ಬೆಳಗಾವಿ: ಪಕ್ಷದ ಕಾರ್ಯಕ್ರಮಕ್ಕೆ 500 ರೂ. ಕೊಟ್ಟು ಜನರನ್ನು ಕರೆತರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎನ್ನಲಾದ ವಿಡಿಯೋವೊಂದು ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗಾಗಿ ಬೆಳಗಾವಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಬುಧವಾರ ಪಂತ ಬಾಳೇಕುಂದ್ರಿಗೆ ಬಸ್ನಲ್ಲಿ ತೆರಳುವ ವೇಳೆ ಪಕ್ಷದ ಮುಖಂಡರೊಂದಿಗೆ ಈ ಮಾತುಕತೆ ನಡೆಸಿದ್ದು ವಿಡಿಯೋದಲ್ಲಿ ದಾಖಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ವಿಧಾನ ಪರಿಷತ್ತಿನ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಎನ್.ಎಚ್. ಕೋನರೆಡ್ಡಿ, ವಿನಯ್ ನಾವಲಗಟ್ಟಿ ಮೊದಲಾದವರು ಈ ವಿಡಿಯೋದಲ್ಲಿದ್ದು, ಬಸ್ಸಿನೊಳಗೇ ಇದ್ದವರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಏನಿದೆ ವೈರಲ್ ವಿಡಿಯೋದಲ್ಲಿ?
ಬಸ್ನೊಳಗೆ ಕುಳಿತ ನಾಯಕರು "ಜನರಿಗೆ ಇಂಟರೆಸ್ಟ್ ಇಲ್ಲ" ಎಂಬ ಲಕ್ಷ್ಮಿ ಹೆಬ್ಬಾಳಕರ್ ಮಾತನ್ನು ತುಂಡರಿಸುವ ಸಿದ್ದರಾಮಯ್ಯ,
"500 ರೂ. ಕೊಟ್ಟು ಕರ್ಕೊಂಡು ಬರಬೇಕು ಪ್ರತಿಯೊಬ್ಬರನ್ನೂ'" ಎಂದು ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ.
ಬಿಜೆಪಿಗೆ ಪ್ರತ್ಯಸ್ತ್ರ
"ಬಿಜೆಪಿಯವರು ಪಿಡಿಒಗಳ ಮೇಲೆ ಒತ್ತಡ ಹಾಕಿ, ಬಸ್ ವ್ಯವಸ್ಥೆ ಮಾಡಿ ಮೋದಿ ಕಾರ್ಯಕ್ರಮಕ್ಕೆ ಜನರನ್ನು ಕರೆಸಿದ್ದಾರೆ" ಎಂದು ಬುಧವಾರವಷ್ಟೆ ಪ್ರಜಾಧ್ವನಿ ಸಮಾವೇಶದಲ್ಲಿ ಸತೀಶ್ ಜಾರಕಿಹೊಳಿ ಆರೋಪಿಸಿದ್ದರು. ಈಗ ಸಿದ್ದರಾಮಯ್ಯ ಅವರದ್ದೆಂದು ಹೇಳಲಾದ ಈ ವಿಡಿಯೋ ಬಿಜೆಪಿ ಕೈಗೆ ಪ್ರತ್ಯಸ್ತ್ರ ಸಿಕ್ಕಂತಾಗಿದೆ. ಈ ಮೂಲಕ ಆ ವಿಡಿಯೋ ಬಳಿಸಿಕೊಂಡು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಗೆ ಟಾಂಗ್ ನೀಡುತ್ತಿದ್ದಾರೆ.
ಮೊದಲಿನಿಂದ ದುಡ್ಡು ಹಂಚುತ್ತಿದ್ದಾರೆ ಎಂದ ಸಿಎಂ
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, 'ಅವರು ಮೊದಲಿಂದಲೂ ದುಡ್ಡು ಹಂಚಿಯೇ ಜನರನ್ನು ಕರೆತರುತ್ತಿದ್ದಾರೆ. ಇದರಲ್ಲಿ ಆಶ್ಚರ್ಯವೇನಿಲ್ಲ. ಈಗ ಅವರ ಹೇಳಿಕೆ ಹೊರಬಿದ್ದಿದೆಯಷ್ಟೆ' ಎಂದಿದ್ದಾರೆ.
ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದುಡ್ಡ ಕೊಟ್ಟು ಜನರನ್ನು ಕರೆತರಬೇಕು ಎಂದಿದ್ದಾರೆ ಎಂಬ ವೀಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಬೆಳಿಗ್ಗೆಯಿಂದ ಸಾಕಷ್ಟು ವೈರಲ್ ಆಗಿದೆ. ಎಚ್.ಡಿ.ಕುಮಾರಸ್ವಾಮಿ ಅವರ ಫ್ಯಾನ್ ಪೇಜ್ಗಳಲ್ಲಿ, ಬಿಜೆಪಿ ಕಾರ್ಯಕರ್ತರ ಫೇಸ್ಬುಕ್, ಟ್ವೀಟರ್ನಲ್ಲಿ ಹಂಚಿಕೊಳ್ಳಲಾಗಿದೆ.
ವಿಡಿಯೋ ಅಲ್ಲಗೆಳೆದ ಡಿಕೆಶಿ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದುಡ್ಡ ಕೊಟ್ಟು ಜನರನ್ನು ಕರೆತರಬೇಕು ಎಂಬ ವಿಡಿಯೋ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲಾ ಸುಳ್ಳು ವಿಡಿಯೋ ಎಂದು ಅಲ್ಲಗೆಳೆದಿದ್ದಾರೆ. ಸಿದ್ದರಾಮಯ್ಯ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಜನ ಸೇರಿಸುತ್ತಿದ್ದು ಈಗೇನಾ?
ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ವಿಡಿಯೋ ಕುರಿತು ಸಾಕಷ್ಟು ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಲಕ್ಷಾಂತರ ಜನರ ಸೇರುವುದು ಅಭಿಮಾನದಿಂದ ಅಲ್ಲ. ದುಡ್ಡು ಕೊಡುತ್ತಾರೆ ಎಂಬ ಕಾರಣಕ್ಕೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ನವರು ಅಷ್ಟೊಂದು ದುಡ್ಡು ಎಲ್ಲಿಂದ ತರುತ್ತಾರೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಏನಿದೆ ವೈರಲ್ ವಿಡಿಯೋದಲ್ಲಿ?
ಬಸ್ನೊಳಗೆ ಕುಳಿತ ನಾಯಕರು "ಜನರಿಗೆ ಇಂಟರೆಸ್ಟ್ ಇಲ್ಲ" ಎಂಬ ಲಕ್ಷ್ಮಿ ಹೆಬ್ಬಾಳಕರ್ ಮಾತನ್ನು ತುಂಡರಿಸುವ ಸಿದ್ದರಾಮಯ್ಯ,
"500 ರೂ. ಕೊಟ್ಟು ಕರ್ಕೊಂಡು ಬರಬೇಕು ಪ್ರತಿಯೊಬ್ಬರನ್ನೂ'" ಎಂದು ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ.
ಬಿಜೆಪಿಗೆ ಪ್ರತ್ಯಸ್ತ್ರ
"ಬಿಜೆಪಿಯವರು ಪಿಡಿಒಗಳ ಮೇಲೆ ಒತ್ತಡ ಹಾಕಿ, ಬಸ್ ವ್ಯವಸ್ಥೆ ಮಾಡಿ ಮೋದಿ ಕಾರ್ಯಕ್ರಮಕ್ಕೆ ಜನರನ್ನು ಕರೆಸಿದ್ದಾರೆ" ಎಂದು ಬುಧವಾರವಷ್ಟೆ ಪ್ರಜಾಧ್ವನಿ ಸಮಾವೇಶದಲ್ಲಿ ಸತೀಶ್ ಜಾರಕಿಹೊಳಿ ಆರೋಪಿಸಿದ್ದರು. ಈಗ ಸಿದ್ದರಾಮಯ್ಯ ಅವರದ್ದೆಂದು ಹೇಳಲಾದ ಈ ವಿಡಿಯೋ ಬಿಜೆಪಿ ಕೈಗೆ ಪ್ರತ್ಯಸ್ತ್ರ ಸಿಕ್ಕಂತಾಗಿದೆ. ಈ ಮೂಲಕ ಆ ವಿಡಿಯೋ ಬಳಿಸಿಕೊಂಡು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಗೆ ಟಾಂಗ್ ನೀಡುತ್ತಿದ್ದಾರೆ.
ಮೊದಲಿನಿಂದ ದುಡ್ಡು ಹಂಚುತ್ತಿದ್ದಾರೆ ಎಂದ ಸಿಎಂ
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, 'ಅವರು ಮೊದಲಿಂದಲೂ ದುಡ್ಡು ಹಂಚಿಯೇ ಜನರನ್ನು ಕರೆತರುತ್ತಿದ್ದಾರೆ. ಇದರಲ್ಲಿ ಆಶ್ಚರ್ಯವೇನಿಲ್ಲ. ಈಗ ಅವರ ಹೇಳಿಕೆ ಹೊರಬಿದ್ದಿದೆಯಷ್ಟೆ' ಎಂದಿದ್ದಾರೆ.
ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದುಡ್ಡ ಕೊಟ್ಟು ಜನರನ್ನು ಕರೆತರಬೇಕು ಎಂದಿದ್ದಾರೆ ಎಂಬ ವೀಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಬೆಳಿಗ್ಗೆಯಿಂದ ಸಾಕಷ್ಟು ವೈರಲ್ ಆಗಿದೆ. ಎಚ್.ಡಿ.ಕುಮಾರಸ್ವಾಮಿ ಅವರ ಫ್ಯಾನ್ ಪೇಜ್ಗಳಲ್ಲಿ, ಬಿಜೆಪಿ ಕಾರ್ಯಕರ್ತರ ಫೇಸ್ಬುಕ್, ಟ್ವೀಟರ್ನಲ್ಲಿ ಹಂಚಿಕೊಳ್ಳಲಾಗಿದೆ.
ವಿಡಿಯೋ ಅಲ್ಲಗೆಳೆದ ಡಿಕೆಶಿ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದುಡ್ಡ ಕೊಟ್ಟು ಜನರನ್ನು ಕರೆತರಬೇಕು ಎಂಬ ವಿಡಿಯೋ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲಾ ಸುಳ್ಳು ವಿಡಿಯೋ ಎಂದು ಅಲ್ಲಗೆಳೆದಿದ್ದಾರೆ. ಸಿದ್ದರಾಮಯ್ಯ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಜನ ಸೇರಿಸುತ್ತಿದ್ದು ಈಗೇನಾ?
ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ವಿಡಿಯೋ ಕುರಿತು ಸಾಕಷ್ಟು ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಲಕ್ಷಾಂತರ ಜನರ ಸೇರುವುದು ಅಭಿಮಾನದಿಂದ ಅಲ್ಲ. ದುಡ್ಡು ಕೊಡುತ್ತಾರೆ ಎಂಬ ಕಾರಣಕ್ಕೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ನವರು ಅಷ್ಟೊಂದು ದುಡ್ಡು ಎಲ್ಲಿಂದ ತರುತ್ತಾರೆ ಎಂದು ಹಲವರು ಪ್ರಶ್ನಿಸಿದ್ದಾರೆ.