ಆ್ಯಪ್ನಗರ

ಮುಗಿದ ಮುಂಗಾರು; ಅರ್ಧರಾಜ್ಯಕ್ಕೆ ಪ್ರವಾಹ, ಇನ್ನರ್ಧ ರಾಜ್ಯದಲ್ಲಿ 46% ಮಳೆ ಕೊರತೆ

ರಾಜ್ಯದ ಅರ್ಧಭಾಗದಲ್ಲಿ ಉತ್ತಮ ಮಳೆಯಾಗಿದೆ , ಆದರೆ ಇನ್ನರ್ಧ ರಾಜ್ಯ ಮಳೆ ಇಲ್ಲದೆ ಕಂಗೆಟ್ಟಿದೆ.

TIMESOFINDIA.COM 23 Sep 2019, 3:26 pm
ಬೆಂಗಳೂರು: ಈ ವರ್ಷ ರಾಜ್ಯ ಭಾರಿ ಮಳೆ ಮತ್ತು ಎಂದೂ ಕಾಣದಂತಹ ಪ್ರವಾಹಕ್ಕೆ ಸಾಕ್ಷಿಯಾಯಿತು. ಅಸಂಖ್ಯಾತ ಪ್ರಾಣಿಗಳು ಸೇರಿದಂತೆ ಹಲವು ಜೀವಗಳು ವರುಣನ ಉಗ್ರ ನರ್ತನಕ್ಕೆ ಬಲಿಯಾದವು. ಅರ್ಧ ರಾಜ್ಯ ಅತಿವೃಷ್ಟಿಯನ್ನು ಕಂಡಿದೆ ನಿಜ. ಆದರೆ ಇನ್ನರ್ಧ ರಾಜ್ಯದಲ್ಲಿ ಅನಾವೃಷ್ಟಿ. ಕರ್ನಾಟಕದ 46% ಭಾಗದಲ್ಲಿ ಸಾಮಾನ್ಯ ಮಳೆಯೂ ಆಗಿಲ್ಲ, ಎಂದು ದಾಖಲೆಗಳು ಜಾಹೀರು ಮಾಡಿವೆ.
Vijaya Karnataka Web Rain 1200


ಈ ತಿಂಗಳ ಅಂತ್ಯದಲ್ಲಿ ನೈರುತ್ಯ ಮುಂಗಾರು ನಿರ್ಗಮಿಸುತ್ತಿದ್ದರೂ ರಾಜ್ಯದ 46% ರಷ್ಟು ಭಾಗದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ, ಎಂದು ಅಂಕಿಅಂಶಗಳು ಬಹಿರಂಗಪಡಿಸಿದ್ದು ನಿಜಕ್ಕೂ ಚಿಂತೆಗೀಡು ಮಾಡುವಂತಹ ವಿಚಾರ.

ಯಾದಗಿರಿ, ವಿಜಯಪುರ, ಬೆಂಗಳೂರು ಗ್ರಾಮೀಣ, ಬಳ್ಳಾರಿ ಮತ್ತು ಕೋಲಾರ ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ.

ರಾಜ್ಯದ ಮೂರು ಹವಾಮಾನ ಉಪವಿಭಾಗಗಳಲ್ಲಿ, ಸಾಮಾನ್ಯಕ್ಕಿಂತ ಕಡಿಮೆ ಮಳೆ ಇರುವ ಜಿಲ್ಲೆಗಳು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿಗೆ ಸೇರಿವೆ. ಮೂರನೇ ಉಪವಿಭಾಗ ಕರಾವಳಿ ಕರ್ನಾಟಕಲ್ಲಿ ಉತ್ತಮ ಮಳೆಯಾಗಿದೆ ಎಂದು, ಬೆಂಗಳೂರಿನ ಹವಾಮಾನ ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಅನಾವೃಷ್ಟಿ ಬಾಧಿಸಿರುವ ಜಿಲ್ಲೆಗಳಲ್ಲಿ ಈಶಾನ್ಯ ಮಾನ್ಸೂನ್ ಪ್ರಭಾವ ಹೇಗಿರಲಿದೆ ಎಂದು ನಾವು ಕಾದು ನೋಡಬೇಕಾಗಿದೆ. ಅಲ್ಪ ಪ್ರಮಾಣದ ಮಳೆಯು ಈಗಾಗಲೇ 14 ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಆದಾಗ್ಯೂ, ಕುಡಿಯುವ ನೀರಿನ ಸಮಸ್ಯೆ ಇಲ್ಲ", ಎಂದು ಅವರು ವಿವರಿಸಿದರು.

ವ್ಯಾಪಕ ಮಳೆ ಮುನ್ಸೂಚನೆ

ಮುಂದಿನ ಕೆಲವು ದಿನಗಳಲ್ಲಿ ಮಲೆನಾಡಿನ ಕೆಲವು ಭಾಗಗಳಲ್ಲಿ, ಕರಾವಳಿಯಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗುವ ನಿರೀಕ್ಷೆಯಿದೆ. ಕೆಲವು ಸ್ಥಳಗಳಲ್ಲಿ ಅದು ಚದುರಿಹೋಗುವ ಸಾಧ್ಯತೆಯಿದ್ದರೆ, ಮತ್ತೆ ಕೆಲವೆಡೆ ಭಾರಿ ಮಳೆ ಸುರಿಯಬಹುದು. ಬೆಳಗಾವಿ, ಮೈಸೂರು, ಹಾವೇರಿ ಮತ್ತು ಧಾರವಾಡಗಳಲ್ಲಿ ಉತ್ತಮ ಮಳೆಯಾಗಬಹುದು.

ಒಟ್ಟಾರೆಯಾಗಿ, ರಾಜ್ಯವು ಇಲ್ಲಿಯವರೆಗೆ ಸಾಮಾನ್ಯ ಮಳೆಗಿಂತ ಹೆಚ್ಚಿನ ಮಳೆಯನ್ನು ಕಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ