ಆ್ಯಪ್ನಗರ

ಕಾಮಗಾರಿಗೆ ಅಡ್ಡಿಯಾಗಿದ್ದ ಭೂಸ್ವಾಧೀನ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್, ರಾಜ್ಯದಲ್ಲಿ 218 ಸೇತುವೆ ನಿರ್ಮಾಣ ಸರಾಗ!

ರಾಜ್ಯದ ಪ್ರಮುಖ 42 ಹಾಗೂ ಮಧ್ಯಮ ಮತ್ತು ಸಣ್ಣ ಪ್ರಮಾಣದ 176 ಸೇತುವೆಗಳನ್ನು ಒಳಗೊಂಡಂತೆ ಒಟ್ಟು 218 ಸೇತುವೆ ಮತ್ತು ಕೂಡು ರಸ್ತೆಗಳ ನಿರ್ಮಾಣದ ಯೋಜನೆ ಇದಾಗಿದೆ. ಮೇಲ್ಸೇತುವೆ ಮತ್ತು ಕೂಡು ರಸ್ತೆಗಳ ನಿರ್ಮಾಣವನ್ನು ಲೋಕೋಪಯೋಗಿ ಇಲಾಖೆ ನಡೆಸುತ್ತದೆ. ಹೀಗಾಗಿ, ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಇಲಾಖೆಗೆ 'ಹೆದ್ದಾರಿ ಪ್ರಾಧಿಕಾರ' ಭೂಮಿ ಹಸ್ತಾಂತರಿಸಬೇಕು.

Vijaya Karnataka Web 14 Mar 2021, 11:54 am

ಹೈಲೈಟ್ಸ್‌:

  • ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸೇತುವೆಗಳ ನಿರ್ಮಾಣ ಯೋಜನೆಗೆ ಸರಕಾರ ಮತ್ತೆ ಚಾಲನೆ
  • ರಾಜ್ಯದಲ್ಲಿ 218 ಸೇತುವೆ ನಿರ್ಮಾಣ ಸಂಬಂಧ ಭೂಸ್ವಾಧೀನ ನಡೆಸಲು ರಾಜ್ಯ ಸರಕಾರ ಆದೇಶ
  • ಕರ್ನಾಟಕ ಹೆದ್ದಾರಿ ಕಾಯಿದೆ- 1964(4) ಅನ್ವಯ ಕೆಆರ್‌ಡಿಸಿಎಲ್‌ಗೆ ರಾಜ್ಯ ಸರಕಾರ ಅನುಮತಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶಿವಾನಂದ ಹಿರೇಮಠ ಬೆಂಗಳೂರು
ಬೆಂಗಳೂರು: ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸೇತುವೆಗಳ ನಿರ್ಮಾಣ ಯೋಜನೆಗೆ ರಾಜ್ಯ ಸರಕಾರ ಮತ್ತೆ ಚಾಲನೆ ನೀಡಿದೆ.
1534.01 ಕೋಟಿ ರೂ. ವೆಚ್ಚದ 218 ಸೇತುವೆಗಳ ನಿರ್ಮಾಣದ ಕಾರ್ಯಕ್ಕೆ 2017ರಲ್ಲಿಯೇ ರಾಜ್ಯ ಸರಕಾರ ಅನುಮೋದನೆ ನೀಡಿತ್ತು. ಆಡಳಿತಾತ್ಮಕ ಮತ್ತು ತಾಂತ್ರಿಕ ಅಡಚಣೆ ಹಿನ್ನೆಲೆಯಲ್ಲಿ ಈ ಯೋಜನೆ ಅನುಷ್ಠಾನಗೊಂಡಿರಲಿಲ್ಲ. ನೂತನ ಸೇತುವೆಗಳ ನಿರ್ಮಾಣ, ಅತಿವೃಷ್ಟಿ ಹಾಗೂ ಇನ್ನಿತರೆ ಕಾರಣಗಳಿಂದ ಹಾನಿಗೊಳಗಾದ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಶರಾವತಿ, ಅಘನಾಶಿನಿ, ಭೀಮಾ ಸೇರಿದಂತೆ ರಾಜ್ಯದ ಪ್ರಮುಖ ನದಿಗಳ ಸೇತುವೆಗಳ ಪುನರ್‌ ನಿರ್ಮಾಣಕ್ಕೆ ರಾಜ್ಯ ಸರಕಾರ ಉದ್ದೇಶಿಸಿತ್ತು.

ಸಾರಿಗೆ ಸಂಪರ್ಕ ತ್ವರಿತಗೊಳಿಸುವ ಮೂಲ ಉದ್ದೇಶ ಸರಕಾರದ್ದಾಗಿತ್ತು. ಆದರೆ, ಯೋಜನೆ ಅನುಷ್ಠಾನಗೊಳ್ಳುವ ಸಂದರ್ಭದಲ್ಲಿ ಸೇತುವೆ ನಿರ್ಮಾಣದ ಸ್ಥಳದಲ್ಲಿ ಭೂಮಾಲೀಕರ ಅಸಹಕಾರದಿಂದ ಆಡಳಿತಾತ್ಮಕ ತೊಂದರೆ ಎದುರಾಗಿತ್ತು. ಈ ಹಿನ್ನೆಲೆ ತಾತ್ಕಾಲಿಕವಾಗಿ ರಾಜ್ಯ ಸರಕಾರ ಯೋಜನೆಗೆ ತಡೆ ನೀಡಿತ್ತು. ಅಗತ್ಯವಿರುವ ಭೂ ಸ್ವಾಧೀನಕ್ಕಾಗಿ ಪ್ರಕ್ರಿಯೆ ನಡೆಸದೇ ಯೋಜನೆ ಜಾರಿಗೆ ಸರಕಾರ ಮುಂದಾಗಿದ್ದರಿಂದ ಸ್ಥಳೀಯ ಭೂಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಮೂರು ವರ್ಷಗಳ ನಂತರ ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರಕಾರ ಮುಂದಾಗಿದ್ದು, ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತವನ್ನು (ಕೆಆರ್‌ಡಿಸಿಎಲ್‌) ತಾತ್ಕಾಲಿಕವಾಗಿ 'ಹೆದ್ದಾರಿ ಪ್ರಾಧಿಕಾರ' ಎಂದು ನೇಮಿಸಿ ಭೂಸ್ವಾಧೀನ ನಡೆಸಲು ರಾಜ್ಯ ಸರಕಾರ ತನ್ನ ಆದೇಶ ಪತ್ರದಲ್ಲಿ ತಿಳಿಸಿದೆ. ಕರ್ನಾಟಕ ಹೆದ್ದಾರಿ ಕಾಯಿದೆ- 1964(4) ಅನ್ವಯ ಕೆಆರ್‌ಡಿಸಿಎಲ್‌ಗೆ ರಾಜ್ಯ ಸರಕಾರ ಅನುಮತಿ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ