ಆ್ಯಪ್ನಗರ

ಸಂಸತ್‌ ಭವನದ ಮುಂದೆ ಟಿಪ್ಪು ಪ್ರತಿಮೆಗೆ ವಾಟಾಳ್‌ ಒತ್ತಾಯ

Tipu's statue in front of Parliament House: Vatal Nagaraj

Vijaya Karnataka Web 8 Nov 2018, 4:00 am
ರಾಜ್ಯದಲ್ಲಿ ರಜನಿಕಾಂತ್‌ ಅಭಿಯನದ '2.0' ಚಿತ್ರ ಬಿಡುಗಡೆ ವಿರೋಧ
Vijaya Karnataka Web 4
ಸಂಸತ್‌ ಭವನದ ಮುಂದೆ ಟಿಪ್ಪು ಪ್ರತಿಮೆಗೆ ವಾಟಾಳ್‌ ಒತ್ತಾಯ


ಬೆಂಗಳೂರು: ಮಕ್ಕಳನ್ನು ಒತ್ತೆಯಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿ ಯುದ್ಧ ಭೂಮಿಯಲ್ಲೇ ಮರಣ ಹೊಂದಿದ ಟಿಪ್ಪು ಸುಲ್ತಾನ್‌ ಪ್ರತಿಮೆಯನ್ನು ಸಂಸತ್‌ ಭವನದ ಮುಂದೆ ನಿರ್ಮಾಣ ಮಾಡಬೇಕು,'' ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,''ಕೇಂದ್ರ ಸರಕಾರ ಟಿಪ್ಪು ಜಯಂತಿಯನ್ನು ರಾಷ್ಟ್ರೀಯ ಹಬ್ಬವಾಗಿ ಆಚರಣೆ ಮಾಡಬೇಕು,''ಎಂದು ಆಗ್ರಹಿಸಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದ ವಾಟಾಳ್‌ ನಾಗರಾಜ್‌, ''ಸರಕಾರದ ಈ ನಡೆ ಗೌರವ ತರುವಂತದ್ದಲ್ಲ. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲೇ ಜಯಂತಿ ಆಚರಿಸಲಿ,'' ಎಂದು ಒತ್ತಾಯಿಸಿದರು.

ರಜನಿ ಸಿನಿಮಾ ಬಿಡುಗಡೆ ವಿರೋಧ:

ನಟ ರಜನಿಕಾಂತ್‌ ಅಭಿನಯದ '2.0' ಚಲನಚಿತ್ರ ಬಿಡುಗಡೆಗಾಗಿ ಹಲವು ಕನ್ನಡ ಚಿತ್ರಗಳನ್ನು ಎತ್ತಂಗಡಿ ಮಾಡುವ ಹುನ್ನಾರಗಳು ನಡೆಯುತ್ತಿದ್ದರೂ ಚಲನಚಿತ್ರ ವಾಣಿಜ್ಯ ಮಂಡಳಿಯವರು ಕೈಕಟ್ಟಿ ಕುಳಿತಿದ್ದಾರೆ. ಇದನ್ನು ನಾನು ವಿರೋಧಿಸುತ್ತೇನೆ,'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ