ಆ್ಯಪ್ನಗರ

2019 ನಮ್ಮದೆ, ಅಂದಿಗಿಂತಲೂ ಹೆಚ್ಚು ಸ್ಥಾನ ಗೆಲ್ಲುವೆವು: ಪ್ರಧಾನಿ ಮೋದಿ ಸಂದರ್ಶನ

ಯಾವ 'ಮಹಾಮೈತ್ರಿ ಕೂಟ'ಗಳ ಭಯವೂ ನಮಗಿಲ್ಲ

Vijaya Karnataka 12 Aug 2018, 4:13 pm

ಪ್ರತಿಪಕ್ಷಗಳ ಮಹಾಮೈತ್ರಿ ಜನರ ಮೈತ್ರಿ ಗಳಿಸಲಾರದು: ಮೋದಿ

ಹೊಸದಿಲ್ಲಿ: ಜನ ನಮ್ಮೊಂದಿಗಿದ್ದಾರೆ. ಹಾಗಾಗಿ ಯಾವ 'ಮಹಾಮೈತ್ರಿ ಕೂಟ'ಗಳ ಭಯವೂ ನಮಗಿಲ್ಲ. 2019 ನಮ್ಮದೆ. ಹಿಂದಿಗಿಂತಲೂ ಹೆಚ್ಚು ಸ್ಥಾನಗಳೊಂದಿಗೆ ಗೆದ್ದು ಬರುತ್ತೇವೆ: ಇದು ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮವಿಶ್ವಾಸದ ನುಡಿ. 'ವಿಜಯ ಕರ್ನಾಟಕ' ಬಳಗಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು 2019ರ ಚುನಾವಣೆ, ಮಹಾಮೈತ್ರಿ, ಆರ್ಥಿಕ ಸುಧಾರಣೆ, ರಾಷ್ಟ್ರೀಯ ಪೌರತ್ವ ವರದಿ, ಉದ್ಯೋಗ ಕುಸಿತ ಆರೋಪ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
Vijaya Karnataka Web PM Modi new


ನಾನೊಬ್ಬನೇ ಪ್ರಚಾರಕನಲ್ಲ
ಕಳೆದ ಬಾರಿ ನಾನು ವಿಸ್ತೃತ ಪ್ರಚಾರ ನಡೆಸಿದ್ದೆ. ಈ ಬಾರಿ ನಾನೊಬ್ಬನೇ ಅಲ್ಲ, ಉಜ್ವಲ ಯೋಜನೆಯಲ್ಲಿ ಗ್ಯಾಸ್‌ ಸಂಪರ್ಕ ಪಡೆದು ಧೂಮದಿಂದ ಮುಕ್ತಿ ಹೊಂದಿದ ಮನೆ, 70 ವರ್ಷಗಳ ಬಳಿಕ ವಿದ್ಯುತ್‌ ಪಡೆದ ಹಳ್ಳಿ, ಜನಧನ್‌ ಅಕೌಂಟ್‌ ಪಡೆದ ಪ್ರತಿಯೊಬ್ಬ ವ್ಯಕ್ತಿಯೂ ಮೋದಿ ಪರ ಪ್ರಚಾರಕನೆ.

ಅಭಿವೃದ್ಧಿಯೇ ಪ್ರಚಾರ ವೇದಿಕೆ
ಅಭಿವೃದ್ಧಿ, ವೇಗದ ಅಭಿವೃದ್ಧಿ, ಸರ್ವರ ಅಭಿವೃದ್ಧಿಯೇ ನನ್ನ ಪ್ರಚಾರದ ವೇದಿಕೆ. ಅದನ್ನೇ ಮುಂದಿಟ್ಟು ಮತ ಕೇಳುತ್ತೇವೆ. 2019ರ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನ ಗೆಲ್ಲುವ ಭರವಸೆ ನನಗಿದೆ. ಜನ ನಮ್ಮೊಂದಿಗಿದ್ದಾರೆ. ಹಾಗಾಗಿ ನನಗೆ ಯಾವ ಭಯವೂ ಇಲ್ಲ.

ಮೋದಿ ಸಂದರ್ಶನ


ಮಹಾಘಟಬಂಧನ್‌ ವಿಫಲ
ಮಹಾ ಘಟಬಂಧನ್‌ ಎನ್ನುವುದು ಸಿದ್ಧಾಂತರಹಿತ, ಹತಾಶ ಗುಂಪುಗಳ ರಾಜಕೀಯ ಸಾಹಸ. 1979, 1990, 1996ರಲ್ಲಿ ವಿಫಲವಾದ ಪ್ರಯೋಗ. ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯವಾಗಿರುವ ಜನ ಇವರಿಗೆ ವೋಟು ಹಾಕಲಾರರು. ಅವರಿಗೆ ಹಿಂದೆಯೇ ಸಮ್ಮಿಶ್ರ ಸರಕಾರಗಳ ಕಹಿ ಅನುಭವ ಆಗಿದೆ.

ಜಾಬ್‌ ಕುಸಿತ ಪೊಲಿಟಿಕಲ್‌ ಗಿಮಿಕ್‌
ಹೊಸ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪ ರಾಜಕೀಯ ಗಿಮಿಕ್‌. ಪಶ್ಚಿಮ ಬಂಗಾಳ ಸರಕಾರ 68 ಲಕ್ಷ , ಕರ್ನಾಟಕ ಸರಕಾರ 53 ಲಕ್ಷ ಉದ್ಯೋಗ ಸೃಷ್ಟಿ ಮಾಡಿದ್ದಾಗಿ ಹೇಳಿಕೊಳ್ಳುತ್ತಿದೆಯಲ್ಲಾ... ಇವೆಲ್ಲ ದೇಶದಲ್ಲಿ ಹುಟ್ಟಿಕೊಂಡ ಉದ್ಯೋಗಗಳಲ್ವಾ?





ಎನ್‌ಆರ್‌ಸಿ: ಕಾಂಗ್ರೆಸ್‌ಗೆ ಧೈರ್ಯವಿರಲಿಲ್ಲ
ಅಕ್ರಮ ವಲಸಿಗರನ್ನು ತಡೆಯುವುದಕ್ಕೆ ಇಂದಿರಾ ಗಾಂಧಿ (1972) ಮತ್ತು ರಾಜೀವ್‌ ಗಾಂಧಿ (1985) ಒಪ್ಪಂದ ಮಾಡಿಕೊಂಡಿದ್ದರು. ಕಾಂಗ್ರೆಸ್‌ಗೆ ಅದನ್ನು ಜಾರಿಗೊಳಿಸುವ ಇಚ್ಛಾ ಶಕ್ತಿ ಮತ್ತು ಧೈರ್ಯ ಇರಲಿಲ್ಲ. ನಾವು ದೇಶಕ್ಕೆ ಕೊಟ್ಟ ಭರವಸೆ, ಸುಪ್ರೀಂಕೋರ್ಟ್‌ ಆದೇಶ ಪಾಲಿಸಿದ್ದೇವೆ.

  • ಡಿಜಿಟಲ್‌ ಜಗತ್ತು ಮತ್ತು ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯನ್ನು ನಿಯಂತ್ರಿಸಲು ಸರಕಾರ ಕಠಿಣ ಕ್ರಮ
  • ಯಾವುದೇ ಕಾರಣವಿರಲಿ, ಯಾವ ವ್ಯಕ್ತಿಯೇ ಇರಲಿ, ಜನರೆಲ್ಲ ಸೇರಿ ಒಬ್ಬ ವ್ಯಕ್ತಿಯನ್ನು ಕೊಲ್ಲುವುದು ಪಕ್ಕಾ ಅಪರಾಧ.
  • ರಫೇಲ್‌ ಡೀಲ್‌ ಪ್ರಾಮಾಣಿಕ, ಪಾರದರ್ಶಕ. ಉಳಿದುದೆಲ್ಲವೂ ರಾಷ್ಟ್ರೀಯ ಹಿತಾಸಕ್ತಿ ಕಡೆಗಣಿಸುವವರ ಸುಳ್ಳು ಪ್ರಚಾರ.
  • ನೀರವ್‌ ಮೋದಿ, ಮಲ್ಯ ಓಡಿ ಹೋಗಿದ್ದು ನಮ್ಮ ಸಹಕಾರದಿಂದಲ್ಲ, ನಾವು ತೆಗೆದುಕೊಂಡ ಕಠಿಣ ಕ್ರಮದ ಭಯದಿಂದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ