ಆ್ಯಪ್ನಗರ

ತಿಂಗಳಂತ್ಯಕ್ಕೆ ಪರಿಷತ್ತಿನ 5 ಸ್ಥಾನ ಖಾಲಿ, ನಾಮನಿರ್ದೇಶನ ಹೊಣೆ ಹೈಕಮಾಂಡ್‌ ಹೆಗಲಿಗೆ

ಐದು ಸ್ಥಾನಗಳ ಪೈಕಿ ಮಾಜಿ ಸಚಿವ ಎಚ್‌ ವಿಶ್ವನಾಥ್‌ ಅವರಿಗೆ ಒಂದು ಸ್ಥಾನ ನೀಡುವಂತೆ ಯಡಿಯೂರಪ್ಪ ಅವರು ವರಿಷ್ಠರ ಬಳಿ ಮನವಿ ಮಾಡುವ ಸಾಧ್ಯತೆ ಇದೆ. ವಿಶ್ವನಾಥ್‌ ಕೂಡ ಸಾಹಿತಿ ಕೋಟಾದಲ್ಲಿ ಮೇಲ್ಮನೆ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದ್ದಾರೆ.

Vijaya Karnataka 20 Jun 2020, 9:55 pm

ಬೆಂಗಳೂರು: ಜೂನ್‌ ಅಂತ್ಯಕ್ಕೆ ವಿಧಾನ ಪರಿಷತ್‌ನ ಐದು ನಾಮನಿರ್ದೇಶಿತ ಸದಸ್ಯರ ಅವಧಿ ಮುಗಿಯುತ್ತಿರುವುದರಿಂದ ಹೈಕಮಾಂಡ್‌ ಸೂಚನೆ ಮೂಲಕವೇ ಭರ್ತಿ ಮಾಡುವುದಕ್ಕೆ ಸಿಎಂ ಬಿಎಸ್‌ ಯಡಿಯೂರಪ್ಪ ನಿರ್ಧರಿಸಿದ್ದಾರೆ.
Vijaya Karnataka Web yediyurappa


ವಿಧಾನಸಭೆಯಿಂದ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಯಡಿಯೂರಪ್ಪ ಸೂಚಿಸಿದ ಮೂವರ ಹೆಸರನ್ನು ಹೈಕಮಾಂಡ್‌ ಒಪ್ಪಿಕೊಂಡಿತ್ತು. ಒಂದು ಸ್ಥಾನವನ್ನು ಪಕ್ಷ ಸೂಚಿಸಿದವರಿಗೆ ನೀಡಲಾಗಿತ್ತು. ಈ ಮೂಲಕ ತಾವು ಕೊಟ್ಟ ಮಾತನ್ನು ಈಡೇರಿಸಿಕೊಳ್ಳುವ ಅವಕಾಶವನ್ನು ಹೈಕಮಾಂಡ್‌ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಲ್ಪಿಸಿತ್ತು.

ಈ ಹಿನ್ನೆಲೆಯಲ್ಲಿ ನಾಮನಿರ್ದೇಶನ ಅಧಿಕಾರವನ್ನು ಪಕ್ಷಕ್ಕೆ ನೀಡಲು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಐದು ಸ್ಥಾನಗಳ ಪೈಕಿ ಮಾಜಿ ಸಚಿವ ಎಚ್‌ ವಿಶ್ವನಾಥ್‌ ಅವರಿಗೆ ಒಂದು ಸ್ಥಾನ ನೀಡುವಂತೆ ಅವರು ವರಿಷ್ಠರ ಬಳಿ ಮನವಿ ಮಾಡುವ ಸಾಧ್ಯತೆ ಇದೆ. ವಿಶ್ವನಾಥ್‌ ಕೂಡ ಸಾಹಿತಿ ಕೋಟಾದಲ್ಲಿ ಮೇಲ್ಮನೆ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ಸದ್ಯಕ್ಕಿಲ್ಲ ಸಚಿವ ಸಂಪುಟ ಪುನಾರಚನೆ, ಆಕಾಂಕ್ಷಿಗಳು ಆಸೆಗೆ ಕೊರೊನಾ ತಣ್ಣೀರು

ಡಾ. ಜಯಮಾಲಾ ರಾಮಚಂದ್ರ, ಇಕ್ಬಾಲ್‌ ಅಹ್ಮದ್‌ ಸರಡಗಿ, ಅಬ್ದುಲ್‌ ಜಬ್ಬಾರ್‌, ಐವಾನ್‌ ಡಿಸೋಜಾ ಹಾಗೂ ತಿಪ್ಪಣ್ಣ ಕಮಕನೂರು ಅವರ ಅವಧಿ ಜೂನ್‌ 23ಕ್ಕೆ ಅಂತ್ಯಗೊಳ್ಳಲಿದೆ. ಇವರ ಸ್ಥಾನಕ್ಕೆ ಬಿಜೆಪಿ ಐವರನ್ನು ನಾಮನಿರ್ದೇಶನ ಮಾಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ