ಆ್ಯಪ್ನಗರ

23 ಹಿರಿಯ ಕೆಎಎಸ್‌ ಅಧಿಕಾರಿಗಳು ಐಎಎಸ್‌ಗೆ ಪ್ರಮೋಷನ್‌, ಡಿಒಪಿಟಿ ಆದೇಶ

ಕೇಂದ್ರ ಆಡಳಿತ ಮತ್ತು ತರಬೇತಿ ಸಂಸ್ಥೆಯು ರಾಜ್ಯದ 23 ಹಿರಿಯ ಕೆಎಎಸ್‌ ಅಧಿಕಾರಿಗಳಿಗೆ ಐಎಎಸ್‌ಗೆ ದರ್ಜೆಗೆ ಪ್ರಮೋಷನ್ ನೀಡಿದೆ. ಐಎಎಸ್‌ಗೆ ಬಡ್ತಿ ಪಡೆದವರಲ್ಲಿ 2006, 2008 ಹಾಗೂ 2010ರಲ್ಲಿ ರಾಜ್ಯದಲ್ಲಿ ಗೆಜೆಟೆಡ್‌ ಪ್ರೊಬೆಷನರ್ಸ್‌ ಆಗಿ ಆಯ್ಕೆಯಾಗಿದ್ದ ಅಧಿಕಾರಿಗಳು ಸೇರಿದ್ದಾರೆ.

Vijaya Karnataka Web 19 Jan 2021, 7:04 am
ಬೆಂಗಳೂರು: ರಾಜ್ಯದ 23 ಹಿರಿಯ ಕೆಎಎಸ್‌ ಅಧಿಕಾರಿಗಳಿಗೆ ಐಎಎಸ್‌ ದರ್ಜೆಗೆ ಬಡ್ತಿ ನೀಡಿರುವ ಕೇಂದ್ರ ಆಡಳಿತ ಮತ್ತು ತರಬೇತಿ ಸಂಸ್ಥೆ (ಡಿಒಪಿಟಿ) ಸೋಮವಾರ ಆದೇಶ ಹೊರಡಿಸಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಐಎಎಸ್‌ಗೆ ಬಡ್ತಿ ಪಡೆದವರಲ್ಲಿ 2006, 2008 ಹಾಗೂ 2010ರಲ್ಲಿ ರಾಜ್ಯದಲ್ಲಿ ಗೆಜೆಟೆಡ್‌ ಪ್ರೊಬೆಷನರ್ಸ್‌ ಆಗಿ ಆಯ್ಕೆಯಾಗಿದ್ದ ಅಧಿಕಾರಿಗಳು ಸೇರಿದ್ದಾರೆ. ಜತೆಗೆ ಇದು 2016, 2017, 2018 ಹಾಗೂ 2019ನೇ ಸಾಲಿಗೆ ಸಂಬಂಧಿಸಿದ ಪ್ರಮೋಷನ್‌ ಆಗಿದೆ. ಈ ಸಂಬಂಧ ಕಳೆದ ಡಿಸೆಂಬರ್‌ 29ರಂದು ಡಿಒಪಿಟಿಯಿಂದ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಾಗಿತ್ತು.
ಬಿಜೆಪಿ ಸೇರಿದ ಮೋದಿ ಆಪ್ತ ಬಳಗದ ಮಾಜಿ ಐಎಎಸ್ ಅಧಿಕಾರಿ: 'ದೊಡ್ಡ ಹುದ್ದೆ'ಯ ನಿರೀಕ್ಷೆ!

ಐಎಎಸ್‌ಗೆ ಬಡ್ತಿ ಪಡೆದವರು

2016ನೇ ಬ್ಯಾಚ್‌
ಜಹೀರಾ ನಸೀಮ್‌, ವಿಜಯ ಮಹಾಂತೇಶ್‌ ಬಿ. ದಾನಮ್ಮನವರ್‌, ಗೋವಿಂದ ರೆಡ್ಡಿ, ಪ್ರಭುಲಿಂಗ ಕವಳಿಕಟ್ಟಿ, ಎಂ.ಎಲ್‌.ವೈಶಾಲಿ, ಎಸ್‌.ರಮ್ಯಾ, ಎಸ್‌.ಎನ್‌.ಬಾಲಚಂದ್ರ, ಡಿ.ಭಾರತಿ, ಎ.ಎಂ.ಯೋಗೇಶ್‌, ಪಿ.ಆರ್‌.ಶಿವಪ್ರಸಾದ್‌.
ಕೆಪಿಎಸ್‌ಸಿ ಬರ್ಖಾಸ್ತ್ ಸೂಕ್ತ: ಕರ್ನಾಟಕ ಲೋಕಸೇವಾ ಆಯೋಗದ ಅಕ್ರಮಕ್ಕೆ ಹೈಕೋರ್ಟ್‌ ಚಾಟಿ!

2017ನೇ ಬ್ಯಾಚ್‌
ಜಿ.ಎಂ.ಗಂಗಾಧರಸ್ವಾಮಿ, ಕೆ.ವಿದ್ಯಾಕುಮಾರಿ.

2018ನೇ ಬ್ಯಾಚ್‌
ಕೆ.ನಾಗೇಂದ್ರ ಪ್ರಸಾದ್‌, ಕುಮಾರ್‌, ಟಿ.ವೆಂಕಟೇಶ್‌.

2019ನೇ ಬ್ಯಾಚ್‌
ಕೆ.ಎಂ.ಗಾಯತ್ರಿ, ಬಿ.ಆರ್‌.ಪೂರ್ಣಿಮಾ, ಜಯವಿಭವಸ್ವಾಮಿ, ಸಂಗಪ್ಪ, ಸುರೇಶ್‌ ಬಿ. ಇಟ್ನಾಳ್‌, ಜಿ.ಪ್ರಭು, ಡಾ.ಕೆ.ಎನ್‌.ಅನುರಾಧ, ಎನ್‌.ಎಂ.ನಾಗರಾಜ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ