ಆ್ಯಪ್ನಗರ

ಚಿನ್ನದ ರಾಖಿಯಲ್ಲಿ ಅರಳಿದ ನಮೋ, ಯೋಗಿ

ಅಣ್ಣ-ತಂಗಿಯರ ಬಾಂಧವ್ಯದ ಜತೆಗೆ ಸಾಮಾಜಿಕ ಸಹೋದತರತ್ವದ ಸೂಚಕವಾಗಿಯೂ ಗಮನ ಸೆಳೆಯುತ್ತಿರುವ ರಕ್ಷಾ ಬಂಧನ ಹಬ್ಬಕ್ಕೆ ಈ ಬಾರಿ ಹೊಸ ಮೆರುಗು ಸಿಕ್ಕಿದೆ. ಗುಜರಾತ್‌ನ ವಜ್ರ ನಗರಿ ಸೂರತ್‌ನ ಜ್ಯುವೆಲ್ಲರಿ ಮಳಿಗೆಯೊಂದು ವಿಶೇಷವಾದ ರಾಖಿ ತಯಾರಿಸಿದ್ದು, ಇದರ ಮೌಲ್ಯ 50000 ರೂ.ನಿಂದ 70,000 ರೂ.!

Vijaya Karnataka 26 Aug 2018, 2:42 pm
ಸೂರತ್‌: ಅಣ್ಣ-ತಂಗಿಯರ ಬಾಂಧವ್ಯದ ಜತೆಗೆ ಸಾಮಾಜಿಕ ಸಹೋದತರತ್ವದ ಸೂಚಕವಾಗಿಯೂ ಗಮನ ಸೆಳೆಯುತ್ತಿರುವ ರಕ್ಷಾ ಬಂಧನ ಹಬ್ಬಕ್ಕೆ ಈ ಬಾರಿ ಹೊಸ ಮೆರುಗು ಸಿಕ್ಕಿದೆ. ಗುಜರಾತ್‌ನ ವಜ್ರ ನಗರಿ ಸೂರತ್‌ನ ಜ್ಯುವೆಲ್ಲರಿ ಮಳಿಗೆಯೊಂದು ವಿಶೇಷವಾದ ರಾಖಿ ತಯಾರಿಸಿದ್ದು, ಇದರ ಮೌಲ್ಯ 50000 ರೂ.ನಿಂದ 70,000 ರೂ.!

ವಿಶೇಷ ವಿನ್ಯಾಸದ ಈ ರಾಖಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಮತ್ತು ಗುಜರಾತ್‌ ಸಿಎಂ ವಿಜಯ ರೂಪಾನಿ ಅವರ ಚಿತ್ರಗಳಿವೆ. ಮತ್ತು ಈ ರಾಖಿಗಳನ್ನು 22 ಕ್ಯಾರೆಟ್‌ನ ಪರಿಶುದ್ಧ ಚಿನ್ನದಿಂದಲೇ ರೂಪಿಸಲಾಗಿದೆ. ''ಜುವೆಲ್ಲರಿಯಲ್ಲಿ 50 ರಾಖಿಗಳನ್ನು ವಿನ್ಯಾಸಗೊಳಿಸಲಾಗಿದೆ. ಅವುಗಳಲ್ಲಿ 47 ಆಗಲೇ ಮಾರಾಟವಾಗಿವೆ. ಇನ್ನಷ್ಟು ಬೇಡಿಕೆ ಬರುತ್ತಿದೆ,'' ಎನ್ನುತ್ತಾರೆ ಜುವೆಲ್ಲರಿ ಶಾಪ್‌ ಮಾಲೀಕ ಮಿಲನ್‌. ''ನಮ್ಮ ಪ್ರಧಾನಿ ಮೋದಿ, ಗುಜರಾತ್‌ ಮತ್ತು ಉತ್ತರ ಪ್ರದೇಶ ಸಿಎಂಗಳು ಉತ್ತಮ ಕೆಲಸ ಮಾಡಿದ್ದಾರೆ. ಇವರ ಕೆಲಸಗಳು ಪ್ರಪಂಚದ ಮಿಲಿಯಾಂತರ ಜನರಿಗೆ ಸ್ಫೂರ್ತಿ ನೀಡಲಿ ಎನ್ನುವುದು ನಮ್ಮ ಉದ್ದೇಶ,'' ಎನ್ನುತ್ತಾರೆ ಅವರು.


- ಲಡ್ಡುಗೆ ಚಿನ್ನ ಕವಚ -

ಬಿಜೆಪಿ ನಾಯಕರ ಚಿತ್ರವಿರುವ ರಾಖಿಯ ಜತೆಗೇ ಸೂರತ್‌ನಲ್ಲಿ ಇನ್ನೊಂದು ರಕ್ಷಾ ಬಂಧನ ವಿಶೇಷವಿದೆ. ಇಲ್ಲಿ ವಿಶೇಷ ಸಂದರ್ಭಕ್ಕಾಗಿ ಚಿನ್ನದ ಹಾಳೆಯಿಂದ ಮುಚ್ಚಿದ ಲಡ್ಡುಗಳನ್ನೂ ತಯಾರಿಸಲಾಗಿದ್ದು, ಇದರ ಬೆಲೆ ಕೇಜಿಗೆ 9000 ರೂ.!

ನರೇಂದ್ರ ಮೋದಿ ಅವರ ಚಿತ್ರವಿರುವ ರಾಖಿ ಕಟ್ಟುವುದರಿಂದ ನನ್ನ ತಮ್ಮನೂ ಅವರ ಹಾಗೆಯೇ ಮಹಾನ್‌ ಕೆಲಸ ಮಾಡುವಂತೆ ಅವರೇ ಆಶೀರ್ವಾದ ನೀಡುತ್ತಾರೆ ಎಂದು ನಾನು ನಂಬಿದ್ದೇನೆ.
- ಶ್ರದ್ಧಾ ಶಾ, ಗ್ರಾಹಕಿ

ವಾರಾಣಸಿ ಮುಸ್ಲಿಂ ಮಹಿಳೆಯರಿಂದ ಮೋದಿಗೆ ಪ್ರತಿ ವರ್ಷವೂ ರಾಖಿ ರವಾನೆ

ಉತ್ತರ ಪ್ರದೇಶದ ವಾರಾಣಸಿಯ ಮುಸ್ಲಿಂ ಮಹಿಳಾ ಪ್ರತಿಷ್ಠಾನವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸುವುದಕ್ಕಾಗಿಯೇ ವಿಶೇಷ ರಾಖಿಗಳನ್ನು ರೂಪಿಸಿದೆ. ಇಲ್ಲಿನ ಮಹಿಳಾ ತಂಡ 2013ರಲ್ಲಿ ಮೊದಲ ಬಾರಿಗೆ ರಾಖಿ ಕಳಿಸಿದ್ದು, ಈಗ ಅದು ಸಂಪ್ರದಾಯವಾಗಿ ಮುಂದುವರಿದಿದೆ. ''ಮುಸ್ಲಿಂ ಮಹಿಳಾ ಪ್ರತಿಷ್ಠಾನವು ಮೋದಿ ಅವರನ್ನು ಹಿರಿಯಣ್ಣ ಮತ್ತು ಒಬ್ಬ ತಂದೆಯಂತೆ ಗೌರವಿಸುತ್ತಿದೆ. ಹಾಗಾಗಿ ಪ್ರತಿವರ್ಷವೂ ರಾಖಿ ಕಳುಹಿಸುತ್ತಿದ್ದೇವೆ. ಅವರು ನಮ್ಮನ್ನು ರಕ್ಷಿಸುತ್ತಾರೆ ಮತ್ತು ಅಗತ್ಯ ಬಿದ್ದಾಗ ಸಹಾಯ ಮಾಡುತ್ತಾರೆ ಎನ್ನುವ ವಿಶ್ವಾಸದಿಂದ ಈ ಕೆಲಸ ಮಾಡುತ್ತಿದ್ದೇವೆ,'' ಎನ್ನುತ್ತಾರೆ ಪ್ರತಿಷ್ಠಾನದ ಸದಸ್ಯರಲ್ಲಿ ಒಬ್ಬರಾದ ನಜೀಮಾ ಅನ್ಸಾರಿ. ''ನಾವು ನಮ್ಮದೇ ಮನೆಗಳಲ್ಲಿ ಮತ್ತು ಸಮಾಜದಲ್ಲಿ ಎದುರಿಸುವ ದೌರ್ಜನ್ಯದಿಂದ ರಕ್ಷಿಸುವಂತೆ ಮೋದಿ ಅವರಿಗೆ ಮನವಿ ಮಾಡುತ್ತೇವೆ. ಅದಕ್ಕಿಂತಲೂ ಹೆಚ್ಚಾಗಿ ತ್ರಿವಳಿ ತಲಾಕ್‌ನಂಥ ಪೀಡೆಯಿಂದ ಮುಕ್ತಿ ಹೊಂದುವ ಆಶಾವಾದದಲ್ಲಿದ್ದೇವೆ,'' ಎನ್ನುತ್ತಾರೆ ಇನ್ನೊಬ್ಬ ಮಹಿಳೆ ಶಬಾನಾ ಫಾತಿಮಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ