ಆ್ಯಪ್ನಗರ

ಸಮಯಕ್ಕೆ ಸರಿಯಾಗಿ ವೆಂಟಿಲೇಟರ್‌ ಸಿಗದೆ, ಇಬ್ಬರು ಪೊಲೀಸರು ಸೇರಿ ಮೂವರು ಸಾವು!

ಒಬ್ಬ ಕಾನ್ಸ್‌ಟೆಬಲ್‌, ನಿವೃತ್ತ ಎಸ್‌ಐ ಹಾಗೂ ಆಭರಣ ವರ್ತಕರೊಬ್ಬರು ಸಮಯಕ್ಕೆ ಸರಿಯಾಗಿ ವೆಂಟಿಲೇಟರ್‌‌ ಸಿಗದೆ ಕೊನೆಯುಸಿರೆಳೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Vijaya Karnataka Web 4 Jul 2020, 8:40 am
ಬೆಂಗಳೂರು: ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳು ಸಿಗದೆ ಬೆಂಗಳೂರಿನಲ್ಲಿ ಒಬ್ಬ ಕಾನ್ಸ್‌ಟೆಬಲ್‌, ನಿವೃತ್ತ ಎಸ್‌ಐ ಹಾಗೂ ಆಭರಣ ವರ್ತಕ ಕೊನೆಯುಸಿರೆಳೆದಿದ್ದಾರೆ. ಲಿವರ್‌ ಸಮಸ್ಯೆಯಿಂದ ಬಳಲುತ್ತಿದ್ದ ವಿಜಯನಗರ ಠಾಣೆಯ ಪೇದೆ ರವಿಕುಮಾರ್‌(38) ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಸಿಗದೆ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ರವಿಕುಮಾರ್‌ ಗುರುವಾರ (ಜು.2ರಂದು) ಏಕಾಏಕಿ ಸುಸ್ತಾಗಿ ಕುಸಿದು ಬಿದ್ದಿದ್ದಾರೆ.
Vijaya Karnataka Web jpg (75)


ಅವರನ್ನು ಸಿಬ್ಬಂದಿ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಹೋದಾಗ ವೆಂಟಿಲೇಟರ್‌ ಲಭ್ಯವಿಲ್ಲ ಎಂದು ಐದಾರು ಆಸ್ಪತ್ರೆಗಳಲ್ಲಿ ಸಬೂಬು ಹೇಳಿದ್ದಾರೆ. ಹೀಗಾಗಿ, ವಿವಿಧ ಆಸ್ಪತ್ರೆಗಳಿಗೆ ರಾತ್ರಿಯಿಡೀ ಸುತ್ತಾಡಿದ ರವಿಕುಮಾರ್‌, ಶುಕ್ರವಾರ ಆಸ್ಪತ್ರೆಗೆ ಹೋದರಾಯಿತು ಎಂದು ಮನೆಗೆ ಮರಳಿದ್ದರು. ಶುಕ್ರವಾರ ಬೆಳಗ್ಗೆ ಮನೆಯಲ್ಲೇ ಕೊನೆಯುಸಿರೆಳೆದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ನಿವೃತ್ತ

ವೆಂಟಿಲೇಟರ್‌ ಸಿಗದೆ ಎಸ್‌ಐ ಸಾವು!
ಜು.1ರಂದು ರಾತ್ರಿ ಜ್ವರ ಕಾಣಿಸಿಕೊಂಡಿದ್ದ 40 ವರ್ಷ ಸಬ್‌ ಇನ್ಸ್‌ಪೆಕ್ಟರ್‌ ಆಗಿ ನಿವೃತ್ತರಾದ ಪಂಚಾಕ್ಷರಿ (67) ಎಂಬುವರು ವೆಂಟಿಲೇಟರ್‌ ಕೊರತೆಯಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿಅಸುನೀಗಿದ್ದಾರೆ. ಕ್ಲಿನಿಕ್‌ಗೆ ತೆರಳಿ ಔಷಧ ಪಡೆದರೂ ಜ್ವರ ಕಮ್ಮಿಯಾಗದೇ ಉಸಿರಾಟದ ಸಮಸ್ಯೆಯಾಗುತ್ತಿತ್ತು. ಹೀಗಾಗಿ, ಕುಟುಂಬದವರು ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕರೆತಂದಿದ್ದರು.

ವಿಧಾನಸೌಧಕ್ಕೆ ಸಾರ್ವಜನಿಕರಿಗೆ 1 ತಾಸು ಮಾತ್ರ ಪ್ರವೇಶ

ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ನಂತರ ಮೂರ್ನಾಲ್ಕು ಖಾಸಗಿ ಆಸ್ಪತ್ರೆಗಳು ಹಾಗೂ ವಿಕ್ಟೋರಿಯಾ, ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಗೂ ಹೋಗಿದ್ದಾರೆ. ಅಲ್ಲಿಯೂ ವೆಂಟಿಲೇಟರ್‌ ಇರಲಿಲ್ಲ. ಕೊರೊನಾ ವರದಿ 48 ತಾಸಾದರೂ ಬರಲಿಲ್ಲ. ಕೊನೆಗೆ ಗುರುವಾರ ಸಂಜೆ ಆಸ್ಪತ್ರೆಯೊಂದರಲ್ಲಿ ವೆಂಟಿಲೇಟರ್‌ ಇದೆ ಎಂದು ದಾಖಲಿಸಿಕೊಂಡ ತಕ್ಷಣವೇ ನಿಧನರಾದರು ಎಂದು ಪುತ್ರಿ ನೋವಿನಿಂದ ನುಡಿದರು.

ಕಿಮ್ಸ್‌ನಲ್ಲಿ ನಿಮೋನಿಯಾದಿಂದ ಸಾವು!
ವೆಂಟಿಲೇಟರ್‌ ಸಿಗದೆ ಆಭರಣ ವರ್ತಕ ನವರತನ್‌ ಲಾಲ್‌(40) ಎಂಬುವರು ಕಿಮ್ಸ್‌ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ. ಜೂ.27ರಂದು ಜ್ವರ ಮತ್ತು ತೀವ್ರ ಮೈಕೈ ನೋವು ಕಾಣಿಸಿಕೊಂಡಿತ್ತು. ಹತ್ತಿರದ ಫಿವರ್‌ ಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು. ವೆಂಟಿಲೇಟರ್‌ ಇರುವ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಲಾಗಿತ್ತು. ಹೀಗಾಗಿ, ವಿಕ್ಟೋರಿಯಾ ಮತ್ತು ಕೆ.ಸಿ. ಜನರಲ್‌ ಆಸ್ಪತ್ರೆಗೆ ಕರೆದೊಯ್ದಾಗ ವೆಂಟಿಲೇಟರ್‌ ಸಿಗಲಿಲ್ಲ.

ಅಪೋಲೋ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಸುತ್ತಾಡಿ ಅಂತಿಮವಾಗಿ ಕಿಮ್ಸ್‌ಗೆ ತೆರಳಿದ್ದಾರೆ. ಕಿಮ್ಸ್‌ ನಲ್ಲಿ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್‌ ಕುರಿತು ಮೌಖಿಕವಾಗಿ ತಿಳಿಸಲಾಗಿತ್ತು. ಸಣ್ಣ ಗಾತ್ರದ ವೆಂಟಿಲೇಟರ್‌ ಇದೆ ಎಂದು ದಾಖಲಿಸಿಕೊಳ್ಳಲಾಗಿತ್ತು. ಚಿಕಿತ್ಸೆ ಫಲಿಸದೆ ಜು.1ರಂದು ನವರತನ್‌ ನಿಧನರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ