಲಿ 3, ದಕ್ಷಿಣ ಕನ್ನಡದಲ್ಲಿ 2, ದಾವಣಗೆರೆ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ಬಾಗಲಕೋಟ, ಹಾಸನ, ಕೊಡಗು ಜಿಲ್ಲೆಯಲ್ಲಿ ತಲಾ ಒಂದು ಮರಣ ಪ್ರಕರಣ ವರದಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ